Wednesday 20 May 2015

‪#‎ಜೀವನ_ಸತ್ಯ‬

1>**-

       ಇದಕ್ಕಿಂತಲೂ ಎತ್ತರ ಅನವಶ್ಯಕ. ಇಲ್ಲಿ ನಾನು ಸಂತೋಷವಾಗೇ ಇದ್ದೇನೆ!!

 ಎಂದು ಮನುಷ್ಯ ಯಾವ ಮಟ್ಟದಲ್ಲಿ ಹೇಳಿಕೊಳ್ಳುತ್ತಾನೋ -ಆ ಮಟ್ಟ ಅವನ 

ಸಮರ್ಥನೆಗೆ ಉಚ್ಛ ಸ್ಥಾಯಿ, ಅಷ್ಟೇ. ಅಲ್ಲಿಂದ ಅವನ ಶಕ್ತಿ ಕ್ರಮೇಣ 

ಅಸಮರ್ಥತೆಯೆಡೆಗೆ ಇಳಿದುಬಿಡುತ್ತದೆ. ರೊಟೀನ್ ಆಗಿ ಬದುಕುವುದು 

ಅಭ್ಯಾಸವಾಗಿ ಬಿಡುತ್ತದೆ.


2>**

   1.ಇಷ್ಟಪಟ್ಟು ಕೆಲಸ ಮಾಡುವವರು.
   
   2.ತಮ್ಮ ಸಮಯದ ತಿಳಿದುಕೊಂಡಿರುವವರು.
 
   3.ಯಾವ ಕ್ಷೇತ್ರದಲ್ಲಿ ತಮಗೆ ನೈಪುಣ್ಯತೆಯಿದೆ ಇದೆ ಎಂದು ಸರಿಯಾಗಿ

       ಗ್ರಹಿಸಿದವರು ---ಮಾತ್ರವೇ ಸುಖವಾಗಿ ಬದುಕಬಲ್ಲರು.


3>**-

            ತನ್ನ ಮೆದುಳನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ಬಿಟ್ಟು, ಮನುಷ್ಯ

 ಮನಸ್ಸು ಮಾಡುವ ಕೆಲಸಗಳನ್ನು ಆನಂದಿಸಲು ಉಪಯೋಗಿಸುತ್ತಾನೆ. ಈ 

ಪರಿಣಾಮ ಕ್ರಮೇಣ ಮೆದುಳು ಆಲೋಚಿಸುವುದನ್ನು ಬಿಟ್ಟು ಮನಸ್ಸಿನೊಡನೆ ಸೇರಿ 

ಆನಂದಿಸಲು ಪ್ರಾರಂಭಿಸುತ್ತದೆ. ಇಷ್ಟು ಸಾಕು ಎಂದುಕೊಂಡು ಬೆಳವಣಿಗೆಯನ್ನು 

ನಿಲ್ಲಿಸಿಬಿಡುತ್ತದೆ. ತರ್ಕ ನಶಿಸುತ್ತದೆ.--ಅದೇ ಕಂಫರ್ಟ್ ಝೋನ್...

[ comfort zone]


4>**

ತನಗೆ ತಿಳಿದ ವಿಷಯದಿಂದ ಮತ್ತೊಂದು ಹೊಸ ವಿಷಯ ತಿಳಿದುಕೊಳ್ಳಲು

ಆಲೋಚಿಸಬಲ್ಲ ಶಕ್ತಿ 'ಮನುಷ್ಯನ'ಮೆದುಳಿಗೆ ಮಾತ್ರ ಇದೆ.

5>**

ಕಾಡಿನಲ್ಲಿ ಕಾಣಿಸಿಕೊಳ್ಳುವ ಬೆಂಕಿಗೆ ಗಾಳಿ ಮತ್ತಷ್ಟು ಸಹಾಯ ಮಾಡುತ್ತದೆ. ಅದೇ

ಗಾಳಿ ಎಣ್ಣೆ ದೀಪವನ್ನೂ ಆರಿಸಿಬಿಡುತ್ತದೆ. ಗೆಲ್ಲುವಾಗ ಮಿತ್ರರಿರುತ್ತಾರೆ. ಆಪತ್ತಿನಲ್ಲಿ

ಯಾರೂ ಇರುವುದಿಲ್ಲ.


6>**

ನಿನಗೆ ಹಾನಿ ಮಾಡುವುದು "ದೌರ್ಬಲ್ಯ". ನಿನ್ನಿಂದ ಬೇರೆಯವರಿಗೆ ಹಾನಿಯಾದರೆ

ಅದು ತಪ್ಪು. ನಿನಗಾಗಲಿ, ಬೇರೆಯವರಿಗಾಗಲಿ ಹಾನಿಯಾಗದ ಕೆಲಸ, ನಿನ್ನ

ಸಂತ್ರಪ್ತಿಗಾಗಿ ನೀನೇನೂ ಮಾಡಿದರೂ ತಪ್ಪಿಲ್ಲ.

7>**

ಕೆಲವರು ಸದಾ ಬೇಸರದಿಂದಿರುತ್ತಾರೆ. ಸದಾ ಅಸಹನೆ. ಇಂಡಿಯ ಕ್ರಿಕೆಟ್ ನಲ್ಲಿ

ಸೋತು ಹೋಗಿದ್ದಕ್ಕೆ, ರಾಜಕೀಯಗಳು, ಪವರ್ ಫೈಲ್ಯುರ್, ಟ್ರೈನ್ ಸಮಯಕ್ಕೆ

ಸರಿಯಾಗಿ ಬರದಿರುವುದು - ಇವರ ಕೋಪಕ್ಕೆ, ದುಃಖಕ್ಕೆ ಇಂತಹ ಕಾರಣಗಳು

ಹಲವಾರಿರುತ್ತವೆ. ಪದೆ ಪದೇ ಇವರ ಬಾಯಲ್ಲಿ ....." ಈ ದೇಶ

ಸರಿಹೋಗುವುದಿಲ್ಲ.. ಈ ವ್ಯವಸ್ಥೆ ಇಷ್ಟೇ...." ಇಂತಹ ಮಾತುಗಳು

ಕೇಳಿಸುತ್ತಿರುತ್ತವೆ...


8>**ಮತ್ತೊಬ್ಬರು ಹೀರೋ ಆಗಿ ನಟಿಸುವ ಚಿತ್ರದಲ್ಲಿ ಸೈಡ್ ಕ್ಯಾರೆಕ್ಟೆರ್ ಅಲ್ಲ...

ನಿಮ್ಮ ಜೀವನದ ಚಿತ್ರದಲ್ಲಿ ನೀವೇ "ಹೀರೋ"

9>**

ತೃಪ್ತಿ ಎನ್ನುವುದು 'ಮೆಟೀರಿಯಲ್ ಬೆನಿಫಿಟ್' ಅಂದುಕೊಳ್ಳುವುದೇ ಆತ್ಮವಂಚನೆ. 

ಅದಕ್ಕೆ ಎಷ್ಟು ಬೆಲೆ ಸಲ್ಲಿಸುತ್ತಿದ್ದೆವೆಂದು ತಿಳಿದುಕೊಳ್ಳುವುದೇ ಜ್ಞಾನ..


10>**

ಟೈಟಾನಿಕ್ ಸಿನಿಮಾದಲ್ಲಿಯ ಕೊನೆಯ ಕ್ಲೈಮ್ಯಾಕ್ಸ್ ನಲ್ಲಿ ಹಡಗು ಮುಳುಗಿ

ಹೊಗುತ್ತಿದ್ದರೆ, ಕೆಲವು ಪ್ರಯಾಣಿಕರು ಬದುಕಬೇಕೆಂಬ ಆಸೆಯಿಂದ ಮೇಲ್ಗಡೆಗೆ

ಓಡುತ್ತಾರೆ. ಮತ್ತೆ ಕೆಲವರು ಮೇಲಿನಿಂದ ನೀರಿಗೆ ಧುಮುಕುತ್ತಾರೆ. ಇನ್ನು ಕೆಲವರು

ಲೈಫ಼್ ಬೋಟಿನೊಳಗೆ ದುಮುಕುತ್ತಾರೆ. ಮತ್ತೊಂದಿಷ್ಟು ಜನ ಫಿಡಲ್ ನುಡಿಸುತ್ತಾ

ಸತ್ತು ಹೋಗುತ್ತಿರುವವರಿಗೆ ಅಂತಿಮ ಗೀತಾಲಾಪನ ಮಾಡುತ್ತಾರೆ. ಕಥೆಗೆ

ಅಗತ್ಯವಾದ್ದರಿಂದ ಕೊನೆಯಲ್ಲಿ ಹೀರೊಯಿನ್ ಮಲಗಿಕೊಳ್ಳುವ ಸಲುವಾಗಿ ಒಂದು

ರೂಮನ್ನು ತಯಾರಿಸುತ್ತಾನೆ ನಿರ್ದೇಶಕ.

ಅದು ಕಥೆ. ಆದರೆ ನಿಜ ಜೀವನದಲ್ಲಿ ನಮಗೆ ಹಾಗೆ ರೂಮು ತಯಾರಿಸಿ 

ಕೊಡುವವರು ಯಾರೂ ಇರುವುದಿಲ್ಲ. ಮುಳುಗಿ ಹೋಗುತ್ತಿರುವ ಹಡಗಿನಿಂದ 

ಯಾವಾಗ ನೀರಿಗೆ ಧುಮುಕಬೇಕು? ಯಾವುದರ ಆಸರೆ ಪಡೆಯಬೇಕು? 

ಎನ್ನುವುದು ಆ ಮನುಷ್ಯನ ಸಮಯಸ್ಪೂರ್ತಿಯ ಮೇಲೆ ಆಧಾರವಾಗಿರುತ್ತದೆ.!!



11>**


ಈ ಜಗತ್ತಿನಲ್ಲಿ ಕಷ್ಟವಾದ ಕೆಲಸವೆಂದು ಹೇಳುವ ಕೆಲಸ ಯಾವುದೂ ಇಲ್ಲ. ನಮಗೆ 

ಅದೆಂದರೆ ಇಷ್ಟವಿಲ್ಲದೆ ಹೋಗುವುದರಿಂದ ಅದು ಕಷ್ಟವಾಗಿ ಕಾಣುತ್ತದೆ ಅಷ್ಟೇ. !!



12>**

ಬೇರೆಯವರಿಗೆ ನಷ್ಟವಾಗದೆ, ನಮಗಾವುದು ಇಷ್ಟವೋ ಅದನ್ನು 

ನಿರ್ಧರಿಸಿಕೊಳ್ಳುವುದೇ "constructive meterialism". ಸೆಂಟಿಮೆಂಟಿಲಿಸ್ಟ್ 

ಗಳು ಇದಕ್ಕೆ ಒಪ್ಪಿಕೊಳ್ಳುವುದಿಲ್ಲ.


13>**

ಮನುಷ್ಯರಲ್ಲೇನೋ ವ್ಯತ್ಯಾಸವಿದೆ...!! ದೇವರಲ್ಲೂ ವ್ಯತ್ಯಾಸವೇ??


14>**

ಪ್ರಾರಂಭದಲ್ಲಿ ಮನುಷ್ಯರು ಕೇವಲ ಪಂಚಭೂತಗಳನ್ನು ಮುಖ್ಯವಾಗಿ ಅಗ್ನಿಯನ್ನು 

ಪೂಜಿಸುತ್ತಿದ್ದರು. ನಂತರ ಬಂತು ದೇವಾಲಯ. 'ದೇವಾಲಯ'ವೆನ್ನುವುದೇ 

ಬಂಡವಾಳಶಾಹಿ ವ್ಯವಸ್ಥೆಗೆ ಚಿನ್ಹೆ.!!



15>**

ಪ್ರತಿ ಗುರಿಯನ್ನು ತಲುಪುತ್ತಿರುವಾಗಲೂ 'ನಾನು ಕಷ್ಟಪಡುತ್ತಿದ್ದೇನೆ' ಎನ್ನುವ 

ಫೀಲಿಂಗ್ ಇರುವವನು ಎಂದೂ ನಂ.೧ ಆಗಲಾರ.


16>**

ನಮ್ಮ ತತ್ವ,ವಾಸ್ತವ ಅಂದರೆ ಯಾರೋ ನಿರ್ದೇಶಿಸಿದ್ದಾಗಲಿ,ಯಾರೋ 

ಹೇಳಿದ್ದಾಗಲಿ ಪ್ರತಿಪಾದಿಕವಾಗಿ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ 

ತೆಗೆದುಕೊಂಡರೂ ಅದನ್ನು ನಮ್ಮ ಅನುಭವದಿಂದ, ಜ್ಞಾನದಿಂದ ಪರಿಶೀಲಿಸಿ 

ಸತ್ಯಾಸತ್ಯತೆಗಳನ್ನು ಗ್ರಹಿಸುತ್ತೇವೆ. ತಿಥಿಯಿಂದ ಬಾಲ್ಯವಿವಹಾದವರೆಗೂ ನಮ್ಮ 

ಪೂರ್ವಿಕರು ತಮ್ಮ ತಮ್ಮ ಧರ್ಮಗಳಿಗುಣವಾಗಿ ಏರ್ಪಡಿಸಿಕೊಂಡಿರುವ 

ನಿಯಮಗಳನ್ನು ಒಪ್ಪಿಕೊಳ್ಳಬೇಕಾ ಬೇಡವಾ ಎನ್ನುವುದು,ಪ್ರಸ್ತುತ ಸಮಾಜಕ್ಕೆ 

ಅದರ ಅಗತ್ಯವೇ? ಅದರ ಮೂಲಕ ಇರುವ ಕಷ್ಟ, ನಷ್ಟಗಳನ್ನು ಪರಿಶೀಲಿಸಿದ 

ನಂತರವೇ ನಾವು ನಿರ್ಧರಿಸಿಕೊಳ್ಳುತ್ತೇವೆ.



17>**

ತರ್ಕವಲ್ಲದೆ ಮನುಷ್ಯನ ಜೀವನದಲ್ಲಿ ಬೇರೇನೂ ಇಲ್ಲ. ಮನುಷ್ಯನ ಒಟ್ಟೂ 

ಮೌಲ್ಯಗಳೆಲ್ಲಾ ತರ್ಕದ ಮೇಲೆ ಆಧಾರಿತವಾಗಿದೆ. ಒಂಟಿ ಸೀನು, ಬೆಕ್ಕು ಅಡ್ಡ 

ಬರುವುದು ತರ್ಕಕ್ಕೆ ನಿಲ್ಲುವುದಿಲ್ಲ. ಅದೇ ರೀತಿ ತನಗೆ ಹೆಣ್ಣಿನ ಜೊತೆ ಸಂಬಂಧ 

ಇರುವ ಗಂಡಸು, ತನ್ನ ಹೆಂಡತಿಗೆ ಪರಪುರುಷರೊಡನೆ ಸಂಬಂಧವಿದ್ದರೆ 

ಸಹಿಸಲಾರ. ಹೀಗೇಕೆ ಎಂದು ಪ್ರಶ್ನಿಸುತ್ತದೆ ತರ್ಕ. [ Logic ]



18>**

ಮನುಷ್ಯನ ಒಟ್ಟಾರೆ ಕಷ್ಟದ ಮೇಲೂ,ತಿಳುವಳಿಕೆಯ ಮೇಲೂ ಅವನೆಷ್ಟು 

ಸುಖವಾಗಿ ಬದುಕಬೇಕೆಂದು ನಿರ್ದೇಶಿಸಲ್ಪಡಬೇಕು. ಅಂದರೆ ಜಾಣನಾದ ವ್ಯಕ್ತಿ 

ಎಷ್ಟು ಕಷ್ಟಪಟ್ಟರೆ, ಅಷ್ಟು ಸುಖವನ್ನು ಬಯಸುವ ಹಕ್ಕು ಅವನಿಗಿರುತ್ತದೆ.



19>**

ಪೆರ್ಸೊನಾ ಅಂದರೆ ಮಾಸ್ಕ್ [ ಮುಸುಕು ]. ಪರ್ಸನಾಲಿಟಿ ಎನ್ನುವ ಪದ 

ಅದರಿಂದ ಬಂದದ್ದೇ. ನಮ್ಮ ಪ್ರವರ್ತನೆಯ ಮೇಲೆ, ಹೃದಯದ ಮೇಲೆ ಒಂದು

 ಸಲ ಮುಸುಕು ಹಾಕಿಕೊಳ್ಳುವುದಕ್ಕೆ ಪ್ರಾರಂಭಿಸಿದ ಮೇಲೆ, ನಿರಂತರವಾಗಿ ಅದು 

ಜಾರಿಹೋಗದಂತೆ ಇರಿಸಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ನಮ್ಮೊಳಗಿನ 

ಪರ್ಸನಾಲಿಟಿ, ನಮ್ಮ ಮುಖದ ಮೇಲೆ ಹಾಕಿಕೊಂಡ ಮುಸುಕು ಒಂದೇ ಆದಾಗ, 

ಪದೇ ಪದೇ ಜಾರಿ ಹೋಗುತ್ತಿರುವ ಮಾಸ್ಕ್ಅನ್ನು ಕಷ್ಟಪಟ್ಟು ಮತ್ತೆ ಸರಿಸುವ 

ಅಗತ್ಯವಿಲ್ಲ. ನಮ್ಮನ್ನಿಷ್ಟಪಡುವವರು ಇಷ್ಟಪಡುತ್ತಾರೆ. ಇಲ್ಲದವರು ದೂರ 

ಹೋಗುತ್ತಾರೆ...!!



20>**

ನಮ್ಮ ಬಗ್ಗೆ ಬೇರೆಯವರ ಅಭಿಪ್ರಾಯಗಳು,ವಾದಗಳು ಮಾತುಗಳು-ಎಲ್ಲ 

ಅವರವರ ವರ್ತಮಾನ [ ಲೇಟೆಸ್ಟ್ ] ಅನುಭವಗಳ ಮೇಲೆ. ನಮ್ಮಿಂದ 

ಅವರಿಗಾಗುವ ಲಾಭದ ಮೇಲೆ ಆಧಾರವಾಗಿರುತ್ತದೆ.

CLICK HERE