“A mother is the truest friend we have, when trials heavy and sudden fall upon us; when adversity takes the place of prosperity; when friends desert us; when trouble thickens around us, still will she cling to us, and endeavor by her kind precepts and counsels to dissipate the clouds of darkness, and cause peace to return to our hearts.”
Tuesday, 26 April 2016
Friday, 4 March 2016
ಅತ್ಯುತ್ತಮರು ಯಾರು?
ಒಂದಾನೊಂದು ಕಾಲದಲ್ಲಿ ಒಬ್ಬನಿಗೆ ಮೂವರು ಗಂಡು ಮಕ್ಕಳಿದ್ದರು. ಮೂವರೂ ವೈದ್ಯ ವೃತ್ತಿಯನ್ನಾರಿಸಿಕೊಂಡರು. ಮೂರು ಮಂದಿ ವೈದ್ಯರಾದರೂ ಕಡೆಯ ಮಗ ಜಗದ್ವಿಖ್ಯಾತನಾದ. ಯಾರ ಬಾಯಲ್ಲಿ ನೋಡಿದರು ಕೊನೆಯವನದೇ ಮಾತು. ಪ್ರಖ್ಯಾತಿಯೊಂದಿಗೆ ಅಪಾರ ಸಿರಿವಂತನೂ ಆದ. ಏಕೆಂದರೆ, ಮಿಕ್ಕೆಲ್ಲ ವೈದ್ಯರೂ ಅಸಾಧ್ಯ ಎಂದು ಕೈಬಿಟ್ಟ ರೋಗಿಗಳಿಗೂ ಅವನು ಚಿಕಿತ್ಸೆ ನೀಡುತ್ತಿದ್ದ. ಹೆಚ್ಚಿನವರು ಗುಣಮುಖರಾಗುತ್ತಿದ್ದರು. ಇದೇ ಅವನ ಪ್ರಖ್ಯಾತಿಯ ಗುಟ್ಟಾಗಿತ್ತು.
![]() |
| Image Source : Google Images |
ಇದರ ಬಗ್ಗೆ ವೈದ್ಯರ ತಂದೆಯನ್ನು ಪ್ರಶ್ನಿಸಿದಾಗ, "ನನ್ನ ಮೂವರೂ ಮಕ್ಕಳು ವೈದ್ಯ ವಿದ್ಯೆಯಲ್ಲಿ ಪಂಡಿತರೇ! ಆದರೆ ಮೂವರೂ ರೋಗಿಗಳನ್ನು ನೋಡುವ ದೃಷ್ಟಿಕೋನವೇ ಬೇರೆ. ಮೊದಲನೆಯವ ಅವನ ವಲಯದಲ್ಲಿ ಬರುವವರನ್ನು ನಿರೋಗಿಗಳಾಗಿ ಬದುಕುವುದು ಹೇಗೆ ಎಂಬ ಬಗ್ಗೆ ತಿಳಿಸಿ ಹೇಳುತ್ತಾನೆ. ಉತ್ತಮವಾದ ಆಹಾರ, ವ್ಯಾಯಾಮ, ಮನಸ್ಥಿತಿಗಳನ್ನು ಬೆಳೆಸಿಕೊಳ್ಳುವುದರಿಂದ ಮನಸ್ಸು, ದೇಹಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ತನ್ಮೂಲಕ ರೋಗಗಳನ್ನು ಬರದಂತೆ ತಡೆಗಟ್ಟಬಹುದು ಎನ್ನುವುದು ಅವನ ರೋಗ ವಿಧಾನದ ಸೂತ್ರ. ಆದರೆ, ಇದರಿಂದ ಅವನ ಉಪಸ್ಥಿತಿಯೇ ಜನರಿಗೆ ತಿಳಿದಿಲ್ಲ. ಅವನು ಅತ್ಯುತ್ತಮ ವೈದ್ಯ. ಆದರೂ ಮಂದಿ ಅವನನ್ನು ಗುರುತಿಸುವುದಿಲ್ಲ. ಅವನು ಅಜ್ಞಾತನಾಗಿಯೇ ಉಳಿದಿದ್ದರೂ ನನ್ನ ಅಭಿಮತದಂತೆ ಇವನು, ಇವನಂಥವರೇ ಮೊದಲಿನ ಸಾಲಿನ ವೈದ್ಯರು!
ಇನ್ನು ಎರಡನೆಯವನನ್ನು ನೋಡಿದಾಗ ಇವನು ರೋಗಗಳನ್ನು ಮೊದಲ ಮತ್ತು ಎರಡನೆಯ ಹಂತದಲ್ಲಿ ಗುರುತಿಸುತ್ತಾನೆ. ತಕ್ಕ ಚಿಕಿತ್ಸೆ ನೀಡುತ್ತಾನೆ. ನೋವು ಪರಿಹರಿಸುತ್ತಾನೆ. ಆದರೆ ತೀರಾ ಕೈ ಮೀರುವವರೆಗೆ ಇವನು ಕಾಯುವುದಿಲ್ಲ. ಆದುದರಿಂದ ಇವನೊಬ್ಬ ಸಾಮಾನ್ಯ ವೈದ್ಯ ಎಂದು ಹೆಸರುವಾಸಿಯಾಗಿದ್ದಾನೆ. ಹತ್ತರಲ್ಲಿ ಇವ ಹನ್ನೊಂದನೆಯವನು.
ಕಡೆಯ ಮಗ ಹಾಗಲ್ಲ. ರೋಗ ತೀರಾ ವಿಷಮಿಸುವವರೆಗೆ ಕಾದು ಅನಂತರವೇ ಚಿಕಿತ್ಸೆಗೆ ಕೈ ಹಾಕುತ್ತಾನೆ. ಅಥವಾ ರೋಗ ವಿಷಮಿಸಿದೆ ಎಂಬ ಭ್ರಮೆ ಹುಟ್ಟಿಸಿ, ರೋಗಿ ಹಾಗೂ ರೋಗಿಯ ಸಂಬಂಧಿಕರಿಗೆ ಗೊಂದಲ ಉಂಟು ಮಾಡುತ್ತಾನೆ. ಅನಂತರ ನಾನಾ ತರದಲ್ಲಿ ಚಿಕಿತ್ಸೆ ನಡೆಸುವ ದೃಶ್ಯಗಳು ಸಂಯೋಜಿಸಲ್ಪಡುತ್ತವೆ. ಕಾಣುವವರು ಮೂಗಿನ ಮೇಲೆ ಬೆರಳಿಡುವಂತೆ ಇವು ನಡೆಯುತ್ತವೆ. ಕಡೆಗೆ ರೋಗಿ ಗುಣಮುಖನಾಗುತ್ತಿರುವಾಗ ಇವನ ಕೀರ್ತಿಗಾನ ನಡೆಯುತ್ತದೆ. ಇವನು ಧನ್ವಂತರಿಯ ಅವತಾರ ಎಂಬ ಮಾತು ಹರಡುತ್ತದೆ.
ಆದರೆ ವಾಸ್ತವದಲ್ಲಿ ಇವನು ಅಧಮಾಧಮ. ಒಂದು, ಅವನ ಚಿಕಿತ್ಸೆಯ ಹಿಂದಿರುವ ಕುತ್ಸಿತಭಾವ! ಹಣ ಮತ್ತು ಕ್ಯಾತಿಯ ಕಾಮನೆಗಾಗಿ ನಡೆಸುವ ಅಧರ್ಮ! ತನ್ಮೂಲಕ ಜೀವಗಳಿಗಾಗುವ ಅನಾನುಕೂಲ ಹಾಗೂ ನೋವು. ಇವುಗಳಿಂದ ಅವನು ಖ್ಯಾತನಾದರೂ ಗಣ್ಯ ಎನಿಸಿದರೂ ಅವನು ಅಧಮಾಧಮ!
ಎರಡನೆಯವನ ಬಗ್ಗೆ ಹೆಚ್ಚೇನೂ ಹೇಳಲಿಕ್ಕಿಲ್ಲ. ಅವನೊಬ್ಬ ಸಾಮಾನ್ಯ ವೈದ್ಯ. ರೋಗ ಪತ್ತೆ ಹಚ್ಚಿ ಅದನ್ನು ನಿಧಾನಿಸುವುದು ಮಾತ್ರ ಅವನ ಕೆಲಸ. ಆದರೆ ಮೊದಲವನೆಯನೇ ಅತ್ಯುತ್ತಮ ವೈದ್ಯ ಹಾಗೂ ಅತ್ಯುತ್ತಮ ಮನುಷ್ಯ ಜೀವಿ"
![]() |
| Image Source : Google Images. |
ಈ ತತ್ವವನ್ನು ಬದುಕಿಗೆ ಅನ್ವಯಿಸಿ ನೋಡೋಣ. ಅತ್ಯುತ್ತಮ ರಾಜಕಾರಿಣಿ ಯಾರು? ದೇಶದಲ್ಲಿ ಕ್ಷೋಭೆಯುಂಟಾಗದಂತೆ, ಸರ್ವ ರೀತಿಯಲ್ಲಿ ಶಾಂತಿ ಇರುವಂತೆ ಯೋಜಿಸುವವನೇ ಉತ್ತಮ ರಾಜಕಾರಿಣಿ ಅಲ್ಲವೇ?
ಅತ್ಯುತ್ತಮ ಧರ್ಮಗುರುವ್ಯಾರು? ಯಾವುದೇ ಗೊಂದಲಗಳುಂಟಾಗದಂತೆ ಸತ್ಯ-ಧರ್ಮಗಳ ಹಾದಿಯಲ್ಲಿ ನಡೆದು, ತನ್ನವರನ್ನು ನದೆಸುವವನೆ ಉತ್ತಮ ಗುರು.
ಹೀಗೆ ರಕ್ಷಣೆ, ವಿದ್ಯಾದಾನದಿಂದ ಮೊದಲು ಮಾಡಿ ಪ್ರತಿಯೊಂದು ರಂಗಕ್ಕೂ ಈ ತತ್ವವನ್ನು ಅನ್ವಯಿಸಿ ನೋಡಿದಾಗ, ಇಂದು ನಾವು ಕಾಣುವ ಪ್ರತಿಯೊಂದು ಗೌದಲುಗಳಿಗೂ ಮೂರನೆಯ ವರ್ಗದ ಅಧಮಾಧಮರೇ ಕಾರಣ ಎಂಬ ಅರಿವಾಗುತ್ತದೆ.
Thursday, 11 February 2016
ಮಾತು ಮನೆ ಹಾಳು ಮಾಡೀತು!
ಒಂದು ಹಳ್ಳಿಯಲ್ಲಿ ಗಂಡ-ಹೆಂಡತಿ ಸುಖವಾಗಿದ್ದರು. ಮದುವೆಯಾಗಿ ಹತ್ತು ವರ್ಷ ಕಳೆದಿರಲಿಲ್ಲ. ಅನ್ಯೋನ್ಯತೆಯ ಶಿಖರದಲ್ಲಿ ವಿಹರಿಸುವ ಕಾಲವಾಗಿತ್ತು. ಗಂಡ ಬೆಳಗಾಗೆದ್ದು ಹೊಲಕ್ಕೆ ಹೋಗುತ್ತಿದ್ದ. ಹೆಂಡತಿ ರೊಟ್ಟಿ,ಪಲ್ಲೆ, ಮೊಸರು ಕಟ್ಟಿಕೊಂಡು ಮಧ್ಯಾಹ್ನ ಬುತ್ತಿ ತೆಗೆದುಕೊಂಡು ಹೊಲಕ್ಕೆ ಹೋಗುತ್ತಿದ್ದಳು. ಇಬ್ಬರೂ ಲಲ್ಲೆಯಾಡುತ್ತಾ ಊಟ ಮಾಡುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಗಂಡ ಮನೆಗೆ ಮರಳುತ್ತಿದ್ದ. ದಾರಿಯಲ್ಲಿ ಒಂದೇ ಒಂದು ಸಣ್ಣ ಗಿಳಾಸು ಹೆಂಡ ಹೊಟ್ಟೆ ಸೇರುತಿತ್ತು. ಆದರೆ ಅದರಿಂದ ಅವರ ಅನ್ಯೋನ್ಯತೆಗೇನೂ ತೊಂದರೆ ಬಂದಿರಲಿಲ್ಲ. ಎಲ್ಲಿಯವರೆಗೆಂದರೆ, ಒಂದು ದಿನ ಊರು ತಿರುಗುವ ಜೋಗಿಯೊಬ್ಬನ ಭೇಟಿಯಾಗುವ ತನಕ...
ಒಂದು ಸಂಜೆ ಹೆಂಡದಂಗಡಿಯಲ್ಲಿ ಜೋಗಿಯ ಮಾತುಕತೆ ನಡೆದಿತ್ತು. ಮಾತಿನ ಮಧ್ಯೆ ಅವನು, "ಹೆಣ್ಣು ಬರೀ ಹೆಣ್ಣೆಂದು ನಂಬಬೇಡಿ. ಅವಳಲ್ಲಿ ಮೂವತ್ತಾರು ಕಪಟ ಗುಣಗಳಿವೆ. ಸಮಯ ಬಂದರೆ ಹೆಣ್ಣು ಅದನ್ನು ಉಪಯೋಗಿಸುತ್ತಾಳೆ. ಎಂದು, ಯಾವುದಕ್ಕೆ, ಹೇಗೆ ಇವುಗಳನ್ನು ಬಳಸುತ್ತಾಳೋ ಯಾರು ಕಾಣರು" ಎಂದ. ನಮ್ಮ ರೈತನ ತಲೆಗೆ ಇದು ಬಲವಾಗಿ ನಾಟಿತು. ಸೀದಾ ಮನೆಗೆ ಬಂದ. ಹೆಂಡತಿಯ ಮುಂದೆ ನಿಂತು ಜೋಗಿ ಹೇಳಿದ ಮಾತುಗಳನ್ನ ತಿಳಿಸಿದ ಮತ್ತು ನಿನ್ನ ಮೂವತ್ತಾರು ಗುಣಗಳನ್ನು ತೋರಿಸು ಎಂದ. ಪಾಪ, ಹೆಂಡತಿಗೆ ತಲೆ-ಬುಡ ಅರ್ಥವಾಗಲಿಲ್ಲ. ಇಂಥದನ್ನು ತಾನೆಂದೂ ಕೇಳಿದ್ದಿಲ್ಲ ಎಂದಳು. ಇವನು ಕೇಳಲೇ ಇಲ್ಲ. ಅನುನಾಯಿಸಿದ, ಗದರಿದ. ಯಾವುದೂ ಕೆಲಸ ಮಾಡದಾಗ ನಾಲ್ಕು ಬಾರಿಸಿದ. ಹೆಂಡತಿ ಹೈರಾಣಾದಳು.
ಇದು ಮಾರನೆಯ ದಿನವೂ ಮುಂದುವರಿಯಿತು. ಸಂಶಯ ಭೂತ ಒಮ್ಮೆ ಒಳಹೊಕ್ಕಿತೆಂದರೆ, ಅದನ್ನು ಹೊರಹಾಕುವುದು ಬಲು ಕಷ್ಟ. ಅದು ಒಳ ಬರದಂತೆ ನೋಡಿಕೊಳ್ಳುವುದೇ ಒಳಿತು. ಹೀಗೆ ಜೋಗಿಯ ಮಾತೆಂಬ ಭೂತ ನಮ್ಮ ಈ ಸುಖಿ ಸಂಸಾರವನ್ನು ದುಃಖಿಯನ್ನಾಗಿ ಮಾಡಿತು. "ನಿನ್ನ ಮೂವತ್ತಾರು ಗುಣ ತೋರಿಸುವ ತನಕ ನಾನು ನಿನ್ನೊಂದಿಗೆ ಸುಖವಾಗಿರಲಾರೆ" ಎಂದ ಪತಿರಾಯ. ಈಗ ಹೆಂಡತಿ ಎಚ್ಚರಗೊಂಡಳು. ಹೇಗಾದರೂ ಇವನ ಮೂರ್ಖತನಕ್ಕೆ ಮದ್ದೆರೆಯಬೇಕು ಎಂದು ಯೋಚಿಸತೊಡಗಿದಳು.
ಒಂದೆರಡು ದಿನ ಕಳೆದಿರಬಹುದು. ಮಧ್ಯಾಹ್ನದ ಬುತ್ತಿ ತೆಗೆದುಕೊಂಡು ಹೊಲಕ್ಕೆ ಹೊರಟಿದ್ದಳು. ದಾರಿಯಲ್ಲಿ ಸಣ್ಣ ಕೊಳದ ತುಂಬಾ ಮೀನಿರುವುದು ಕಂಡಿತು. ಚಕ್ಕನೆ ಅವಳಿಗೊಂದು ಉಪಾಯ ಹೊಳೆಯಿತು. ನೀರಿನ ಮಡಕೆ ತುಂಬಾ ಮೀನು ಹಾಕಿಕೊಂಡು ತಮ್ಮ ಹೊಲಕ್ಕೆ ಹೋದಳು.
ಮರದ ಕೆಳಗೆ ಸಣ್ಣದೊಂದು ಗುಂಡಿ ತೋಡಿ ತಂದ ನೀರು, ಮೀನು ಸುರಿದು, ಅಣತಿ ದೂರದಲ್ಲಿ ಬುತ್ತಿ ಇಟ್ಟು ಗಂಡನನ್ನು ಕರೆದಳು. ಗಂಡ ಬರುತ್ತಿರುವಂತೆ, ಮೀನು ಕಂಡ. "ಅರೆ! ಇದೇನು, ಇಂದು ಇಲ್ಲಿ ಮೀನು" ಎಂದು ಹೆಂಡತಿಯನ್ನು ಕರೆದು ತೋರಿಸಿದ. ಅವಳು ಏನೂ ಗೊತ್ತಿಲ್ಲದವಳಂತೆ ನೀರಿನ ಮಡಕೆಯಲ್ಲಿ ಮೀನು ಹಿಡಿದು ತುಂಬಿಕೊಂಡಳು. ಗಂಡ ಸಂಜೆಯ ಉಟಕ್ಕೆ ಮೀನು ಹುರಿಡಿಡುವಂತೆ ಹೇಳಿದ.
ಹುಡುಗಿ ಮೀನು ಕರಿದು, ಅಡುಗೆ ಮನೆಯ ಅಟ್ಟದ ಮೇಲೆ ಬಚ್ಚಿಟ್ಟಳು. ಗಂಡ ಎಂದಿನಂತೆ ಸಾರಾಯಿ ಅಂಗಡಿಗೆ ಹೋಗಿ ಮೀನಿನ ಉಟಕ್ಕೆ ತಯಾರಾಗಿ ಮನೆಗೆ ಬಂದ. ತಟ್ಟೆಗೆ ಬಿದ್ದದ್ದು ಬರೀ ಬೇಳೆ,ತರಕಾರಿ ಮಾತ್ರ! ಇವನ ಪಿತ್ತ ನೆತ್ತಿಗೇರಿತು. "ಮೀನು ಎಲ್ಲಿ?" ಎಂದರೆ, "ಯಾವ ಮೀನು?" ಎಂದಳು ಹೆಂಡತಿ. ಮಾತಿಗೆ ಮಾತು ಬೆಳೆಯಿತು. ಗಂಡ ಕೈ ಎತ್ತಿದ. ಹೆಂಡತಿ ಎಂದಿಗಿಂತ ಜೋರಾಗಿ ಬೊಬ್ಬೆ ಹೊಡೆದಳು. ನೆರೆಕೆರೆಯವರು ಒಟ್ಟಾದರು. ಇವ ಪಾಪ, ಇದ್ದ ಸಂಗತಿ ತಿಳಿಸಿದ. ಕೇಳಿದ ಮಂದಿ ಬಿದ್ದು ಬಿದ್ದೂ ನಕ್ಕರು. "ಮಾವಿನಮರದ ಕೆಳಗೆ ಹೊಂಡ ಎಂದರೇನು? ಅದರಲ್ಲಿ ಭರ್ತಿ ಬಾಳೇಮೀನು ಎಂದರೇನು? ಹಗಲಿನಲ್ಲಿಯೂ ಕುಡಿದು ಕಂಡಿರಬೇಕು" ಎಂದರು. ಕಾರಣವಿಲ್ಲದೆ ಹೂವಿನಂಥ ಹುಡುಗಿಯ ಮೇಲೆ ಕೈಮಾಡುತ್ತೀಯಾ? ಎಂದು ಮೈ ಪುಡಿಯಾಗುವಷ್ಟು ಬಡಿದರು. ನಾಳೆ ಅವರ ತವರಿಗೆ ಹೇಳಿಕಳಿಸುತ್ತೇವೆ ಎಂದು ಹೆದರಿಸಿ ಹೊರಟುಹೋದರು.
ಅಂಗಳದಲ್ಲಿ ನರಳುತ್ತಾ ಬಿದ್ದವನನ್ನು ಆಸರೆ ಇತ್ತು ಮನೆ ಒಳಗೆ ಕರೆತಂದಳು ಹೆಂಡತಿ. ಬಿಸಿನೀರಿನಲ್ಲಿ ಬಟ್ಟೆ ಅದ್ದಿ ಶಾಖ ಕೊಟ್ಟಳು. ಗಾಯಗಳಿಗೆ ಮುಲಾಮು ಹಚ್ಚಿದಳು. ಮುಂದೆ ತಟ್ಟೆ ಇಟ್ಟು ಬಿಸಿಬಿಸಿ ಅನ್ನ, ಸಾರು, ಹುರಿದ ಮೀನು ಬಡಿಸಿದಳು. ಅಚ್ಚರಿಯಿಂದ ಕಣ್ಣು ಕಣ್ಣು ಬಿಟ್ಟ ಗಂಡನನ್ನು ನಸುನಗುತ್ತಾ ನೋಡಿ, "ಮೂವತ್ತಾರು ಗುಣಗಳಲ್ಲಿ ಇದು ಒಂದನೆಯದು. ಉಳಿದವುಗಳನ್ನು ನೀನು ಬೇಕೇ ಬೇಕೆಂದರೆ ಕಾಲಕ್ರಮೇಣ ತೋರಿಸುತ್ತೇನೆ. ಇರಲಿ, ಹೇಗಿತ್ತು ಮೊದಲನೆಯದು, ಖುಷಿಯಾಯಿತೆ? ಊಟ ಮಾಡಿದ ನಂತರ ಹೇಳುವಿಯುವಂತೆ" ಎಂದಳು.
ಇದು ಒಂದು ಚೆಂದದ ವಾರ್ಲೀ ಕಥೆ. ವಾರ್ಲೀ ಬುಡಕಟ್ಟು ಜನಾಂಗದಲ್ಲಿ ಹೆಣ್ಣಿಗೆ ಗೌರವ ಸ್ಥಾನವಿದೆಯಂತೆ ಅಥವಾ ಇತ್ತಂತೆ. ಅವರಲ್ಲಿ ಮಾತ್ರವಲ್ಲ, ಭಾರತೀಯ ಸಂಸ್ಕ್ರತಿಯಲ್ಲೇ ಹೆಣ್ಣನ್ನು ದೇವತೆ, ಅವಳಿಂದಲೇ ಕುಟುಂಬ, ಅವಳೇ ದೇವತೆ ಎನ್ನುತ್ತಿದ್ದ ಕಾಲವೂ ಒಂದಿತ್ತಲ್ಲ!!?
![]() |
| Image Source: Art and crafts school US |
ಒಂದು ಸಂಜೆ ಹೆಂಡದಂಗಡಿಯಲ್ಲಿ ಜೋಗಿಯ ಮಾತುಕತೆ ನಡೆದಿತ್ತು. ಮಾತಿನ ಮಧ್ಯೆ ಅವನು, "ಹೆಣ್ಣು ಬರೀ ಹೆಣ್ಣೆಂದು ನಂಬಬೇಡಿ. ಅವಳಲ್ಲಿ ಮೂವತ್ತಾರು ಕಪಟ ಗುಣಗಳಿವೆ. ಸಮಯ ಬಂದರೆ ಹೆಣ್ಣು ಅದನ್ನು ಉಪಯೋಗಿಸುತ್ತಾಳೆ. ಎಂದು, ಯಾವುದಕ್ಕೆ, ಹೇಗೆ ಇವುಗಳನ್ನು ಬಳಸುತ್ತಾಳೋ ಯಾರು ಕಾಣರು" ಎಂದ. ನಮ್ಮ ರೈತನ ತಲೆಗೆ ಇದು ಬಲವಾಗಿ ನಾಟಿತು. ಸೀದಾ ಮನೆಗೆ ಬಂದ. ಹೆಂಡತಿಯ ಮುಂದೆ ನಿಂತು ಜೋಗಿ ಹೇಳಿದ ಮಾತುಗಳನ್ನ ತಿಳಿಸಿದ ಮತ್ತು ನಿನ್ನ ಮೂವತ್ತಾರು ಗುಣಗಳನ್ನು ತೋರಿಸು ಎಂದ. ಪಾಪ, ಹೆಂಡತಿಗೆ ತಲೆ-ಬುಡ ಅರ್ಥವಾಗಲಿಲ್ಲ. ಇಂಥದನ್ನು ತಾನೆಂದೂ ಕೇಳಿದ್ದಿಲ್ಲ ಎಂದಳು. ಇವನು ಕೇಳಲೇ ಇಲ್ಲ. ಅನುನಾಯಿಸಿದ, ಗದರಿದ. ಯಾವುದೂ ಕೆಲಸ ಮಾಡದಾಗ ನಾಲ್ಕು ಬಾರಿಸಿದ. ಹೆಂಡತಿ ಹೈರಾಣಾದಳು.
ಇದು ಮಾರನೆಯ ದಿನವೂ ಮುಂದುವರಿಯಿತು. ಸಂಶಯ ಭೂತ ಒಮ್ಮೆ ಒಳಹೊಕ್ಕಿತೆಂದರೆ, ಅದನ್ನು ಹೊರಹಾಕುವುದು ಬಲು ಕಷ್ಟ. ಅದು ಒಳ ಬರದಂತೆ ನೋಡಿಕೊಳ್ಳುವುದೇ ಒಳಿತು. ಹೀಗೆ ಜೋಗಿಯ ಮಾತೆಂಬ ಭೂತ ನಮ್ಮ ಈ ಸುಖಿ ಸಂಸಾರವನ್ನು ದುಃಖಿಯನ್ನಾಗಿ ಮಾಡಿತು. "ನಿನ್ನ ಮೂವತ್ತಾರು ಗುಣ ತೋರಿಸುವ ತನಕ ನಾನು ನಿನ್ನೊಂದಿಗೆ ಸುಖವಾಗಿರಲಾರೆ" ಎಂದ ಪತಿರಾಯ. ಈಗ ಹೆಂಡತಿ ಎಚ್ಚರಗೊಂಡಳು. ಹೇಗಾದರೂ ಇವನ ಮೂರ್ಖತನಕ್ಕೆ ಮದ್ದೆರೆಯಬೇಕು ಎಂದು ಯೋಚಿಸತೊಡಗಿದಳು.
ಒಂದೆರಡು ದಿನ ಕಳೆದಿರಬಹುದು. ಮಧ್ಯಾಹ್ನದ ಬುತ್ತಿ ತೆಗೆದುಕೊಂಡು ಹೊಲಕ್ಕೆ ಹೊರಟಿದ್ದಳು. ದಾರಿಯಲ್ಲಿ ಸಣ್ಣ ಕೊಳದ ತುಂಬಾ ಮೀನಿರುವುದು ಕಂಡಿತು. ಚಕ್ಕನೆ ಅವಳಿಗೊಂದು ಉಪಾಯ ಹೊಳೆಯಿತು. ನೀರಿನ ಮಡಕೆ ತುಂಬಾ ಮೀನು ಹಾಕಿಕೊಂಡು ತಮ್ಮ ಹೊಲಕ್ಕೆ ಹೋದಳು.
ಮರದ ಕೆಳಗೆ ಸಣ್ಣದೊಂದು ಗುಂಡಿ ತೋಡಿ ತಂದ ನೀರು, ಮೀನು ಸುರಿದು, ಅಣತಿ ದೂರದಲ್ಲಿ ಬುತ್ತಿ ಇಟ್ಟು ಗಂಡನನ್ನು ಕರೆದಳು. ಗಂಡ ಬರುತ್ತಿರುವಂತೆ, ಮೀನು ಕಂಡ. "ಅರೆ! ಇದೇನು, ಇಂದು ಇಲ್ಲಿ ಮೀನು" ಎಂದು ಹೆಂಡತಿಯನ್ನು ಕರೆದು ತೋರಿಸಿದ. ಅವಳು ಏನೂ ಗೊತ್ತಿಲ್ಲದವಳಂತೆ ನೀರಿನ ಮಡಕೆಯಲ್ಲಿ ಮೀನು ಹಿಡಿದು ತುಂಬಿಕೊಂಡಳು. ಗಂಡ ಸಂಜೆಯ ಉಟಕ್ಕೆ ಮೀನು ಹುರಿಡಿಡುವಂತೆ ಹೇಳಿದ.
ಹುಡುಗಿ ಮೀನು ಕರಿದು, ಅಡುಗೆ ಮನೆಯ ಅಟ್ಟದ ಮೇಲೆ ಬಚ್ಚಿಟ್ಟಳು. ಗಂಡ ಎಂದಿನಂತೆ ಸಾರಾಯಿ ಅಂಗಡಿಗೆ ಹೋಗಿ ಮೀನಿನ ಉಟಕ್ಕೆ ತಯಾರಾಗಿ ಮನೆಗೆ ಬಂದ. ತಟ್ಟೆಗೆ ಬಿದ್ದದ್ದು ಬರೀ ಬೇಳೆ,ತರಕಾರಿ ಮಾತ್ರ! ಇವನ ಪಿತ್ತ ನೆತ್ತಿಗೇರಿತು. "ಮೀನು ಎಲ್ಲಿ?" ಎಂದರೆ, "ಯಾವ ಮೀನು?" ಎಂದಳು ಹೆಂಡತಿ. ಮಾತಿಗೆ ಮಾತು ಬೆಳೆಯಿತು. ಗಂಡ ಕೈ ಎತ್ತಿದ. ಹೆಂಡತಿ ಎಂದಿಗಿಂತ ಜೋರಾಗಿ ಬೊಬ್ಬೆ ಹೊಡೆದಳು. ನೆರೆಕೆರೆಯವರು ಒಟ್ಟಾದರು. ಇವ ಪಾಪ, ಇದ್ದ ಸಂಗತಿ ತಿಳಿಸಿದ. ಕೇಳಿದ ಮಂದಿ ಬಿದ್ದು ಬಿದ್ದೂ ನಕ್ಕರು. "ಮಾವಿನಮರದ ಕೆಳಗೆ ಹೊಂಡ ಎಂದರೇನು? ಅದರಲ್ಲಿ ಭರ್ತಿ ಬಾಳೇಮೀನು ಎಂದರೇನು? ಹಗಲಿನಲ್ಲಿಯೂ ಕುಡಿದು ಕಂಡಿರಬೇಕು" ಎಂದರು. ಕಾರಣವಿಲ್ಲದೆ ಹೂವಿನಂಥ ಹುಡುಗಿಯ ಮೇಲೆ ಕೈಮಾಡುತ್ತೀಯಾ? ಎಂದು ಮೈ ಪುಡಿಯಾಗುವಷ್ಟು ಬಡಿದರು. ನಾಳೆ ಅವರ ತವರಿಗೆ ಹೇಳಿಕಳಿಸುತ್ತೇವೆ ಎಂದು ಹೆದರಿಸಿ ಹೊರಟುಹೋದರು.
ಅಂಗಳದಲ್ಲಿ ನರಳುತ್ತಾ ಬಿದ್ದವನನ್ನು ಆಸರೆ ಇತ್ತು ಮನೆ ಒಳಗೆ ಕರೆತಂದಳು ಹೆಂಡತಿ. ಬಿಸಿನೀರಿನಲ್ಲಿ ಬಟ್ಟೆ ಅದ್ದಿ ಶಾಖ ಕೊಟ್ಟಳು. ಗಾಯಗಳಿಗೆ ಮುಲಾಮು ಹಚ್ಚಿದಳು. ಮುಂದೆ ತಟ್ಟೆ ಇಟ್ಟು ಬಿಸಿಬಿಸಿ ಅನ್ನ, ಸಾರು, ಹುರಿದ ಮೀನು ಬಡಿಸಿದಳು. ಅಚ್ಚರಿಯಿಂದ ಕಣ್ಣು ಕಣ್ಣು ಬಿಟ್ಟ ಗಂಡನನ್ನು ನಸುನಗುತ್ತಾ ನೋಡಿ, "ಮೂವತ್ತಾರು ಗುಣಗಳಲ್ಲಿ ಇದು ಒಂದನೆಯದು. ಉಳಿದವುಗಳನ್ನು ನೀನು ಬೇಕೇ ಬೇಕೆಂದರೆ ಕಾಲಕ್ರಮೇಣ ತೋರಿಸುತ್ತೇನೆ. ಇರಲಿ, ಹೇಗಿತ್ತು ಮೊದಲನೆಯದು, ಖುಷಿಯಾಯಿತೆ? ಊಟ ಮಾಡಿದ ನಂತರ ಹೇಳುವಿಯುವಂತೆ" ಎಂದಳು.
![]() |
| Image Source: National Geographic magazine |
ಇದು ಒಂದು ಚೆಂದದ ವಾರ್ಲೀ ಕಥೆ. ವಾರ್ಲೀ ಬುಡಕಟ್ಟು ಜನಾಂಗದಲ್ಲಿ ಹೆಣ್ಣಿಗೆ ಗೌರವ ಸ್ಥಾನವಿದೆಯಂತೆ ಅಥವಾ ಇತ್ತಂತೆ. ಅವರಲ್ಲಿ ಮಾತ್ರವಲ್ಲ, ಭಾರತೀಯ ಸಂಸ್ಕ್ರತಿಯಲ್ಲೇ ಹೆಣ್ಣನ್ನು ದೇವತೆ, ಅವಳಿಂದಲೇ ಕುಟುಂಬ, ಅವಳೇ ದೇವತೆ ಎನ್ನುತ್ತಿದ್ದ ಕಾಲವೂ ಒಂದಿತ್ತಲ್ಲ!!?
Tuesday, 12 January 2016
ಅಂತಃಕರಣ
Theme: All love is expansion; all selfishness is contraction. love is therefore the only law of life. He who loves lives, he who is selfish is dying . Therefore, love for love's sake, because it is law of law, just as you breathe to live.
'
ಕಡು ಲೋಭಿಯೊಬ್ಬನಿದ್ದ. ಆತುಲೈಶ್ವರ್ಯವಿದ್ದರೂ ಕೈಯೆತ್ತಿ ಚಿಕ್ಕಾಸನ್ನೂ ದಾನ ಮಾಡುತ್ತಿರಲಿಲ್ಲ. ಅವನ ಮನೆಗೆಂದೂ ಅತಿಥಿಗಳು ಬರುವ ಪದ್ಧತಿ ಇರಲಿಲ್ಲ. ಏಕೆಂದರೆ, ಮನೆಯ ಸುತ್ತ ಎತ್ತರದ ಗೋಡೆ ಕಟ್ಟಿ, ಪುಟ್ಟದೊಂದು ಬಾಗಿಲಿಟ್ಟು, ಅದಕ್ಕೆ ಬೀಗ ಜಡಿದು, ಬೀಗದ ಕೈಯನ್ನು ಸದಾ ಸೊಂಟಕ್ಕೆ ಸಿಕ್ಕಿಸಿಕೊಂಡಿರುತ್ತಿದ್ದ. ಮನೆಯಲ್ಲಿ ಎಲ್ಲರಿಗೂ ಅರ್ಧ ಹೊಟ್ಟೆಯ ಊಟ ಮಾತ್ರ! ಅಗತ್ಯವಿರುವಷ್ಟೇ ಬಟ್ಟೆಬರೆ! ಇವೆಲ್ಲದಕ್ಕೂ ಚೆಂದದ ಹೆಸರಿಟ್ಟಿದ್ದ."ಸರಳ ಬದುಕು"
ಮನೆಯವರೆಲ್ಲ ಇದರಿಂದ ಬೇಸತ್ತುಹೋಗಿದ್ದರು. ಊರಿನವರು ಎದುರೆದುರಿಗೇ "ಉಂಡ ಕೈಯಿಂದ ಕಾಗೆ ಓಡಿಸುವ ಜಿಪುಣ" ಎಂದು ಆಡಿಕೊಂಡು ನಗುತ್ತಿದ್ದರು.
ಹೆಂಡತಿ ಮಾತ್ರ ಸಮಯ ಸಿಕ್ಕಾಗಲೆಲ್ಲ, "ಸಿರಿ ಬರುವುದು ಊರಿನ ಹಿತಕ್ಕಾಗಿ, ಅಗತ್ಯವಿರುವವರಿಗೆ ಸಹಾಯ ಮಾಡಲಿಕ್ಕಾಗಿ. ನಾವು ಈ ಐಶ್ವರ್ಯದ ಕಾವಲುಗಾರರು ಮಾತ್ರ. ಊರಿನಲ್ಲಿ ತುತ್ತಿಗಾಗಿ ಪರದಾಡುವವರಿಗೆ ಅನ್ನ ಹಾಕಿದರೆ ಪರಮಾತ್ಮನಿಗೆ ತೃಪ್ತಿಯಾಗುತ್ತದೆ. ಕೂಡಿಟ್ಟು ಸತ್ತರೆ ರೌರವ ನರಕ ಪ್ರಾಪ್ತಿ ಖಂಡಿತ" ಎಂದೆಲ್ಲ ಹಿತ ಹೇಳುವ ಪ್ರಯತ್ನ ಮಾಡುತ್ತಿದ್ದಳು. ಎಲ್ಲವೂ ಬೊರ್ಕಲ್ಲ ಮೇಲೆ ಜಡಿ ಮಳೆ ಸುರಿದಂತಾಗುತ್ತಿತ್ತು.
ಒಂದು ದಿನ ಆ ಊರಿಗೆ ಪ್ರಸಿದ್ಧ ಜ್ಯೋತಿಷಿಗಳೊಬ್ಬರು ಬರುತ್ತಿದ್ದಾರೆಂದೂ ಅವರೆಂದದ್ದು ಎಂದೂ ಸುಳ್ಳಾಗಿಲ್ಲ ಎಂದೂ ಯಾರಿಂದಲೂ ಕಾಸು ಸ್ವೀಕರಿಸದೇ ಭವಿಷ್ಯ ಹೇಳುತ್ತಾರೆಂದೂ ತಿಳಿಯಿತು. ನಮ್ಮ ಜಿಪುಣನ ಕಿವಿಗೂ ಇದು ಬಿಟ್ಟು. ಕಾಸು ಕೀಳದೇ ಮುಂದಾಗುವುದನ್ನು ಹೇಳುವ ಮೂರ್ಖ ಸಿಕ್ಕಿರುವಾಗ, ತನ್ನ ಬಗ್ಗೆ ಒಂದಿಷ್ಟು ಕೇಳಿ ತಿಳಿದುಕೊಳ್ಳಬೇಕೆನಿಸಿತು. ಸರಿ, ಇವನೂ ಜ್ಯೋತಿಷಿಯಿರುವಲ್ಲಿಗೆ ಹೋದ.
ಕವಡೆ ಉರುಳಿಸಿ, ಗುಣಿಸಿ, ಭಾಗಿಸಿ, ನೋಡಿದ ಜ್ಯೋತಿಷಿ, ಜಿಪುಣನನ್ನೇ ದೀರ್ಘವಾಗಿ ದಿಟ್ಟಿಸಿದ."ಹೇಳಲೋ ಬೇಡವೋ ಎಂದು ಯೋಚಿಸುತ್ತಿದ್ದೇನೆ. ನೀನು ಕಡು ಲೋಭಿ. ಕವಡೆ ಖರ್ಚು ಮಾಡುವವನಲ್ಲ. ಇದರಿಂದ ನಿನಗೆ ರೌರವ ನರಕ ಕಾದಿದೆ. ಅದೂ ಕೇವಲ ಆರು ತಿಂಗಳಲ್ಲಿ. ಆರು ತಿಂಗಳು ಕಳೆದು ಏಳನೆಯ ತಿಂಗಳ ಬೆಳಗನ್ನು ನೀನು ಕಾಣುವುದಿಲ್ಲನಿಞ್ನ ಸಾವು ಹಾಗೂ ನರಕವಾಸ ಖಚಿತ"
ಇವನ ಜೀವವೇ ಹಾರಿಹೋಯಿತು. ಇಷ್ಟು ಕಷ್ಟದಿಂದ ಕೂಡಿಟ್ಟ ಸಿರಿ ಯಾರದ್ದೋ ಪಾಲಾಗಿ, ಅವರು ತಿಂದುಂಡು ಮೋಜು ಮಾಡುವ ಕಲ್ಪನೆಯಿಂದಲೇ ಬೆವರತೊಡಗಿದ.
ಮತ್ತೆ ಇನ್ನೊಂದು ವಿಚಾರವೂ ಅವನ ತಲೆಗೆ ಬಂತು. ಜಿಪುಣ, ಹಿಮಟ ಇತ್ಯಾದಿ ಹೆಸರು ಕೇಳಿ ಹೀನಾಯಪಡುತ್ತಿದ್ದೆ. ಒಂದಿಷ್ಟು ದಾನ ಮಾಡಿ ಒಳ್ಳೆಯ ಹೆಸರು ಗಳಿಸಿದರೆ ಹೇಗೆ? ಹಾಗೆ ದಾನದಿಂದ ನರಕವಾಸ ತಪ್ಪಲೂ ಬಹುದಲ್ಲ ಎಂದು ಯೋಚಿಸಿದ. ಸರಿ ಎನಿಸಿತು. ಕೂಡಲೇ ತೀರಾ ಬಡವರನ್ನು ಒಂದುಗೂಡಿಸಿ ಅಕ್ಕಿ, ಬೇಳೆ, ಬಟ್ಟೆ, ಒಂದಿಷ್ಟು ದುಡ್ಡು ವಿತರಿಸಿದ. ಅವರು ಸಂತೋಷದಿಂದ ಇವನನ್ನು ದೀರ್ಘಕಾಲ ಬದುಕುವಂತೆ ಹರಸಿದರು. ಒಂದು ರೀತಿಯ ವಿಚಿತ್ರ ತೃಪ್ತಿ ಎನಿಸಿತು. ಅವರ ಹಾರೈಕೆ ಕೇಳಿ ಸಾವಿನ ಹೆದರಿಕೆ ಹಿಂದೆ ಸರಿದಂತೆನಿಸಿತು. ಮತ್ತೆ ಒಂದಿಷ್ಟು ದಾನ ಮಾಡಿದ. ಇದು ಮುಂದುವರಿಯುತ್ತಿದ್ದಂತೆ ಇವನ ಖ್ಯಾತಿ ಹರಡಿತು!
ಕೊಡುಗೈ ದೊರೆ, ದಾನಿ, ಆಧುನಿಕ ಕರ್ಣ ಎಂದರು ಮಂದಿ. ನೀಡುವದರಿಂದ ಉಂಟಾಗುವ ಸುಖವೇ ಒಂದು ರೀತಿಯ ಗೀಳಾಯಿತು. ವರುಷಗಳಿಂದ ಕೂಡಿಟ್ಟದ್ದು ಹೊರಗೆ ಬಂದು, ದೀನರ ಜೋಳಿಗೆ ಸೇರಿತು. ರೌರವ ನರಕದ ಹೆದರಿಕೆ ಕಳೆಯಿತು. ಇದರೊಂದಿಗೆ ಜ್ಯೋತಿಷಿ ಹೇಳಿದ ಸಾವಿನ ಗಡುವೂ ಕಳೆಯಿತು. ಯಮ ಬರಲಿಲ್ಲ. ಕತ್ತಿಗೆ ಕುಣಿಕೆ ಬೀಳಲಿಲ್ಲ. ಜಿಪುಣನಿಗೆ ಆಶ್ಚರ್ಯವಾಯಿತು. ಇದರೊಂದಿಗೆ ಒಂದು ರೀತಿಯ ಸಂದೇಹವೂ ಉಂಟಾಯಿತು. ಸಮಜಾಯಿಷಿ ಕೇಳೋಣ ಎಂದರೆ, ಜ್ಯೋತಿಷಿ ಉರೂ ಬಿಟ್ಟು ಕೆಲವು ಕಾಲವಾಗಿತ್ತು. ದನದ ಬಲದಿಂದ ಸಾವು ದೂರವಾಯಿತೇ? ನರಕವಾಸ ತಪ್ಪುತ್ತದೆ ಎಂದರೆ ಇದೇ ಏನು? ಅಥವಾ ಭೌತಿಕ, ಮಾನಸಿಕ ಜಿಪುಣತನದಿಂದ ಒಂದು ರೀತಿಯ ನರಕವಾಸ ತನ್ನದಾಗಿರಲ್ಲವೇ? ಅದು ದೂರವಾದುದಂತೂ ಖಂಡಿತ. ಮನೆಯಲ್ಲಿನ ವಾತಾವರಣವೂ ಸುಖ, ಸಂತೋಷದಿಂದ ಕೂಡಿದೆ. ಇದೇ ಸ್ವರ್ಗವಲ್ಲವೇ? ಎಂದೆಲ್ಲ ಯೋಚನೆಗಳು ಕಾಡಿದವು. ಇವೆಲ್ಲಕ್ಕಿಂತ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚಿದಾಗ ತನ್ನೊಳಗಾಗುವ ಸಂತೋಷ, ಧನ್ಯತಾಭಾವ ಗೀಳಾಗಿ ಬದಲಾಗಿತ್ತು.! ನಿಧಾನವಾಗಿ ಮೋಹ ಕಳೆಯಿತು. ಧನಕಾಮನೆಯ ಮೋಹ ಮಾತ್ರವಲ್ಲ, ಭವವೇ ನಿಸ್ಸಾರ, ಇದಕ್ಕಿಂತ ಹಿರಿದಾದುದೇನೋ ಇದೆ ಎನಿಸಿತು. ಕಡು ಜಿಪುಣ, ಬಿಡುಗಡೆಯ ಹಾದಿಯ ಪಥಿಕನಾಗಿದ್ದ.
ವೈರಾಗ್ಯದಲ್ಲೂ ಹಲವು ರೀತಿ. ಅಭಾವ ವೈರಾಗ್ಯ, ಒಂದು ವಸ್ತುವನ್ನು ಹೊಂದುವ ಸಮರ್ಥ್ಯವಿಲ್ಲದಿದ್ದಾಗ ಉಂಟಾಗುತ್ತದೆಯಂತೆ. ಯಾರಾದರೂ ಸತ್ತದ್ದನ್ನು ಕಾಣುವಾಗ "ಬದುಕೇ ಇಷ್ಟು, ಸಾಯುವಾಗ ಖಾಲಿ ಕೈಯಿಂದ ಹೋಗುವುದೇ ಸೈ" ಎನ್ನುವುದು ಸ್ಮಶಾನ ವೈರಾಗ್ಯ. ತಡೆಯಲಾರದ ಉದರಶೂಲೆ ರೋಗಗಳನ್ನು ಸಂಕೇತಿಸುತ್ತದೆ. ರೋಗಿ, " ಬದುಕು ಸಾಕು, ತಡೆಯಲಾರೆ ನೋವುಗಳನ್ನು, ಸಾವು ಬರಲಪ್ಪಾ" ಎನ್ನುವುದು ಉದಾರ ವೈರಾಗ್ಯ. ಅತ್ಯುತ್ತಮವಾದ ನಾಲ್ಕನೆಯ ರೂಪ ಸ್ವಭಾವ ವೈರಾಗ್ಯ. ಇದು ಸ್ವಭಾವವಾಗಿ ಬರದಿದ್ದರೂ ಸಾಧನೆಯಿಂದ, ಚಿಂತನೆಯಿಂದ ಬೆಳೆಸಿಕೊಳ್ಳಬಹುದು ಎನ್ನುತ್ತಾರೆ ಬಲ್ಲವರು.
'
ಕಡು ಲೋಭಿಯೊಬ್ಬನಿದ್ದ. ಆತುಲೈಶ್ವರ್ಯವಿದ್ದರೂ ಕೈಯೆತ್ತಿ ಚಿಕ್ಕಾಸನ್ನೂ ದಾನ ಮಾಡುತ್ತಿರಲಿಲ್ಲ. ಅವನ ಮನೆಗೆಂದೂ ಅತಿಥಿಗಳು ಬರುವ ಪದ್ಧತಿ ಇರಲಿಲ್ಲ. ಏಕೆಂದರೆ, ಮನೆಯ ಸುತ್ತ ಎತ್ತರದ ಗೋಡೆ ಕಟ್ಟಿ, ಪುಟ್ಟದೊಂದು ಬಾಗಿಲಿಟ್ಟು, ಅದಕ್ಕೆ ಬೀಗ ಜಡಿದು, ಬೀಗದ ಕೈಯನ್ನು ಸದಾ ಸೊಂಟಕ್ಕೆ ಸಿಕ್ಕಿಸಿಕೊಂಡಿರುತ್ತಿದ್ದ. ಮನೆಯಲ್ಲಿ ಎಲ್ಲರಿಗೂ ಅರ್ಧ ಹೊಟ್ಟೆಯ ಊಟ ಮಾತ್ರ! ಅಗತ್ಯವಿರುವಷ್ಟೇ ಬಟ್ಟೆಬರೆ! ಇವೆಲ್ಲದಕ್ಕೂ ಚೆಂದದ ಹೆಸರಿಟ್ಟಿದ್ದ."ಸರಳ ಬದುಕು"
ಮನೆಯವರೆಲ್ಲ ಇದರಿಂದ ಬೇಸತ್ತುಹೋಗಿದ್ದರು. ಊರಿನವರು ಎದುರೆದುರಿಗೇ "ಉಂಡ ಕೈಯಿಂದ ಕಾಗೆ ಓಡಿಸುವ ಜಿಪುಣ" ಎಂದು ಆಡಿಕೊಂಡು ನಗುತ್ತಿದ್ದರು.
ಹೆಂಡತಿ ಮಾತ್ರ ಸಮಯ ಸಿಕ್ಕಾಗಲೆಲ್ಲ, "ಸಿರಿ ಬರುವುದು ಊರಿನ ಹಿತಕ್ಕಾಗಿ, ಅಗತ್ಯವಿರುವವರಿಗೆ ಸಹಾಯ ಮಾಡಲಿಕ್ಕಾಗಿ. ನಾವು ಈ ಐಶ್ವರ್ಯದ ಕಾವಲುಗಾರರು ಮಾತ್ರ. ಊರಿನಲ್ಲಿ ತುತ್ತಿಗಾಗಿ ಪರದಾಡುವವರಿಗೆ ಅನ್ನ ಹಾಕಿದರೆ ಪರಮಾತ್ಮನಿಗೆ ತೃಪ್ತಿಯಾಗುತ್ತದೆ. ಕೂಡಿಟ್ಟು ಸತ್ತರೆ ರೌರವ ನರಕ ಪ್ರಾಪ್ತಿ ಖಂಡಿತ" ಎಂದೆಲ್ಲ ಹಿತ ಹೇಳುವ ಪ್ರಯತ್ನ ಮಾಡುತ್ತಿದ್ದಳು. ಎಲ್ಲವೂ ಬೊರ್ಕಲ್ಲ ಮೇಲೆ ಜಡಿ ಮಳೆ ಸುರಿದಂತಾಗುತ್ತಿತ್ತು.
ಒಂದು ದಿನ ಆ ಊರಿಗೆ ಪ್ರಸಿದ್ಧ ಜ್ಯೋತಿಷಿಗಳೊಬ್ಬರು ಬರುತ್ತಿದ್ದಾರೆಂದೂ ಅವರೆಂದದ್ದು ಎಂದೂ ಸುಳ್ಳಾಗಿಲ್ಲ ಎಂದೂ ಯಾರಿಂದಲೂ ಕಾಸು ಸ್ವೀಕರಿಸದೇ ಭವಿಷ್ಯ ಹೇಳುತ್ತಾರೆಂದೂ ತಿಳಿಯಿತು. ನಮ್ಮ ಜಿಪುಣನ ಕಿವಿಗೂ ಇದು ಬಿಟ್ಟು. ಕಾಸು ಕೀಳದೇ ಮುಂದಾಗುವುದನ್ನು ಹೇಳುವ ಮೂರ್ಖ ಸಿಕ್ಕಿರುವಾಗ, ತನ್ನ ಬಗ್ಗೆ ಒಂದಿಷ್ಟು ಕೇಳಿ ತಿಳಿದುಕೊಳ್ಳಬೇಕೆನಿಸಿತು. ಸರಿ, ಇವನೂ ಜ್ಯೋತಿಷಿಯಿರುವಲ್ಲಿಗೆ ಹೋದ.
ಕವಡೆ ಉರುಳಿಸಿ, ಗುಣಿಸಿ, ಭಾಗಿಸಿ, ನೋಡಿದ ಜ್ಯೋತಿಷಿ, ಜಿಪುಣನನ್ನೇ ದೀರ್ಘವಾಗಿ ದಿಟ್ಟಿಸಿದ."ಹೇಳಲೋ ಬೇಡವೋ ಎಂದು ಯೋಚಿಸುತ್ತಿದ್ದೇನೆ. ನೀನು ಕಡು ಲೋಭಿ. ಕವಡೆ ಖರ್ಚು ಮಾಡುವವನಲ್ಲ. ಇದರಿಂದ ನಿನಗೆ ರೌರವ ನರಕ ಕಾದಿದೆ. ಅದೂ ಕೇವಲ ಆರು ತಿಂಗಳಲ್ಲಿ. ಆರು ತಿಂಗಳು ಕಳೆದು ಏಳನೆಯ ತಿಂಗಳ ಬೆಳಗನ್ನು ನೀನು ಕಾಣುವುದಿಲ್ಲನಿಞ್ನ ಸಾವು ಹಾಗೂ ನರಕವಾಸ ಖಚಿತ"
ಇವನ ಜೀವವೇ ಹಾರಿಹೋಯಿತು. ಇಷ್ಟು ಕಷ್ಟದಿಂದ ಕೂಡಿಟ್ಟ ಸಿರಿ ಯಾರದ್ದೋ ಪಾಲಾಗಿ, ಅವರು ತಿಂದುಂಡು ಮೋಜು ಮಾಡುವ ಕಲ್ಪನೆಯಿಂದಲೇ ಬೆವರತೊಡಗಿದ.
ಮತ್ತೆ ಇನ್ನೊಂದು ವಿಚಾರವೂ ಅವನ ತಲೆಗೆ ಬಂತು. ಜಿಪುಣ, ಹಿಮಟ ಇತ್ಯಾದಿ ಹೆಸರು ಕೇಳಿ ಹೀನಾಯಪಡುತ್ತಿದ್ದೆ. ಒಂದಿಷ್ಟು ದಾನ ಮಾಡಿ ಒಳ್ಳೆಯ ಹೆಸರು ಗಳಿಸಿದರೆ ಹೇಗೆ? ಹಾಗೆ ದಾನದಿಂದ ನರಕವಾಸ ತಪ್ಪಲೂ ಬಹುದಲ್ಲ ಎಂದು ಯೋಚಿಸಿದ. ಸರಿ ಎನಿಸಿತು. ಕೂಡಲೇ ತೀರಾ ಬಡವರನ್ನು ಒಂದುಗೂಡಿಸಿ ಅಕ್ಕಿ, ಬೇಳೆ, ಬಟ್ಟೆ, ಒಂದಿಷ್ಟು ದುಡ್ಡು ವಿತರಿಸಿದ. ಅವರು ಸಂತೋಷದಿಂದ ಇವನನ್ನು ದೀರ್ಘಕಾಲ ಬದುಕುವಂತೆ ಹರಸಿದರು. ಒಂದು ರೀತಿಯ ವಿಚಿತ್ರ ತೃಪ್ತಿ ಎನಿಸಿತು. ಅವರ ಹಾರೈಕೆ ಕೇಳಿ ಸಾವಿನ ಹೆದರಿಕೆ ಹಿಂದೆ ಸರಿದಂತೆನಿಸಿತು. ಮತ್ತೆ ಒಂದಿಷ್ಟು ದಾನ ಮಾಡಿದ. ಇದು ಮುಂದುವರಿಯುತ್ತಿದ್ದಂತೆ ಇವನ ಖ್ಯಾತಿ ಹರಡಿತು!
![]() |
| A Wrinkle in Time. Beauty is in the eye of the beholder. (Photo and caption by Aanand Joshi) |
ಕೊಡುಗೈ ದೊರೆ, ದಾನಿ, ಆಧುನಿಕ ಕರ್ಣ ಎಂದರು ಮಂದಿ. ನೀಡುವದರಿಂದ ಉಂಟಾಗುವ ಸುಖವೇ ಒಂದು ರೀತಿಯ ಗೀಳಾಯಿತು. ವರುಷಗಳಿಂದ ಕೂಡಿಟ್ಟದ್ದು ಹೊರಗೆ ಬಂದು, ದೀನರ ಜೋಳಿಗೆ ಸೇರಿತು. ರೌರವ ನರಕದ ಹೆದರಿಕೆ ಕಳೆಯಿತು. ಇದರೊಂದಿಗೆ ಜ್ಯೋತಿಷಿ ಹೇಳಿದ ಸಾವಿನ ಗಡುವೂ ಕಳೆಯಿತು. ಯಮ ಬರಲಿಲ್ಲ. ಕತ್ತಿಗೆ ಕುಣಿಕೆ ಬೀಳಲಿಲ್ಲ. ಜಿಪುಣನಿಗೆ ಆಶ್ಚರ್ಯವಾಯಿತು. ಇದರೊಂದಿಗೆ ಒಂದು ರೀತಿಯ ಸಂದೇಹವೂ ಉಂಟಾಯಿತು. ಸಮಜಾಯಿಷಿ ಕೇಳೋಣ ಎಂದರೆ, ಜ್ಯೋತಿಷಿ ಉರೂ ಬಿಟ್ಟು ಕೆಲವು ಕಾಲವಾಗಿತ್ತು. ದನದ ಬಲದಿಂದ ಸಾವು ದೂರವಾಯಿತೇ? ನರಕವಾಸ ತಪ್ಪುತ್ತದೆ ಎಂದರೆ ಇದೇ ಏನು? ಅಥವಾ ಭೌತಿಕ, ಮಾನಸಿಕ ಜಿಪುಣತನದಿಂದ ಒಂದು ರೀತಿಯ ನರಕವಾಸ ತನ್ನದಾಗಿರಲ್ಲವೇ? ಅದು ದೂರವಾದುದಂತೂ ಖಂಡಿತ. ಮನೆಯಲ್ಲಿನ ವಾತಾವರಣವೂ ಸುಖ, ಸಂತೋಷದಿಂದ ಕೂಡಿದೆ. ಇದೇ ಸ್ವರ್ಗವಲ್ಲವೇ? ಎಂದೆಲ್ಲ ಯೋಚನೆಗಳು ಕಾಡಿದವು. ಇವೆಲ್ಲಕ್ಕಿಂತ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚಿದಾಗ ತನ್ನೊಳಗಾಗುವ ಸಂತೋಷ, ಧನ್ಯತಾಭಾವ ಗೀಳಾಗಿ ಬದಲಾಗಿತ್ತು.! ನಿಧಾನವಾಗಿ ಮೋಹ ಕಳೆಯಿತು. ಧನಕಾಮನೆಯ ಮೋಹ ಮಾತ್ರವಲ್ಲ, ಭವವೇ ನಿಸ್ಸಾರ, ಇದಕ್ಕಿಂತ ಹಿರಿದಾದುದೇನೋ ಇದೆ ಎನಿಸಿತು. ಕಡು ಜಿಪುಣ, ಬಿಡುಗಡೆಯ ಹಾದಿಯ ಪಥಿಕನಾಗಿದ್ದ.
ವೈರಾಗ್ಯದಲ್ಲೂ ಹಲವು ರೀತಿ. ಅಭಾವ ವೈರಾಗ್ಯ, ಒಂದು ವಸ್ತುವನ್ನು ಹೊಂದುವ ಸಮರ್ಥ್ಯವಿಲ್ಲದಿದ್ದಾಗ ಉಂಟಾಗುತ್ತದೆಯಂತೆ. ಯಾರಾದರೂ ಸತ್ತದ್ದನ್ನು ಕಾಣುವಾಗ "ಬದುಕೇ ಇಷ್ಟು, ಸಾಯುವಾಗ ಖಾಲಿ ಕೈಯಿಂದ ಹೋಗುವುದೇ ಸೈ" ಎನ್ನುವುದು ಸ್ಮಶಾನ ವೈರಾಗ್ಯ. ತಡೆಯಲಾರದ ಉದರಶೂಲೆ ರೋಗಗಳನ್ನು ಸಂಕೇತಿಸುತ್ತದೆ. ರೋಗಿ, " ಬದುಕು ಸಾಕು, ತಡೆಯಲಾರೆ ನೋವುಗಳನ್ನು, ಸಾವು ಬರಲಪ್ಪಾ" ಎನ್ನುವುದು ಉದಾರ ವೈರಾಗ್ಯ. ಅತ್ಯುತ್ತಮವಾದ ನಾಲ್ಕನೆಯ ರೂಪ ಸ್ವಭಾವ ವೈರಾಗ್ಯ. ಇದು ಸ್ವಭಾವವಾಗಿ ಬರದಿದ್ದರೂ ಸಾಧನೆಯಿಂದ, ಚಿಂತನೆಯಿಂದ ಬೆಳೆಸಿಕೊಳ್ಳಬಹುದು ಎನ್ನುತ್ತಾರೆ ಬಲ್ಲವರು.
Tuesday, 22 December 2015
ಕಾಣುವ ದೃಷ್ಟಿಕೋನವಿದ್ದರೆ....
ತಲೆಮಾರುಗಳಿಂದ ಸಾಮರಸ್ಯದಿಂದ ಬಾಳುತಿದ್ದ ಎರಡು ಕುಟುಂಬಗಳ ನಡುವೆ ಮನಸ್ತಾಪ ಬಂತು. ಸಣ್ಣದೊಂದು ವಿಷಯಕ್ಕೆ ಶುರುವಾಗಿ ವಿಪರೀತಕ್ಕೆ ಹೋಯಿತು. ಒಂದೇ ಮನೆಯವರಂತೆ ಒಂದೇ ಸೂರಿನಡಿ ಬಾಳುತ್ತಿದ್ದವರ ಮಧ್ಯೆ ಗೋಡೆಗಳೆದ್ದವು. ಮಾತುಕತೆ ನಿಂತಿತು. ಹೊರಗೆ ಮನೆಯ ಹಿತ್ತಲಲ್ಲೂ ಬೇಲಿ ಹಾಕಲಾಯಿತು. ರಾಮ-ಲಕ್ಷ್ಮಣರಂತಿದ್ದವರು ಬದ್ಧ ವೈರಿಗಳಾದರು. ನಮ್ಮ ಅನುಕೂಲಕ್ಕೆ ಇವರನ್ನು ರಾಮ- ಲಕ್ಷ್ಮಣನರೆಂದೇ ಗುರುತಿಸೋಣ. ಏಕೆಂದರೆ, ಇದು ಸಾಮಾನ್ಯವಾಗಿ ಮನೆಮನೆಯಲ್ಲೂ ನಡೆಯುವಂಥದ್ದೆ, ವಿಶೇಷವೇನಿಲ್ಲ, ಎನಿಸುತ್ತದೆ. ಅಲ್ಲವೇ? ಹೀಗೆ ಒಂದಾಗಿದ್ದ ಮನ-ಮನೆಗಳು ಒಡೆದುಹೋದವು.
ರಾಮ ಹಿರಿಯ. ಅವನ ಪಾಲಿಗೆ ಬಂದಿದ್ದ ಹಿತ್ತಲಲ್ಲಿ ವಿಶಾಲವಾಗಿ ಬೆಳೆದು ನಿಂತ ಮಾವಿನ ಮರ ಒಂದಿತ್ತು. ರುಚಿಕರವಾದ ಮಿಡಿಗಳು ಮರದ ತುಂಬಾ ತೊನೆಯುತ್ತಿದ್ದವು. ಒಂದು ದಿನ ಬೆಳೆಗ್ಗೆದ್ದು ನೋಡಿದರೆ ಕೆಲವು ಮಿಡಿಗಳು ಮಾಯವಾಗಿದ್ದು ರಾಮನ ಗಮನಕ್ಕೆ ಬಂತು. ಇದು ಲಕ್ಷ್ಮಣನ ಕಡೆಯವರದ್ದೇ ಕೆಲಸ ಎಂದು ಹಲ್ಲು ಕಡಿದ. ಆದರೆ ಯಾವುದೇ ಆಧಾರವಿಲ್ಲದೆ ಅವರನ್ನು ದೋಷಿಗಳು ಎನ್ನಲಾಗದಲ್ಲ! ಹೇಗಾದರೂ ಮಾಡಿ ಕಳ್ಳತನ ನಡೆಯುವಾಗಲೇ ಕಳ್ಳನನ್ನು ಹಿಡಿದು ಹಾಕಬೇಕು ಎಂದು ನಿರ್ಧರಿಸಿದ.
ಕೆಲವು ದಿನಗಳು ಕಳೆದವು. ಲಕ್ಷ್ಮಣನ ಮೊಮ್ಮಕ್ಕಳಿಗೆ ರಾಮನ ಪತ್ನಿ ಸಂಜೆ ಸ್ತ್ರೋತ್ರಗಳನ್ನು ಕಲಿಸುವುದಿತ್ತು. ಬೆಳದಿಂಗಳ ರಾತ್ರಿ ಕಥೆ ಹೇಳುತ್ತಾ ಕೈತುತ್ತು ಹಾಕುವುದಿತ್ತು. ರಾಮನ ಪತ್ನಿಗೆ ಕಾಲು ಉಳುಕಿದಾಗ ಲಕ್ಷ್ಮಣನ ಸೊಸೆ ಎಣ್ಣೆ ನೀವಿ , ಬಿಸಿ ತೌಡಿನ ಶಾಖ ಕೊಡುತ್ತಿದ್ದಳು. ಇವೆಲ್ಲದರ ನೆನಪಾಗುತಿತ್ತು ಎರಡೂ ಕುಟುಂಬದವರಿಗೆ. ಮಕ್ಕಳಂತೂ ಅತ್ತು, ಗೋಳಾಡಿ ಇವರ ಮನೆಗೆ ಓಡಿಬರುತ್ತಿದ್ದವು. ರಾಮನನ್ನು ಕಂಡ ಕೂಡಲೇ, "ಅಜ್ಜಾ, ನಮ್ಮನ್ನು ಕರೆದುಕೋ" ಎಂದು ಹಟ ಹಿಡಿಯುತ್ತಿದ್ದವು. ಇವನ ಕಣ್ಣು ಹನಿಯುತ್ತಿತ್ತು. ಲಕ್ಷ್ಮಣನ ಸೊಸೆ, ಪರಮೋಶಿಯಲ್ಲಿ ಎಂಬಂತೆ ಮಕ್ಕಳನ್ನು ಇವರ ಮನೆಗೆ ಕಳಿಸುತ್ತಿದ್ದಳು.
ಇಷ್ಟಾದರೂ 'ಅಹಂಕಾರ' ಇವರನ್ನು ಒಂದಾಗಲು ಬಿಡುತ್ತಿರಲಿಲ್ಲ. ಒಂದು ಮಧ್ಯಾಹ್ನ ಸುಡುಬಿಸಿಲಿನಲ್ಲಿ ರಾಮ ಹೊಲದಿಂದ ಮನೆಗೆ ಮರಳುತಿದ್ದ. ಬೇಲಿಯ ಪಕ್ಕದಲ್ಲಿ ಪುಟ್ಟ ಬುಟ್ಟಿಯಲ್ಲಿ ಆಗ ತಾನೇ ಕೊಯ್ದ ಮಾವಿನ ಮಿಡಿಗಳಿರುವುದು ರಾಮನ ಕಣ್ಣಿಗೆ ಬಿಟ್ಟು. "ಹೋ, ಈಗ ಕಳ್ಳನನ್ನು ಹಿಡಿಯಬಹುದು, ಸೀದಾ ಪೊಲಿಸಿಸರನ್ನು ಕರೆಸುತ್ತೇನೆ. ಅದಕ್ಕೂ ಮೊದಲು ಕಳ್ಳನಿಗೆ ಹುಣಸೆ ಬರಲಿನಿಂದ ನಾಲ್ಕು ಹೊಡೆಯುತ್ತೇನೆ. ಜೀವಮಾನ ಪೂರ್ತಿ ಪಾಠ ಕಳಿಸುತ್ತೇನೆ" ಎಂದುಕೊಂಡು ರಾಮ ಮರದ ಮರೆಯಲ್ಲಿ ಅಡಗಿದ.
ಐದು ನಿಮಿಷದಲ್ಲಿ ಲಕ್ಷ್ಮಣನ ತುಂಬು ಗರ್ಬಿಣಿ ಸೊಸೆ ಕಾಗದ ತುಂಡಿನಲ್ಲಿ ಉಪ್ಪು. ಖಾರ ಹಿಡಿದುಕೊಂಡು ಬಂದಳು. ಮಾವಿನಕಾಯಿಗಳಿದ್ದ ಬುಟ್ಟಿಯತ್ತ ಬರುತ್ತಿರುವಂತೆ ರಾಮ ಅಡಗಿದ ಕಡೆಯಿಂದ ಹೊರಗೆ ಬಂದ. ಸೊಸೆಯ ಮುಖದ ಬಣ್ಣ ಬದಲಾಯಿತು. ಹೆದರಿಕೆಯಿಂದ ಸಣ್ಣಗೆ ನಡುಗತೊಡಗಿದಳು. ಕೈಯಲ್ಲಿದ್ದ ಖಾರದ ಕಾಗದ ನೆಲಕ್ಕೆ ಬಿತ್ತು. "ಹುಳಿಮಾವು ತಿನ್ನುವ ಆಸೆ ತಡೆಯಲಾಗಲಿಲ್ಲ" ಎಂದಳು ಸಣ್ಣ ಧ್ವನಿಯಲ್ಲಿ, ರಾಮ ಒಂದು ನಿಮಿಷ ಅವಳನ್ನೇ ದಿಟ್ಟಿಸಿ ನೋಡಿದ. "ಏನು ಸಾಧಿಸಿದೆವು ಈ ದ್ವೇಷದಿಂದ? ಈ ಹುಡುಗಿ ಈ ಹಿಂದೆ ನಿರಾಳವಾಗಿ ಯಾವುದೇ ಹೆದರಿಕೆ ಇಲ್ಲದೆ, ಕಾಯಿ ಕಿತ್ತು ಉಪ್ಪು, ಖಾರ ಸವರಿ, ನಮಗೂ ತಿನ್ನಿಸಿ, ತಾನೂ ಸಂತೋಷಪಡುತ್ತಿದ್ದವಳು. ಈ ಸುಡುಬಿಸಿಲಿನಲ್ಲಿ ಕಳ್ಳತನದಿಂದ ಕಾಯಿ ತಿನ್ನಲು ಬಂದಿದ್ದಾಳೆ. ಛೇ! ಎಂತ ಮೂರ್ಖತನ ಮಾಡಿದೆ. ಅವನೇನೋ ಕಿರಿಯ, ಹಿರಿಯನಾಗಿ ನಾನು ಹೀಗೆ ಮಾಡಿದೆನಲ್ಲಾ?" ಎಂದು ಯೋಚಿಸಿದ ನೋವಿನಿಂದ.
ಬಗ್ಗಿ ಬುಟ್ಟಿಯನ್ನೆತ್ತಿ ಅವಳ ಕೈಯಲ್ಲಿರಿಸಿದ. "ನಾಳೆಯೂ ಬಾ ತಾಯೀ, ಈ ಮರ, ತೋಟ ನಿನ್ನದೇ. ಬೇಕುಬೇಕಾದಷ್ಟು ಕಾಯಿ, ಹಣ್ಣು ತೆಗೆದುಕೋ. ಮತ್ತೆ ನನ್ನ ಮೊಮ್ಮಗ ಜೊಲ್ಲು ಸುರಿಸಬಾರದಲ್ಲ?" ಎಂದ ನಗುತ್ತಾ

ಮಾರನೆಯ ದಿನ ಬೆಳಿಗ್ಗೆ ತೋಟದ ಮಧ್ಯದ ಬೇಲಿ ಮಾಯವಾಗಿತ್ತು. ಲಕ್ಷ್ಮಣ ಮೊಮ್ಮಕ್ಕಳ ಕೈಹಿಡಿದುಕೊಂಡು ಇವರ ಹೊಸ್ತಿಲಲ್ಲಿ ನಿಂತಿದ್ದ.
ದ್ವೇಷಕ್ಕೆ ಯಾವುದೇ ಸೂಕ್ತ ಕಾರಣ ಬೇಕಿಲ್ಲ. ಯಃಕಶ್ಚಿತ್ ಅಸೂಯೆಯೇ ಸಾಕು, ಅಹಂಕಾರವೇ ಸಾಕು. ನಾವು ನೆನೆಸಿದಂತೆ/ ಬಯಸಿದಂತೆ ನಡೆಯದಿದ್ದರೂ ಸಾಕು. ದ್ವೇಷದ ಬೀಜ ಬಿದ್ದು, ಅದು ಪ್ರಜ್ವಲಿಸುತ್ತಾ ದ್ವೇಷಿಸುವವನನ್ನು ಮೊದಲು ಸುಟ್ಟು ಅನಂತರ ಹೊರಗೆ ಹರಡುತ್ತದೆ. ಮತ್ತಿದಕ್ಕೆ ಆಜ್ಯ ಬೀಳುತ್ತಲೇ ಹೋಗುತ್ತದೆ. ಏಕೆಂದರೆ, ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ, "ಕ್ರೋಧಾಧ್ಬವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ"
Friday, 6 November 2015
ದುಃಖವೇ ಸುಖದ ಮೊದಲ ಸೋಪಾನ
ವೈರಾಗ್ಯ ಶತಕ, ನೀತಿಶತಕ, ಶೃಂಗಾರ ಶತಕಗಳೆಂಬ ಕೃತಿಗಳ ಕರ್ತೃ ರಾಜಾ ಭರ್ತೃಹರಿ. . ಇವನು ಮಾಳವ ದೇಶದ ರಾಜನಾಗಿದ್ದ. ಫಲವತ್ತಾಗಿದ್ದ ವಿಸ್ತಾರ ಭೂಪ್ರದೇಶ, ಅವನನ್ನು ಗೌರವಿಸುವ ಪ್ರಜೆಗಳು,ಬುದ್ಧಿವಂತ ಮಂತ್ರಿವರ್ಗ, ಶೂರ ಸೇನೆ....ಹೀಗೆ ಸರ್ವ ರೀತಿಯಲ್ಲೂ ಸಮೃದ್ಧ ದೇಶದ ಅಧಿಪತಿಯಾಗಿದ್ದ. ಇವನ ಪತ್ನಿ ಲೋಕೋತ್ತರ ಸುಂದರಿ ಪಿಂಗಳಾ. ಸ್ವರ್ಗಲೋಕದಿಂದ ಧರೆಗಿಳಿದು ಬಂದಿರುವಳೋ ಎಂಬಂಥ ಅದ್ಭುತ ಸೌಂದರ್ಯ ಇವಳದು. ರಾಜಾ ಭತೃಹರಿಗೆ ಇವಳಲ್ಲಿ ಹುಚ್ಚು ಎನ್ನಬಹುದಾದಷ್ಟು ಮೋಹ. ಇವಳು ಅವನ ಬದುಕಿನ ಕೇಂದ್ರವಾಗಿದ್ದಳು ಎಂದರೆ ಸರಿಯಾದೀತು. ಸದಾ ಅಂತಃಪುರದಲ್ಲಿ ಇವಳೊಂದಿಗೆ ಸಂಗೀತ,ನೃತ್ಯ,ಮಧುಪಾನಗಳೊಂದಿಗೆ ನಿರತನಾಗಿರುತ್ತಿದ್ದ. ಪಿಂಗಳೆಯ ಮಾತೇ ಅವನಿಗೆ ವೇದವಾಕ್ಯವಾಗಿತ್ತು. ತತ್ತ್ವಶಃ ಪಿಂಗಳೆಯೇ ರಾಜ್ಯದ ಆಡಳಿತ ನಡೆಸುತ್ತಿದ್ದಳು ಎಂದರೆ ಸರಿಯಾದೀತು!
ಹೀಗೆ ಭೋಗಮಾಯಾವಶನಾಗಿದ್ದ ರಾಜನಿಗೆ ಒಂದು ಅಪರೂಪದ ಹಣ್ಣು ಉಡುಗರೆಯಾಗಿ ಬಂತು. ಅದೊಂದು ಅಪರೂಪದ,ವಿಶಿಷ್ಟ ಶಕ್ತಿಗಳಿಂದ ಕೂಡಿದ ಹಣ್ಣಾಗಿತ್ತು. ಅದನ್ನು ತಿಂದವರು ನಿರೋಗಿಗಳು,ಪೂರ್ಣಾಯುಷಿಗಳು ಆಗುತ್ತಿದ್ದರು. ಹಿಮಾಲಯದ ತಪ್ಪಲಲ್ಲಿ ಬೆಳೆವ ಈ ಹಣ್ಣನ್ನು ಅಲ್ಲಿಂದ ಬಂದ ಸಂನ್ಯಾಸಿಗಳು ರಾಜನಿಗೆಂದೇ ತಂದಿದ್ದರು. ಸ್ವೀಕರಿಸಿದ ರಾಜನಿಗೆ ಒಂದು ಯೋಚನೆ ಬಂತು. ತಾನು ನೀರೋಗಿಯೂ ಪೂರ್ಣಾಯುಷಿಯೂ ಆಗುತ್ತೇನೆ ಸರಿ. ಆದರೆ, ತನ್ನ ಮನದನ್ನೆ ಪಿಂಗಳೆ,ವೃದ್ಧೆ, ರೋಗಿಯಾಗಿ ಸಾಯುತ್ತಾಳೆ. ಅನಂತರ ತಾನು ಬದುಕಿರುವುದೆಂತು? ಆದುದರಿಂದ ಈ ಹಣ್ಣನ್ನು ಅವಳು ತಿನ್ನುವುದೇ ಸರಿ ಎಂದುಕೊಂಡು ಮತ್ತು ಅವಳಿಗೆ ಹಣ್ಣನ್ನು ಉಡುಗೊರೆಯಾಗಿ ನೀಡಿದ.
ಪಿಂಗಳೆಗೆ ರಾಜನ ಮೇಲೆ ಗೌರವವೇನೋ ಇತ್ತು, ಆದರೆ ಪ್ರೇಮವಿರಲಿಲ್ಲ. ಮಹಾರಾಣಿಯ ಪದವಿ ತರುವ ಅಧಿಕಾರ,ಸುಖಭೋಗಗಳಿಗಾಗಿ ಅವಳು ಭತೃಹರಿಯೊಂದಿಗೆ ಇದ್ದಳು. ಅಷ್ಟೇ. ಅವಳ ಪ್ರೇಮಿ ಅಶ್ವ ಶಾಲೆಯ ಅಶ್ವಪಾಲಕನಾಗಿದ್ದ!. ಪಿಂಗಳೆ ತನ್ನ ಪತಿ ಮಧುಪಾನದಿಂದ ಮತ್ತನಾಗಿ ಬೋಧ ಕಳೆದುಕೊಂಡಾಗ,ಗುಟ್ಟಿನಲ್ಲಿ ತನ್ನ ಪ್ರಿಯಕರನನ್ನು ಸೇರುತ್ತಿದ್ದಳು. ತನಗೆ ಪ್ರಾಣಕ್ಕಿಂತ ಪ್ರಿಯನಾಗಿದ್ದ ಅವನಿಗೆ ಈ ಹಣ್ನನ್ನವಳು ನೀಡಿದಳು.
ಈ ಅಶ್ವಪಾಲಕನಿಗೆ ಆ ಊರಿನ ವೇಶ್ಯೆಯ ಮೇಲೆ ಮೋಹ! ಪಿಂಗಳೆಯಿಂದ ಸಿಗುವ ದುಡ್ಡು ಕಾಸಿಗಾಗಿ ಅವಳನ್ನು ಒಲೈಸುತ್ತಿದ್ದರೂ, ಅವನ ಪ್ರೇಮ ವೈಶ್ಯೆಯ ಮೇಲಿತ್ತು. ಅವನು ಅವಳಿಗೆ ಪಿಂಗಳೆಯಿಂದ ಪಡೆದ ಹಣ್ಣನ್ನು ನೀಡಿದ. ವೇಶ್ಯೆ ಪರಮ ಸಾಧ್ವಿ. ಕುಲದಿಂದ ವೇಶ್ಯಾವೃತ್ತಿಯಲ್ಲಿದ್ದರೂ, ಅದನ್ನು ಧರ್ಮದಿಂದ ಪಾಲಿಸುತ್ತಿದ್ದಳು. "ಭಗವಂತಾ, ಮುಂದಿನ ಜನ್ಮದಲ್ಲಾದರೂ ನಿನ್ನ ಪಾದದ ಧೂಳಾಗಿ ಜನ್ಮ ನೀಡು. ಇಂಥ ಹೀನ ವೃತ್ತಿಯಿಂದ ಪಾಪಲೇಪವಾಗದಂತೆ ನನ್ನನ್ನು ನಡೆಸು" ಎಂದು ಬೇಡುತ್ತಿದ್ದಳು. ಅವಳ ಈ ಮನೋಭಾವನೆಯಿಂದಲೇ ಅಶ್ವಪಾಲಕ ಅವಳಿಗೆ ಮರುಳಾಗಿದ್ದ.
ಹಣ್ಣಿನ ವಿಶೇಷ ಗುಣಗಳ ಬಗ್ಗೆ ತಿಳಿಯುತ್ತಲೇ ಅವಳಿಗೆ ಈ ಹಣ್ಣು ಈ ದೇಶದ ರಾಜನಿಗೆ ಸಲ್ಲಬೇಕು ಎನಿಸಿತು. ಪ್ರಜಾವತ್ಸಲನಾದ ಅವನಿಗೆ ಪೂರ್ಣಾಯುಸ್ಸಿನ ಹಕ್ಕು ಎಂದುಕೊಂಡು ಸೀದಾ ಅರಮನೆಗೆ ಬಂದು ಮಹಾರಾಜ ಭತೃಹರಿಯ ಮುಂದೆ ಹಣ್ಣನ್ನಿಟ್ಟಳು. ಹಣ್ಣನ್ನು ನೋಡುತ್ತಲೇ ರಾಜನಿಗೆ ಅದರ ಗುರುತು ಸಿಕ್ಕಿತು. ತನಗೆ ಸಾಧುಗಳು ನೀಡಿದ ಹಣ್ಣಿದು. ರಾಣಿ ಪಿಂಗಳೆಗೆ ನೀಡಿದ್ದು, ಈ ವೈಶ್ಯೆಯ ಕೈಗೆ ಬಂದದ್ದೆಂತು?ಎಂದು ಆಶ್ಚರ್ಯಗೊಂಡ.
ವಿಚಾರಿಸಲಾಗಿ ಅಶ್ವಪಾಲಕನಿಂದ ಸಿಕ್ಕಿತು ಎಂದು ತಿಳಿಯಿತು. ಅವನನ್ನು ಕರೆಸಿ ಪ್ರಶ್ನಿಸಿದರೆ, ಪಿಂಗಳೆಯಿಂದ ಎಂದು ತಿಳಿಯಿತು. ರಾಜನಿಗೆ ಆಘಾತವಾಯಿತು. ಪ್ರಾಣಕ್ಕಿಂತ ಪ್ರಿಯಳೆಂದು ಭಾವಿಸಿದ ಹೆಣ್ಣು ತನ್ನವಳಲ್ಲ! ಹಾಗಾದರೆ ತನ್ನದೆಂಬುದು ಯಾವುದು?ಎಂಬ ಪ್ರಶ್ನೆ ಉದಯಿಸಿತು. ಅನ್ನಾಹಾರಾಗಳನ್ನು ದೂರ ಮಾಡಿದ. ಏಕಾಂತದಲ್ಲಿ ಧ್ಯಾನಮಗ್ನನಾದ. ಜನ್ಮಾಂತರಗಳ ನೆನಪು ಮರುಕಳಿಸಿತು. ಸತ್ಯದರ್ಶನವಾಯಿತು. ಯಾವುದು ತಾನಲ್ಲ,ತನ್ನದಲ್ಲ. ಒಂದು ಜನ್ಮದ ಸಂಭಂಧಗಳನ್ನೇ ಶಾಶ್ವತ ಎಂದು ಭ್ರಮಿಸಿ,ಜೀವಿ,ನಾನಾ ರೀತಿಯ ಬಂಧನಗಳನ್ನು ಸೃಷ್ಟಿಸುತ್ತಾನೆ. ಜೇಡ ತಾನೇ ಹೆಣೆದ ಬಲೆಯಲ್ಲಿ ಬಂಧಿಯಾಗುವಂತೆ,ತಾನೇ ತನ್ನ ಕರ್ಮಬಂಧನಗಳಲ್ಲಿ ಸೆರೆಯಾಗುತ್ತಾನೆ. ಕನಿಷ್ಠ ತನ್ನ ಕಣ್ಣು ತೆರೆಯಿತು. ವಾಸ್ತವದ ದರ್ಶನವಾಯಿತು. ಪಿಂಗಳೆ ಗುರುವಾಗಿ ಬಂದಳು,ಎಂದುಕೊಂಡು,ದೇಶ-ಕೋಶ ತ್ಯಜಿಸಿದ.
ಪರಮ ವೈರಾಗ್ಯದಿಂದ ಸಂನ್ಯಾಸ ಸ್ವೀಕರಿಸಿದ. ಅಪೂರ್ವ ಗ್ರಂಥಗಳನ್ನು ರಚಿಸಿದ! ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ ವಿಧಿಯನ್ನು ಹಳಿಯುತ್ತೇವೆ. ಇಂಥ ಸ್ಥಿತಿಯನ್ನು "ತಂದಿಟ್ಟ" ಭಗವಂತನನ್ನು ದೂರುತ್ತೇವೆ. ಇದು ತಮಗೆ ಸರಿಯಾದುದಲ್ಲ ಎನ್ನುತ್ತಾ ಮತ್ತಷ್ಟು ಗೊಂದಲಿಸುತ್ತೇವೆ. ಸಂಕಷ್ಟಗಳು ಮಾಯೆಯ ಪರದೆ ಸರಿಸುವ "ಹೇತು"ಮಾತ್ರ ಎನ್ನುವುದು ಮರೆಯುತ್ತೇವೆ. ಇವು ನಿಜವಾದ ಅರ್ಥದಲ್ಲಿ "ಭಗವಂತ"ನ "ವರ","ಆಶೀರ್ವಾದ".
ಮಹಾಭಾರತದ ಯುದ್ಧ ಮುಗಿದು ಕೌರವ ಸಂಹಾರವಾಗಿ ಧರ್ಮರಾಯನಿಗೆ ಸಿಂಹಾಸನ ಲಭಿಸಿ ಪಟ್ಟಾಭಿಷೇಕವಾಯಿತು. ಕರ್ತವ್ಯ ಮುಗಿಸಿದ ಶ್ರೀ ಕೃಷ್ಣ ಪರಮಾತ್ಮ ದ್ವಾರಕೆಗೆ ಹೊರಟ. ರಾಜಮಾತೆ ಕುಂತಿ ಕಣ್ಣೀರು ಹರಿಸುತ್ತಾ ಒಂದು ಕಡೆ ನಿಂತಿದ್ದಳು. ಕೃಷ್ಣ, "ತಾಯೇ, ನೀನೀಗ ರಾಜಮಾತೆ! ನಿನ್ನ ಕಷ್ಟಗಳೆಲ್ಲಾ ಕೊನೆಯಾದವು. ಇನ್ನೂ ಏಕೆ ದುಃಖಿಸುತ್ತಿ?" ಎಂದು ಕೇಳಿದ. ಕುಂತಿಯ ಉತ್ತರ ಇಂತಿತ್ತು, "ಕೃಷ್ಣಾ,ಕಷ್ಟಗಳು ಸಾಲುಗಟ್ಟಿ ಬರುತ್ತಿರುವಾಗ, 'ಕೃಷ್ಣಾ' 'ಕೃಷ್ಣಾ' ಎಂದು ಮೊರೆ ಇಡುತ್ತಿದ್ದೆ. ಕಾಮ್ಯ ಭಕ್ತಿಯಿಂದಲೇ ಇರಲಿ, ದಿನದಲ್ಲಿ ನೂರು ಬಾರಿ ನಿನ್ನ ನೆನಪಾಗುತ್ತಿತ್ತು. ಇನ್ನೂ ರಾಜಮಾತೆಯ ಸ್ಥಾನದಲ್ಲಿ ಕಷ್ಟವೆಂಬುದೇ ಇಲ್ಲವೆಂದಾದಾಗ ನಿನ್ನ ನೆನಪಾಗುವುದೇ? ನಿನ್ನ ನಾಮಸ್ಮರಣೆ ಬರುವುದೇ? ಕೃಷ್ಣಾ, ನಿನ್ನ ಭವಹರಿಯುವುದೇ?" ಎಂದು ಪ್ರಶ್ನಿಸಿದಳು.
ಭವದುಃಖವನ್ನು ಧನಾತ್ಮಕವಾಗಿ ಪರಿಶೀಲಿಸಿದಾಗ ದುಃಖ ದುಃಖವೇ ಅಲ್ಲ. ಸುಖದ ಮೊದಲ ಸೋಪಾನ ಎಂಬುದು ಅರಿವಾಗುತ್ತದೆ.
ಹೀಗೆ ಭೋಗಮಾಯಾವಶನಾಗಿದ್ದ ರಾಜನಿಗೆ ಒಂದು ಅಪರೂಪದ ಹಣ್ಣು ಉಡುಗರೆಯಾಗಿ ಬಂತು. ಅದೊಂದು ಅಪರೂಪದ,ವಿಶಿಷ್ಟ ಶಕ್ತಿಗಳಿಂದ ಕೂಡಿದ ಹಣ್ಣಾಗಿತ್ತು. ಅದನ್ನು ತಿಂದವರು ನಿರೋಗಿಗಳು,ಪೂರ್ಣಾಯುಷಿಗಳು ಆಗುತ್ತಿದ್ದರು. ಹಿಮಾಲಯದ ತಪ್ಪಲಲ್ಲಿ ಬೆಳೆವ ಈ ಹಣ್ಣನ್ನು ಅಲ್ಲಿಂದ ಬಂದ ಸಂನ್ಯಾಸಿಗಳು ರಾಜನಿಗೆಂದೇ ತಂದಿದ್ದರು. ಸ್ವೀಕರಿಸಿದ ರಾಜನಿಗೆ ಒಂದು ಯೋಚನೆ ಬಂತು. ತಾನು ನೀರೋಗಿಯೂ ಪೂರ್ಣಾಯುಷಿಯೂ ಆಗುತ್ತೇನೆ ಸರಿ. ಆದರೆ, ತನ್ನ ಮನದನ್ನೆ ಪಿಂಗಳೆ,ವೃದ್ಧೆ, ರೋಗಿಯಾಗಿ ಸಾಯುತ್ತಾಳೆ. ಅನಂತರ ತಾನು ಬದುಕಿರುವುದೆಂತು? ಆದುದರಿಂದ ಈ ಹಣ್ಣನ್ನು ಅವಳು ತಿನ್ನುವುದೇ ಸರಿ ಎಂದುಕೊಂಡು ಮತ್ತು ಅವಳಿಗೆ ಹಣ್ಣನ್ನು ಉಡುಗೊರೆಯಾಗಿ ನೀಡಿದ.
ಪಿಂಗಳೆಗೆ ರಾಜನ ಮೇಲೆ ಗೌರವವೇನೋ ಇತ್ತು, ಆದರೆ ಪ್ರೇಮವಿರಲಿಲ್ಲ. ಮಹಾರಾಣಿಯ ಪದವಿ ತರುವ ಅಧಿಕಾರ,ಸುಖಭೋಗಗಳಿಗಾಗಿ ಅವಳು ಭತೃಹರಿಯೊಂದಿಗೆ ಇದ್ದಳು. ಅಷ್ಟೇ. ಅವಳ ಪ್ರೇಮಿ ಅಶ್ವ ಶಾಲೆಯ ಅಶ್ವಪಾಲಕನಾಗಿದ್ದ!. ಪಿಂಗಳೆ ತನ್ನ ಪತಿ ಮಧುಪಾನದಿಂದ ಮತ್ತನಾಗಿ ಬೋಧ ಕಳೆದುಕೊಂಡಾಗ,ಗುಟ್ಟಿನಲ್ಲಿ ತನ್ನ ಪ್ರಿಯಕರನನ್ನು ಸೇರುತ್ತಿದ್ದಳು. ತನಗೆ ಪ್ರಾಣಕ್ಕಿಂತ ಪ್ರಿಯನಾಗಿದ್ದ ಅವನಿಗೆ ಈ ಹಣ್ನನ್ನವಳು ನೀಡಿದಳು.
ಈ ಅಶ್ವಪಾಲಕನಿಗೆ ಆ ಊರಿನ ವೇಶ್ಯೆಯ ಮೇಲೆ ಮೋಹ! ಪಿಂಗಳೆಯಿಂದ ಸಿಗುವ ದುಡ್ಡು ಕಾಸಿಗಾಗಿ ಅವಳನ್ನು ಒಲೈಸುತ್ತಿದ್ದರೂ, ಅವನ ಪ್ರೇಮ ವೈಶ್ಯೆಯ ಮೇಲಿತ್ತು. ಅವನು ಅವಳಿಗೆ ಪಿಂಗಳೆಯಿಂದ ಪಡೆದ ಹಣ್ಣನ್ನು ನೀಡಿದ. ವೇಶ್ಯೆ ಪರಮ ಸಾಧ್ವಿ. ಕುಲದಿಂದ ವೇಶ್ಯಾವೃತ್ತಿಯಲ್ಲಿದ್ದರೂ, ಅದನ್ನು ಧರ್ಮದಿಂದ ಪಾಲಿಸುತ್ತಿದ್ದಳು. "ಭಗವಂತಾ, ಮುಂದಿನ ಜನ್ಮದಲ್ಲಾದರೂ ನಿನ್ನ ಪಾದದ ಧೂಳಾಗಿ ಜನ್ಮ ನೀಡು. ಇಂಥ ಹೀನ ವೃತ್ತಿಯಿಂದ ಪಾಪಲೇಪವಾಗದಂತೆ ನನ್ನನ್ನು ನಡೆಸು" ಎಂದು ಬೇಡುತ್ತಿದ್ದಳು. ಅವಳ ಈ ಮನೋಭಾವನೆಯಿಂದಲೇ ಅಶ್ವಪಾಲಕ ಅವಳಿಗೆ ಮರುಳಾಗಿದ್ದ.
ಹಣ್ಣಿನ ವಿಶೇಷ ಗುಣಗಳ ಬಗ್ಗೆ ತಿಳಿಯುತ್ತಲೇ ಅವಳಿಗೆ ಈ ಹಣ್ಣು ಈ ದೇಶದ ರಾಜನಿಗೆ ಸಲ್ಲಬೇಕು ಎನಿಸಿತು. ಪ್ರಜಾವತ್ಸಲನಾದ ಅವನಿಗೆ ಪೂರ್ಣಾಯುಸ್ಸಿನ ಹಕ್ಕು ಎಂದುಕೊಂಡು ಸೀದಾ ಅರಮನೆಗೆ ಬಂದು ಮಹಾರಾಜ ಭತೃಹರಿಯ ಮುಂದೆ ಹಣ್ಣನ್ನಿಟ್ಟಳು. ಹಣ್ಣನ್ನು ನೋಡುತ್ತಲೇ ರಾಜನಿಗೆ ಅದರ ಗುರುತು ಸಿಕ್ಕಿತು. ತನಗೆ ಸಾಧುಗಳು ನೀಡಿದ ಹಣ್ಣಿದು. ರಾಣಿ ಪಿಂಗಳೆಗೆ ನೀಡಿದ್ದು, ಈ ವೈಶ್ಯೆಯ ಕೈಗೆ ಬಂದದ್ದೆಂತು?ಎಂದು ಆಶ್ಚರ್ಯಗೊಂಡ.
ವಿಚಾರಿಸಲಾಗಿ ಅಶ್ವಪಾಲಕನಿಂದ ಸಿಕ್ಕಿತು ಎಂದು ತಿಳಿಯಿತು. ಅವನನ್ನು ಕರೆಸಿ ಪ್ರಶ್ನಿಸಿದರೆ, ಪಿಂಗಳೆಯಿಂದ ಎಂದು ತಿಳಿಯಿತು. ರಾಜನಿಗೆ ಆಘಾತವಾಯಿತು. ಪ್ರಾಣಕ್ಕಿಂತ ಪ್ರಿಯಳೆಂದು ಭಾವಿಸಿದ ಹೆಣ್ಣು ತನ್ನವಳಲ್ಲ! ಹಾಗಾದರೆ ತನ್ನದೆಂಬುದು ಯಾವುದು?ಎಂಬ ಪ್ರಶ್ನೆ ಉದಯಿಸಿತು. ಅನ್ನಾಹಾರಾಗಳನ್ನು ದೂರ ಮಾಡಿದ. ಏಕಾಂತದಲ್ಲಿ ಧ್ಯಾನಮಗ್ನನಾದ. ಜನ್ಮಾಂತರಗಳ ನೆನಪು ಮರುಕಳಿಸಿತು. ಸತ್ಯದರ್ಶನವಾಯಿತು. ಯಾವುದು ತಾನಲ್ಲ,ತನ್ನದಲ್ಲ. ಒಂದು ಜನ್ಮದ ಸಂಭಂಧಗಳನ್ನೇ ಶಾಶ್ವತ ಎಂದು ಭ್ರಮಿಸಿ,ಜೀವಿ,ನಾನಾ ರೀತಿಯ ಬಂಧನಗಳನ್ನು ಸೃಷ್ಟಿಸುತ್ತಾನೆ. ಜೇಡ ತಾನೇ ಹೆಣೆದ ಬಲೆಯಲ್ಲಿ ಬಂಧಿಯಾಗುವಂತೆ,ತಾನೇ ತನ್ನ ಕರ್ಮಬಂಧನಗಳಲ್ಲಿ ಸೆರೆಯಾಗುತ್ತಾನೆ. ಕನಿಷ್ಠ ತನ್ನ ಕಣ್ಣು ತೆರೆಯಿತು. ವಾಸ್ತವದ ದರ್ಶನವಾಯಿತು. ಪಿಂಗಳೆ ಗುರುವಾಗಿ ಬಂದಳು,ಎಂದುಕೊಂಡು,ದೇಶ-ಕೋಶ ತ್ಯಜಿಸಿದ.
ಪರಮ ವೈರಾಗ್ಯದಿಂದ ಸಂನ್ಯಾಸ ಸ್ವೀಕರಿಸಿದ. ಅಪೂರ್ವ ಗ್ರಂಥಗಳನ್ನು ರಚಿಸಿದ! ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ ವಿಧಿಯನ್ನು ಹಳಿಯುತ್ತೇವೆ. ಇಂಥ ಸ್ಥಿತಿಯನ್ನು "ತಂದಿಟ್ಟ" ಭಗವಂತನನ್ನು ದೂರುತ್ತೇವೆ. ಇದು ತಮಗೆ ಸರಿಯಾದುದಲ್ಲ ಎನ್ನುತ್ತಾ ಮತ್ತಷ್ಟು ಗೊಂದಲಿಸುತ್ತೇವೆ. ಸಂಕಷ್ಟಗಳು ಮಾಯೆಯ ಪರದೆ ಸರಿಸುವ "ಹೇತು"ಮಾತ್ರ ಎನ್ನುವುದು ಮರೆಯುತ್ತೇವೆ. ಇವು ನಿಜವಾದ ಅರ್ಥದಲ್ಲಿ "ಭಗವಂತ"ನ "ವರ","ಆಶೀರ್ವಾದ".
ಮಹಾಭಾರತದ ಯುದ್ಧ ಮುಗಿದು ಕೌರವ ಸಂಹಾರವಾಗಿ ಧರ್ಮರಾಯನಿಗೆ ಸಿಂಹಾಸನ ಲಭಿಸಿ ಪಟ್ಟಾಭಿಷೇಕವಾಯಿತು. ಕರ್ತವ್ಯ ಮುಗಿಸಿದ ಶ್ರೀ ಕೃಷ್ಣ ಪರಮಾತ್ಮ ದ್ವಾರಕೆಗೆ ಹೊರಟ. ರಾಜಮಾತೆ ಕುಂತಿ ಕಣ್ಣೀರು ಹರಿಸುತ್ತಾ ಒಂದು ಕಡೆ ನಿಂತಿದ್ದಳು. ಕೃಷ್ಣ, "ತಾಯೇ, ನೀನೀಗ ರಾಜಮಾತೆ! ನಿನ್ನ ಕಷ್ಟಗಳೆಲ್ಲಾ ಕೊನೆಯಾದವು. ಇನ್ನೂ ಏಕೆ ದುಃಖಿಸುತ್ತಿ?" ಎಂದು ಕೇಳಿದ. ಕುಂತಿಯ ಉತ್ತರ ಇಂತಿತ್ತು, "ಕೃಷ್ಣಾ,ಕಷ್ಟಗಳು ಸಾಲುಗಟ್ಟಿ ಬರುತ್ತಿರುವಾಗ, 'ಕೃಷ್ಣಾ' 'ಕೃಷ್ಣಾ' ಎಂದು ಮೊರೆ ಇಡುತ್ತಿದ್ದೆ. ಕಾಮ್ಯ ಭಕ್ತಿಯಿಂದಲೇ ಇರಲಿ, ದಿನದಲ್ಲಿ ನೂರು ಬಾರಿ ನಿನ್ನ ನೆನಪಾಗುತ್ತಿತ್ತು. ಇನ್ನೂ ರಾಜಮಾತೆಯ ಸ್ಥಾನದಲ್ಲಿ ಕಷ್ಟವೆಂಬುದೇ ಇಲ್ಲವೆಂದಾದಾಗ ನಿನ್ನ ನೆನಪಾಗುವುದೇ? ನಿನ್ನ ನಾಮಸ್ಮರಣೆ ಬರುವುದೇ? ಕೃಷ್ಣಾ, ನಿನ್ನ ಭವಹರಿಯುವುದೇ?" ಎಂದು ಪ್ರಶ್ನಿಸಿದಳು.
ಭವದುಃಖವನ್ನು ಧನಾತ್ಮಕವಾಗಿ ಪರಿಶೀಲಿಸಿದಾಗ ದುಃಖ ದುಃಖವೇ ಅಲ್ಲ. ಸುಖದ ಮೊದಲ ಸೋಪಾನ ಎಂಬುದು ಅರಿವಾಗುತ್ತದೆ.
Tuesday, 3 November 2015
ಅಜ್ಞಾನದ ಪರದೆಯ ಹಿಂದಿನ ಗೊಂದಲಗಳು
ಬಹಳಷ್ಟು ಸಲ ಸಮಾಜದ ರೀತಿ-ನೀತಿಗಳಿಂದ ನಾವು ಗೊಂದಲಕ್ಕೆ ಒಳಗಾಗುತ್ತೇವೆ. ದುಷ್ಟರು,ಬ್ರಷ್ಟರು ಐಶಾರಾಮಿ ಸುಖೀ ಜೀವನ ನಡೆಸುತ್ತಿದ್ದರೆ,ಯಾವುದೇ ಆಪತ್ತು ಎದುರಾದರೂ ಲೀಲಾಜಾಲವಾಗಿ ಅದರಿಂದ ಪಾರಾಗುತ್ತಿದ್ದರೆ, ಸಂತರು,ಸಾತ್ವಿಕರು ಜಗತ್ತಿನ ಎಲ್ಲಾ ದುಃಖ,ಕಷ್ಟಕೋಟಲೆಗಳಿಂದ ಬಳಲುತ್ತಿರುತ್ತಾರೆ. ಏಕೆ ಈ ಪರಿ? ಹಾಗಾದರೆ ಸತ್ಯ,ಧರ್ಮಗಳಿಗೆ ಪ್ರತಿಫಲ ಎನ್ನುವುದು ಇಲ್ಲವೇ ? ಎಂಬ ಪ್ರಶ್ನೆ ಕಾಡುತ್ತದೆ. ಹೆಚ್ಚಿನವರು, "ಇದೆಲ್ಲಾ ಪೂರ್ವಾರ್ಜಿತ, ಕರ್ಮಫಲಗಳ ಪ್ರಾಪ್ತಿ" ಎಂದು ಅಗೊಚರಕ್ಕೆ ದಾಟಿಸುತ್ತೇವೆ.
ಒಮ್ಮೆ ಅರ್ಜುನನಿಗೂ ಈ ಸಂದೇಹ ಉಂಟಾಯಿತು. (ಈ ಕಥೆ ಮಹಾಭಾರತದಲ್ಲಿ ಬರುತ್ತದೆ). ಇದೇ ಪ್ರಶ್ನೆಯನ್ನವನು ಶ್ರೀಕೃಷ್ಣ ಪರಮಾತ್ಮನ ಮುಂದಿಟ್ಟ. ಕೃಷ್ಣ ಎಂದಿನಂತೆ, "ನೀನೇ ಸ್ವತಃ ಕಂಡರೆ ಸರಿಯಾದೀತು. ನಾವೊಮ್ಮೆ ಪ್ರಪಂಚ ಪರ್ಯಟನೆ ಮಾಡಿ ಬರುವ. ಸಂದೇಹಕ್ಕೆ ಸಮಾಧಾನ ಸಿಗಬಹುದು"ಎಂದು ಹೇಳಿ ಅರ್ಜುನನನ್ನು ಕರೆದುಕೊಂಡು ಹೊರಟ. ಸಾಮಾನ್ಯರಂತೆ ವೇಷ ಧರಿಸಿ ಇಬ್ಬರು ಹೊರಟರು. ತಿರುಗುತ್ತಾ ತಿರುಗುತ್ತಾ ಸಾಯಂಕಾಲವಾಗುತ್ತಿರುವಂತೆಯೇ ಒಂದು ಹಳ್ಳಿಗೆ ಬಂದರು. ಕಡುಬಡವನ ಮನೆಯಾಗಿತ್ತದು. ಅಂದು ಬೆಳಿಗ್ಗೆಯಿಂದ ಎಷ್ಟು ಪ್ರಯತ್ನಿಸಿದರೂ ಈ ಮನೆಯೊಡೆಯನಿಗೂ ಏನು ಕೆಲಸ ಸಿಕ್ಕಿರಲಿಲ್ಲ. ಒಂದೇ ಒಂದು ಕಾಸು ದುಡಿಮೆಯಿರಲಿಲ್ಲ. ಇನ್ನು ನಿತ್ಯ ಏಕಾದಶಿ ಇರುವ ಮನೆಯಲ್ಲಿ ಒಂದು ಕಾಳು ಅಕ್ಕಿಯೂ ಇರಲಿಲ್ಲ. ಇವನ ಸೋತ ಮುಖ ಕಂಡ ಮನೆಯೊಡತಿ, ಸಾಂತ್ವನದ ಮಾತುಗಳನ್ನಾಡುತ್ತ ಇದ್ದ ಒಂದು ಲೋಟ ಹಾಲನ್ನು ಅವನ ಮುಂದೆ ಇಟ್ಟಿದ್ದಳು. ಇನ್ನೇನು ಮನೆಯೊಡೆಯ ಹಾಲು ಕುಡಿಯಬೇಕು,ಅಷ್ಟರಲ್ಲಿ ಕೃಷ್ಣಾರ್ಜುನರು ಹೊಸ್ತಿಲಲ್ಲಿ ನಿಂತರು. "ಅಯ್ಯಾ! ಹಸಿವಾಗುತ್ತಿದೆ. ತಿನ್ನಲು ಏನಾದರೂ ಸಿಗಬಹುದೇ? ಈ ಒಂದು ರಾತ್ರಿ ಉಳಿಯಲು ವ್ಯವಸ್ಥೆ ಮಾಡಬಹುದೇ?" ಎಂದರು.
ಮನೆಯೊಡೆಯನ ಕಣ್ಣಲ್ಲಿ ನೀರಿಳಿಯಿತು." ಸ್ವಾಮಿ, ಈ ಒಂದು ಲೋಟ ಹಾಲು ಬಿಟ್ಟರೆ ಮನೆಯಲ್ಲಿ ಏನೂ ಇಲ್ಲ. ದಯವಿಟ್ಟು ಸ್ವೀಕರಿಸಿ" ಎನ್ನುತ್ತಾ ಹಾಲಿನ ಲೋಟ ಅವರ ಮುಂದೆ ಇಟ್ಟ. ತಾವು ಉಪಯೋಗಿಸುತ್ತಿದ್ದ ಹರುಕು ಕಂಬಳಿ, ಮುರುಕು ಚಾಪೆಗಳನ್ನ ಹಾಸಿ ಹಾಸಿಗೆ ತಯಾರಿಸಿದ. ಇಬ್ಬರ ಕಾಲು ತೊಳೆದು ಪಾದೋದಕ ಪ್ರೋಕ್ಷಿಸಿಕೊಂಡ. ಕೃಷ್ಣಾರ್ಜುನರು ಸಂತೋಷದಿಂದ ಮಲಗಿ ನಿದ್ರೆ ಮಾಡಿದರು. ಬೆಳಿಗ್ಗೆ ಎದ್ದು ಹೋಗುತ್ತಿರುವಾಗ ಕೃಷ್ಣ ಒಮ್ಮೆ ಬಡವನ ಮನೆಯತ್ತ ತಿರುಗಿ ನೋಡಿ, "ಈ ಹಸು ಸತ್ತುಹೋಗಲಿ"ಎಂದ.
ಅರ್ಜುನನಿಗೆ ಸಿಟ್ಟು ಬಂತು. ತಮ್ಮ ಬಡತನದಲ್ಲಿಯೇ ಅತಿಥಿ ಸತ್ಕಾರ ಮಾಡಿದ ಈ ಸಾತ್ವಿಕನನ್ನು ಹೀಗೆ ಶಪಿಸುವುದೇ? ಇವನೊಂದಿಗೆ ಬಂದಿದ್ದೆ ತಪ್ಪಾಯಿತು ಎಂದು ಸಿಡಿಮಿಡಿಗೊಂಡ. ಮಾತಾಡಲಿಲ್ಲ. ಮುಂದೆ ಹೋಗುತ್ತಾ ಭಾರಿ ಸಿರಿವಂತನ ಮನೆಯೊಂದು ಎದುರಾಯಿತು. ಯಾವುದೊ ಮಹೋತ್ಸವ ನಡೆಯುತ್ತಿತ್ತು. ಸಂಗೀತ ಕೇಳುತ್ತಿತ್ತು. ಅಡುಗೆಯ ಘಮಘಮದಿಂದ ಬಾಯಲ್ಲಿ ನೀರು ಒಸರುತ್ತಿತ್ತು. ಕೃಷ್ಣಾರ್ಜುನರು ದಿಡ್ಡಿ ಬಾಗಿಲಲ್ಲಿ ನಿಂತು, "ಅಯ್ಯಾ! ಹಸಿವು,ತಿನ್ನಲು ಏನಾದರೂ ಸಿಗಬಹುದೇ?" ಎಂದರು. "ಛೀ! ಭಿಕ್ಷುಕರಿಗೆ ಇಲ್ಲಿ ಏನು ಸಿಗದು ತೊಲಗಿ" ಎಂದರು ದ್ವಾರಪಾಲಕರು. ಇವರು ಕದಲದೇ, "ನಾವು ಯಾತ್ರಿಕರು,ಆಹಾರ ನೀಡದೆ ಹೋಗಲಾರೆವು"ಎಂದರು. ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಯಿತು. ಗಲಾಟೆ ಕೇಳಿ ಮನೆಯೊಡೆಯ ಹೊರಗೆ ಬಂದ. ನಡೆದುದ್ದನ್ನು ಕೇಳಿ, "ನಿಮಗೆ ಯೋಗ್ಯವಾದುದ್ದನ್ನು ಕೊಡೋಣ, ಚಿಂತಿಸದಿರಿ. ಯಾರಲ್ಲಿ! ಇಬ್ಬರಿಗೂ ತಲಾ ಹತ್ತು ಹತ್ತು ಚಾವಟಿ ಏಟು ಕೊಟ್ಟು ಕಳುಹಿಸಿ" ಎಂದು ಒಳಗೆ ಹೋದ.
ಏಟು ತಿಂದು, ಮೈ-ಕೈಗಳ ಚರ್ಮ ಸುಲಿದು ಹೋಯಿತು. ಕೃಷ್ಣ ಧೂಳಿನಲ್ಲಿ ಬಿದ್ದವ ಎದ್ದು ನಿಂತು, "ಈ ಸಿರಿವಂತನ ಸಂಪತ್ತು ಇಪ್ಪತ್ತು ಪಟ್ಟಾಗಲಿ, ಇವನ ಸುಖ ಜಗತ್ತನ್ನೇ ಮರೆಸಲಿ" ಎಂದು ಹೇಳಿ ಹೊರಟ. ಈಗ ಅರ್ಜುನನ ಸಿಟ್ಟಿಗೆ ಮೇರೆ ಇಲ್ಲವಾಯಿತು. "ಛೇ! ಎಂಥ ಕೃತಘ್ನ ನೀನು. ಹಾಲು ಕುಡಿಸಿದವನ ಹಸು ಸಾಯಲಿ ಎಂದು ಶಪಿಸಿದೆ. ಛಡಿ ಏಟು ಹಾಕಿಸಿದವನ ಸಂಪತ್ತು ನೂರಾಗಲಿ ಎನ್ನುತ್ತಿರುವೆ" ಎಂದ.
ಆಗ ಕೃಷ್ಣ "ಅರ್ಜುನಾ,ಈ ಜಗತ್ತೊಂದು ಮಾಯೆ. ಯಾವುದು ಹೇಗಿರುತ್ತದೋ ತಿಳಿಯಲಾಗದು. ಬಡವ ಕುಕರ್ಮ ಫಲದಿಂದ ಬಡವನಾದ. ಆದರೆ ಸಂಸ್ಕಾರಬಲದಿಂದ ಸಾತ್ವಿಕನಾದ. ಕರ್ಮಫಲ ಭೌತಿಕಕ್ಕೆ ಮಾತ್ರ ಸೀಮಿತವಾಯಿತು. ಈ ಕರ್ಮಫಲ ಇನ್ನೊಂದು ಜನ್ಮದಲ್ಲೂ ಮುಂದುವರಿಯುವಷ್ಟಿತ್ತು. ಹಸುವಿನ ನಷ್ಟದಿಂದ ಅವನು ಇನ್ನೂ ಹೆಚ್ಚು ಪರಮಾರ್ಥದೆಡೆಗೆ ಒಲಿದು ಕರ್ಮಬಂಧನದ ಬಿಡುಗಡೆಗೆ ಇನ್ನಷ್ಟು ಸತ್ಕರ್ಮ ಮಾಡುತ್ತಾನೆ. ಈ ಜನುಮಕ್ಕೆ ಅವನಿಗೆ ಈ ಭವದಿಂದ ಬಿಡುಗಡೆಯಾಗುತ್ತದೆ. ಇನ್ನು ಸಿರಿವಂತನನ್ನು ನೋಡು. ಭೌತಿಕ ಸತ್ಕರ್ಮ ಫಲ ಈ ಶ್ರೀಮಂತಿಕೆ. ಇಲ್ಲಿ ಸಂಸ್ಕಾರವಿಲ್ಲ. ಆದುದರಿಂದ ಅಹಂಕಾರ,ಲೋಲುಪತೆ. ಈ ಅಹಂಕಾರವೇ ಸಾವಾಗಬಹುದು.ಕಾರಣವಿಲ್ಲದೆ ಆಹಾರ ಬೇಡಿದವರಿಗೆ ಛಡಿ ಏಟು ನೀಡಿದ. ಮತ್ತಷ್ಟು ಕುಕರ್ಮ ಸೇರಿಕೊಂಡಿತು. ಸಿರಿ ನೂರು ಪಟ್ಟಾಗಲಿ ಎಂದೆ. ಅಂದರೆ ಕುಕರ್ಮಗಳು ಬೆಳೆಯುತ್ತವೆ ಎಂದಾಯಿತು. ಈ ಸಿರಿಯ ಮದದಿಂದ ನೂರು ಜನ್ಮಗಳಲ್ಲಿ ಕುಫಲ ಸಂಚಯಿಸುತ್ತಾರೆ. ಈಗ ಬಡವ ಪಡುವ ಬವಣೆಯ ನೂರು ಪಾಲು,ನೂರು ಜನ್ಮಗಳಲ್ಲಿ ಅವನದಾಗುತ್ತದೆ. ಈಗ ಹೇಳು, ಯಾವುದು ಶಾಪ? ಯಾವುದು ವರ? ಮತ್ತೆ ಎಷ್ಟೇ ಪ್ರಯತ್ನ ಪಟ್ಟರೂ ಕೆಲವರು ನಾನಾ ರೀತಿಯ ತೊಂದರೆಗಳಿಂದ ನರಳುವುದೇಕೆ? ಕೆಲವರ ಅಪ್ರಯತ್ನದಿಂದ ಸಿರಿವಂತರೂ ಸುಖಿಗಳೂ ಆಗಿರುವುದೇಕೆ ಎಂಬ ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿತೇನು"?
ನಿನ್ನೆಗಳು, ನಾಳೆಗಳು ಅಜ್ಞಾನದ ಪರದೆಯ ಹಿಂದೆ ಮರೆಯಾಗಿರುವುದೇ ನಮ್ಮ ಗೊಂದಲಕ್ಕೆ ಕಾರಣ. ಇನ್ನು ಸುಖವೆಂದರೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಒಬ್ಬನ ಸುಖ ಮತ್ತೊಬ್ಬನ ದುಃಖವಾಗಬಹುದು. ಸುಖದ ಹುಡುಕಾಟವು ಮನುಷ್ಯನಲ್ಲಿ ಅಂತರ್ಗತವಾಗಿರುವ ಆನಂದದ ಹುಡುಕಾಟವೇ ಎನ್ನುತ್ತದೆ ನಮ್ಮ ಪ್ರಾಚಿನ ಜ್ಞಾನ.
ಒಮ್ಮೆ ಅರ್ಜುನನಿಗೂ ಈ ಸಂದೇಹ ಉಂಟಾಯಿತು. (ಈ ಕಥೆ ಮಹಾಭಾರತದಲ್ಲಿ ಬರುತ್ತದೆ). ಇದೇ ಪ್ರಶ್ನೆಯನ್ನವನು ಶ್ರೀಕೃಷ್ಣ ಪರಮಾತ್ಮನ ಮುಂದಿಟ್ಟ. ಕೃಷ್ಣ ಎಂದಿನಂತೆ, "ನೀನೇ ಸ್ವತಃ ಕಂಡರೆ ಸರಿಯಾದೀತು. ನಾವೊಮ್ಮೆ ಪ್ರಪಂಚ ಪರ್ಯಟನೆ ಮಾಡಿ ಬರುವ. ಸಂದೇಹಕ್ಕೆ ಸಮಾಧಾನ ಸಿಗಬಹುದು"ಎಂದು ಹೇಳಿ ಅರ್ಜುನನನ್ನು ಕರೆದುಕೊಂಡು ಹೊರಟ. ಸಾಮಾನ್ಯರಂತೆ ವೇಷ ಧರಿಸಿ ಇಬ್ಬರು ಹೊರಟರು. ತಿರುಗುತ್ತಾ ತಿರುಗುತ್ತಾ ಸಾಯಂಕಾಲವಾಗುತ್ತಿರುವಂತೆಯೇ ಒಂದು ಹಳ್ಳಿಗೆ ಬಂದರು. ಕಡುಬಡವನ ಮನೆಯಾಗಿತ್ತದು. ಅಂದು ಬೆಳಿಗ್ಗೆಯಿಂದ ಎಷ್ಟು ಪ್ರಯತ್ನಿಸಿದರೂ ಈ ಮನೆಯೊಡೆಯನಿಗೂ ಏನು ಕೆಲಸ ಸಿಕ್ಕಿರಲಿಲ್ಲ. ಒಂದೇ ಒಂದು ಕಾಸು ದುಡಿಮೆಯಿರಲಿಲ್ಲ. ಇನ್ನು ನಿತ್ಯ ಏಕಾದಶಿ ಇರುವ ಮನೆಯಲ್ಲಿ ಒಂದು ಕಾಳು ಅಕ್ಕಿಯೂ ಇರಲಿಲ್ಲ. ಇವನ ಸೋತ ಮುಖ ಕಂಡ ಮನೆಯೊಡತಿ, ಸಾಂತ್ವನದ ಮಾತುಗಳನ್ನಾಡುತ್ತ ಇದ್ದ ಒಂದು ಲೋಟ ಹಾಲನ್ನು ಅವನ ಮುಂದೆ ಇಟ್ಟಿದ್ದಳು. ಇನ್ನೇನು ಮನೆಯೊಡೆಯ ಹಾಲು ಕುಡಿಯಬೇಕು,ಅಷ್ಟರಲ್ಲಿ ಕೃಷ್ಣಾರ್ಜುನರು ಹೊಸ್ತಿಲಲ್ಲಿ ನಿಂತರು. "ಅಯ್ಯಾ! ಹಸಿವಾಗುತ್ತಿದೆ. ತಿನ್ನಲು ಏನಾದರೂ ಸಿಗಬಹುದೇ? ಈ ಒಂದು ರಾತ್ರಿ ಉಳಿಯಲು ವ್ಯವಸ್ಥೆ ಮಾಡಬಹುದೇ?" ಎಂದರು.
ಮನೆಯೊಡೆಯನ ಕಣ್ಣಲ್ಲಿ ನೀರಿಳಿಯಿತು." ಸ್ವಾಮಿ, ಈ ಒಂದು ಲೋಟ ಹಾಲು ಬಿಟ್ಟರೆ ಮನೆಯಲ್ಲಿ ಏನೂ ಇಲ್ಲ. ದಯವಿಟ್ಟು ಸ್ವೀಕರಿಸಿ" ಎನ್ನುತ್ತಾ ಹಾಲಿನ ಲೋಟ ಅವರ ಮುಂದೆ ಇಟ್ಟ. ತಾವು ಉಪಯೋಗಿಸುತ್ತಿದ್ದ ಹರುಕು ಕಂಬಳಿ, ಮುರುಕು ಚಾಪೆಗಳನ್ನ ಹಾಸಿ ಹಾಸಿಗೆ ತಯಾರಿಸಿದ. ಇಬ್ಬರ ಕಾಲು ತೊಳೆದು ಪಾದೋದಕ ಪ್ರೋಕ್ಷಿಸಿಕೊಂಡ. ಕೃಷ್ಣಾರ್ಜುನರು ಸಂತೋಷದಿಂದ ಮಲಗಿ ನಿದ್ರೆ ಮಾಡಿದರು. ಬೆಳಿಗ್ಗೆ ಎದ್ದು ಹೋಗುತ್ತಿರುವಾಗ ಕೃಷ್ಣ ಒಮ್ಮೆ ಬಡವನ ಮನೆಯತ್ತ ತಿರುಗಿ ನೋಡಿ, "ಈ ಹಸು ಸತ್ತುಹೋಗಲಿ"ಎಂದ.
ಅರ್ಜುನನಿಗೆ ಸಿಟ್ಟು ಬಂತು. ತಮ್ಮ ಬಡತನದಲ್ಲಿಯೇ ಅತಿಥಿ ಸತ್ಕಾರ ಮಾಡಿದ ಈ ಸಾತ್ವಿಕನನ್ನು ಹೀಗೆ ಶಪಿಸುವುದೇ? ಇವನೊಂದಿಗೆ ಬಂದಿದ್ದೆ ತಪ್ಪಾಯಿತು ಎಂದು ಸಿಡಿಮಿಡಿಗೊಂಡ. ಮಾತಾಡಲಿಲ್ಲ. ಮುಂದೆ ಹೋಗುತ್ತಾ ಭಾರಿ ಸಿರಿವಂತನ ಮನೆಯೊಂದು ಎದುರಾಯಿತು. ಯಾವುದೊ ಮಹೋತ್ಸವ ನಡೆಯುತ್ತಿತ್ತು. ಸಂಗೀತ ಕೇಳುತ್ತಿತ್ತು. ಅಡುಗೆಯ ಘಮಘಮದಿಂದ ಬಾಯಲ್ಲಿ ನೀರು ಒಸರುತ್ತಿತ್ತು. ಕೃಷ್ಣಾರ್ಜುನರು ದಿಡ್ಡಿ ಬಾಗಿಲಲ್ಲಿ ನಿಂತು, "ಅಯ್ಯಾ! ಹಸಿವು,ತಿನ್ನಲು ಏನಾದರೂ ಸಿಗಬಹುದೇ?" ಎಂದರು. "ಛೀ! ಭಿಕ್ಷುಕರಿಗೆ ಇಲ್ಲಿ ಏನು ಸಿಗದು ತೊಲಗಿ" ಎಂದರು ದ್ವಾರಪಾಲಕರು. ಇವರು ಕದಲದೇ, "ನಾವು ಯಾತ್ರಿಕರು,ಆಹಾರ ನೀಡದೆ ಹೋಗಲಾರೆವು"ಎಂದರು. ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಯಿತು. ಗಲಾಟೆ ಕೇಳಿ ಮನೆಯೊಡೆಯ ಹೊರಗೆ ಬಂದ. ನಡೆದುದ್ದನ್ನು ಕೇಳಿ, "ನಿಮಗೆ ಯೋಗ್ಯವಾದುದ್ದನ್ನು ಕೊಡೋಣ, ಚಿಂತಿಸದಿರಿ. ಯಾರಲ್ಲಿ! ಇಬ್ಬರಿಗೂ ತಲಾ ಹತ್ತು ಹತ್ತು ಚಾವಟಿ ಏಟು ಕೊಟ್ಟು ಕಳುಹಿಸಿ" ಎಂದು ಒಳಗೆ ಹೋದ.
ಏಟು ತಿಂದು, ಮೈ-ಕೈಗಳ ಚರ್ಮ ಸುಲಿದು ಹೋಯಿತು. ಕೃಷ್ಣ ಧೂಳಿನಲ್ಲಿ ಬಿದ್ದವ ಎದ್ದು ನಿಂತು, "ಈ ಸಿರಿವಂತನ ಸಂಪತ್ತು ಇಪ್ಪತ್ತು ಪಟ್ಟಾಗಲಿ, ಇವನ ಸುಖ ಜಗತ್ತನ್ನೇ ಮರೆಸಲಿ" ಎಂದು ಹೇಳಿ ಹೊರಟ. ಈಗ ಅರ್ಜುನನ ಸಿಟ್ಟಿಗೆ ಮೇರೆ ಇಲ್ಲವಾಯಿತು. "ಛೇ! ಎಂಥ ಕೃತಘ್ನ ನೀನು. ಹಾಲು ಕುಡಿಸಿದವನ ಹಸು ಸಾಯಲಿ ಎಂದು ಶಪಿಸಿದೆ. ಛಡಿ ಏಟು ಹಾಕಿಸಿದವನ ಸಂಪತ್ತು ನೂರಾಗಲಿ ಎನ್ನುತ್ತಿರುವೆ" ಎಂದ.
ಆಗ ಕೃಷ್ಣ "ಅರ್ಜುನಾ,ಈ ಜಗತ್ತೊಂದು ಮಾಯೆ. ಯಾವುದು ಹೇಗಿರುತ್ತದೋ ತಿಳಿಯಲಾಗದು. ಬಡವ ಕುಕರ್ಮ ಫಲದಿಂದ ಬಡವನಾದ. ಆದರೆ ಸಂಸ್ಕಾರಬಲದಿಂದ ಸಾತ್ವಿಕನಾದ. ಕರ್ಮಫಲ ಭೌತಿಕಕ್ಕೆ ಮಾತ್ರ ಸೀಮಿತವಾಯಿತು. ಈ ಕರ್ಮಫಲ ಇನ್ನೊಂದು ಜನ್ಮದಲ್ಲೂ ಮುಂದುವರಿಯುವಷ್ಟಿತ್ತು. ಹಸುವಿನ ನಷ್ಟದಿಂದ ಅವನು ಇನ್ನೂ ಹೆಚ್ಚು ಪರಮಾರ್ಥದೆಡೆಗೆ ಒಲಿದು ಕರ್ಮಬಂಧನದ ಬಿಡುಗಡೆಗೆ ಇನ್ನಷ್ಟು ಸತ್ಕರ್ಮ ಮಾಡುತ್ತಾನೆ. ಈ ಜನುಮಕ್ಕೆ ಅವನಿಗೆ ಈ ಭವದಿಂದ ಬಿಡುಗಡೆಯಾಗುತ್ತದೆ. ಇನ್ನು ಸಿರಿವಂತನನ್ನು ನೋಡು. ಭೌತಿಕ ಸತ್ಕರ್ಮ ಫಲ ಈ ಶ್ರೀಮಂತಿಕೆ. ಇಲ್ಲಿ ಸಂಸ್ಕಾರವಿಲ್ಲ. ಆದುದರಿಂದ ಅಹಂಕಾರ,ಲೋಲುಪತೆ. ಈ ಅಹಂಕಾರವೇ ಸಾವಾಗಬಹುದು.ಕಾರಣವಿಲ್ಲದೆ ಆಹಾರ ಬೇಡಿದವರಿಗೆ ಛಡಿ ಏಟು ನೀಡಿದ. ಮತ್ತಷ್ಟು ಕುಕರ್ಮ ಸೇರಿಕೊಂಡಿತು. ಸಿರಿ ನೂರು ಪಟ್ಟಾಗಲಿ ಎಂದೆ. ಅಂದರೆ ಕುಕರ್ಮಗಳು ಬೆಳೆಯುತ್ತವೆ ಎಂದಾಯಿತು. ಈ ಸಿರಿಯ ಮದದಿಂದ ನೂರು ಜನ್ಮಗಳಲ್ಲಿ ಕುಫಲ ಸಂಚಯಿಸುತ್ತಾರೆ. ಈಗ ಬಡವ ಪಡುವ ಬವಣೆಯ ನೂರು ಪಾಲು,ನೂರು ಜನ್ಮಗಳಲ್ಲಿ ಅವನದಾಗುತ್ತದೆ. ಈಗ ಹೇಳು, ಯಾವುದು ಶಾಪ? ಯಾವುದು ವರ? ಮತ್ತೆ ಎಷ್ಟೇ ಪ್ರಯತ್ನ ಪಟ್ಟರೂ ಕೆಲವರು ನಾನಾ ರೀತಿಯ ತೊಂದರೆಗಳಿಂದ ನರಳುವುದೇಕೆ? ಕೆಲವರ ಅಪ್ರಯತ್ನದಿಂದ ಸಿರಿವಂತರೂ ಸುಖಿಗಳೂ ಆಗಿರುವುದೇಕೆ ಎಂಬ ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿತೇನು"?
ನಿನ್ನೆಗಳು, ನಾಳೆಗಳು ಅಜ್ಞಾನದ ಪರದೆಯ ಹಿಂದೆ ಮರೆಯಾಗಿರುವುದೇ ನಮ್ಮ ಗೊಂದಲಕ್ಕೆ ಕಾರಣ. ಇನ್ನು ಸುಖವೆಂದರೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಒಬ್ಬನ ಸುಖ ಮತ್ತೊಬ್ಬನ ದುಃಖವಾಗಬಹುದು. ಸುಖದ ಹುಡುಕಾಟವು ಮನುಷ್ಯನಲ್ಲಿ ಅಂತರ್ಗತವಾಗಿರುವ ಆನಂದದ ಹುಡುಕಾಟವೇ ಎನ್ನುತ್ತದೆ ನಮ್ಮ ಪ್ರಾಚಿನ ಜ್ಞಾನ.
Subscribe to:
Comments (Atom)












