Monday 12 June 2017

‘ಅವಳಿ’ಗೆ ನಮನ

ರಾಮಾಯಣ, ಮಹಾಭಾರತದ ಕಥೆಗಳು ಭಾರತೀಯರ ಬದುಕಿನ ಒಂದು ಅಂಗ.

ಸಾವಿರಾರು ವರ್ಷಗಳ ಹಿಂದೆ ಬರೆಯಲ್ಪಿಟ್ಟದ್ದರೂ ಅವುಗಳಲ್ಲಿನ ಮೌಲ್ಯಗಳನ್ನು ಇಂದೂ ಬದುಕಿಗೆ ಅಳವಡಿಸಿಕೊಳ್ಳಬಹುದು ಎಂಬ ಮಾತಿದೆ.

ಹೌದೇನು? ಯಾವ ಮೌಲ್ಯಗಳನ್ನು?

ರಾಮಾಯಣವನ್ನು, ಅದರಲ್ಲಿನ ಕೆಲವು ಪಾತ್ರಗಳನ್ನು ವಿಶ್ಲೇಷಿಸೋಣ.

ರಾಮ ಸೀತೆಯ ಕೈಹಿಡಿದ. ಕೋಮಲೆ, ರಾಜಕುಮಾರ ಪತಿಯನ್ನೆ ಪರದೈವ ಎಂದು ನಂಬಿದ ಸೀತೆ ಪತಿಗೃಹಕ್ಕೆ ಬಂದಳು.

ರಾಮಚಂದ್ರ ಪಟ್ಟಾಭಿಷೇಕಕ್ಕೆ ತಯಾರಿಯಾಗುತ್ತಿರುವಂತೆ, ಕೈಕೆಯಿ ತನ್ನ ಮಗ ಭರತನಿಗೆ ಪಟ್ಟ ಕಟ್ಟುವ ಹಾಗೂ ಶ್ರೀರಾಮನನ್ನು ವನವಾಸಕ್ಕಟ್ಟುವ ಬೇಡಿಕೆ ಮುಂದಿಟ್ಟಳು.


ಅದೂ ದಶರಥ ಹಿಂದೆಂದೋ ಕೊಟ್ಟ ವಚನಕ್ಕೆ ಅನುಸಾರವಾಗಿಯೇ ಎಂಬುದನ್ನು ಮರೆಯಲಾಗದು. ಪಿತೃವಚನಕ್ಕೆ ಬಧ್ಹನಾದ ರಾಮ ಕಾಡಿಗೆ ಹೊರಟ.


ಸೀತೆ ಹಿಂದೆ ಉಳಿದು, ಅರಮನೆಯಲ್ಲಿ ಸುಖವಾಗಿರಬಹುದಿತ್ತು. ಆದರೆ, ಅವಳೂ ಪತಿಯ ಸುಃಖ ದುಃಖಗಳಲ್ಲಿ ಸಮಭಾಗಿತ್ವದ ಕರ್ತವ್ಯ ಪಾಲನೆಗಾಗಿ ರಾಮನ ಹಿಂದೆ ನಡೆದಳು.


ಅಲ್ಲಿ ಏನೇನು ಕಷ್ಟಗಳನ್ನು ಅನುಭವಿಸಿದಳೋ, ನೀರಿಗಾಗಿ, ಹಸಿವಿನಿಂದ ಬಳಲಿದಳೋ ದಾಖಲೆಗಳಿಲ್ಲ. ಮುಂದೆ ಸೀತಾಪಹರಣವಾಯಿತು.ರಾವಣ ಕ್ರೂರ, ಭೀಬತ್ಸರೂಪಿ ರಾಕ್ಷಸಿಯರ ಕಾವಲಿನಲ್ಲಿ ಅವಳನು ವನವೊಂದರಲ್ಲಿ ಸೆರೆ ಇಟ್ಟ.


ಮರವೊಂದರ ಕೆಳಗೆ ಸದಾ ಭೀತಿಯ ಛತ್ರದಡಿ, ರಾವಣನ ಕ್ರೂರ ಅಸಾಧು ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಸೀತೆ ದಿನ ಕಳೆದಳು.

ಮುಂದೆ ರಾಮ, ರಾವಣರ ಯುದ್ಧ ನಡೆದು, ಸೀತಾ ತಾಯಿಗೆ ಬಿಡುಗಡೆ ದೊರಕಿತು. ಸಾಮ್ರಾಜ್ಞಿಯಾದಳು.

ಇಲ್ಲಿಗೂ ಅವಳ ದುರ್ದಶೆ ಕೊನೆಯಾಗಲಿಲ್ಲ. ಯಾರೋ ಒಬ್ಬ ಅನಾಮಿಕನ ಮಾತಿಗೆ ಬೆಲೆಕೊಟ್ಟು ಶ್ರೀರಾಮಚಂದ್ರ ಗರ್ಭೀಣಿ ಸೀತೆಯನ್ನು ತ್ಯಾಗ ಮಾಡಿದ.

ಅಲ್ಲಿಂದಲೇ ಮುಂದೆ ಸೀತೆ ಭೂ ತಾಯಿಯಲ್ಲಿ ಒಂದಾದಳು. ಇಷ್ಟು ಕಥೆ.


ಒಂದು ಚಿಂತನಾರ್ಹ ವಿಷಯ ಇಲ್ಲಿದೆ. ಸೀತೆಯಂತೆ ಶ್ರೀರಾಮಚಂದ್ರನು ಹಲವು ವರ್ಷಗಳ ಕಾಲ ಏಕಾಂಗಿಯಾಗಿದ್ದ. ಪತ್ನಿ ವಿಯೋಗ,ವಿರಹದಿಂದ ನೊಂದಿದ್ದ ಅವನ ಶೀಲವನ್ನು ಯಾರೂ ಶಂಕಿಸಲಿಲ್ಲ.
ಏಕೆ?

ತನ್ನನ್ನು ಅಕಾರಣ ತ್ಯಜಿಸಿದಾಗಲೂ, ಸೀತೆ ಪ್ರತಿಭಟಿಸಲಿಲ್ಲ. ತನ್ನ ಪತಿಯ ನಿರ್ಧಾರವೇ ಸಾಧುವಾದುದೆಂದು ಸಾಧಿಸಿದಳು. ಅವಳು ಎಂದೂ ಪತಿಯ ಪತ್ನಿನಿಷ್ಠೆಯನ್ನು ಶಂಕಿಸಲಿಲ್ಲವಲ್ಲ!


ಹಾಗಾದರೆ ಶೀಲ, ನಿಷ್ಠೆಗಳು ಸ್ತ್ರೀಗೆ ಮಾತ್ರ ಅನ್ವಯಿಸುತ್ತವೆಯೇ?ಮಹಾಭಾರತದ ದ್ರೌಪದಿಯನ್ನು ಐವರು ವಿವಾಹವಾದರು. ಅದೂ ಅವರ ತಾಯಿಯ ಅಣಿಯಂತೆ. ಮಾತೃವಾಕ್ಯ ಪರಿಪಾಲನೆ ಮಾಡಿದ ವೀರಾಧಿವೀರ ಪಾಂಡವರು ದ್ರೌಪದಿಯ ಒಪ್ಪಿಗೆ ಕೇಳಲಿಲ್ಲ!


ಅವಳ ಬೇಕು ಬೇಡಗಳನ್ನು ಅರಿಯಲಿಲ್ಲ. ಮುಂದೆ ಧರ್ಮರಾಯ, ಧರ್ಮದ ಸಾಕಾರಮೂರ್ತಿ ತನ್ನ ತಮ್ಮಂದಿರೊಂದಿಗೆ ಪತ್ನಿಯನ್ನು ದ್ಯೂತಕ್ಕೆ ಪಣವಾಗಿ ಬಳಸಿಕೊಂಡ.

ಅವಳನ್ನು ಒಂದು ವಸ್ತುವನ್ನಾಗಿ ಪರಿಗಣಿಸಿದ.ಗೆಲ್ಲುವ ಸಾಧ್ಯತೆಯೇ ಇರಲಿಲ್ಲ. ಸೋತ.

ಅವಳ ಮುಡಿ ಹಿಡಿದು ತುಂಬಿದ ಸಭೆಗೆ ಎಳೆದು ತರಲಾಯಿತು. ರಜಸ್ವಲೆಯಾಗಿದ್ದ. ಏಕವಸ್ತ್ರಧಾರಿಣಿಯನ್ನು ತೊಡೆ ತಟ್ಟಿ 'ಬಾ ನನ್ನ ತೊಡೆ ಏರು' ಎಂದು ಕರೆದ ದುರ್ಯೋಧನ.


ವಯೋವೃದ್ಧರು, ಜ್ಞಾನವೃದ್ಧರು ಇದ್ದ ತುಂಬಿದ ಸಭೆಯಲ್ಲಿ ಒಬ್ಬರೂ ಈ ಅನ್ಯಾಯದ ವಿರುದ್ಧ ಚಕಾರವೆತ್ತಲಿಲ್ಲ. ವಿವಸ್ತ್ರಳನ್ನಾಗಿ ಮಾಡಲು ಅವಳ ಸೀರೆ ಸೆಳೆದ ದುಶ್ಯಾಸನ.

ಗಂಡ ಸತ್ತಾಗ ಹೆಂಡತಿಯನ್ನೂ ಅವನ ಚಿತೆಯ ಮೇಲಿಟ್ಟು ಜೀವಂತವಾಗಿ ಸುಟ್ಟು ಹಾಕಿದ ಸಂಸ್ಕೃತಿ ನಮ್ಮದು.

ಅವಳ ತಲೆ ಬೋಳಿಸಿ, ಕೆಂಪು ಸೀರೆ ಉಡಿಸಿ, ಚಾಪೆಯ ಮೇಲೆ ಮಲಗಿಸಿ, ಒಂದೇ ಹೊತ್ತು ಊಟ ಹಾಕಿ, ಶುಭ ಸಮಾರಂಭಗಳಿಂದ ಹೊರಹಾಕುತ್ತಿದ್ದರು.


Image have all standard licence belongs to Concerned person. Copying is purely offensive.


ಆದರೆ, ಒಬ್ಬನೇ ಒಬ್ಬ ಗಂಡೂ 'ಪತಿ'ಯಾಗಿ ಹೆಂಡತಿಯ ಚಿತೆಯಲ್ಲಿ ಸಹಗಮನ ಮಾಡಿದ ದಾಖಲೆ ಇಲ್ಲ.

ಪತ್ನಿಯ ನೆನಪಿನಲ್ಲಿ ಸುಖಭೋಗಗಳನ್ನು ತ್ಯಾಗಮಾಡಿದವನೇ ಇಲ್ಲ! ಹೆಣ್ಣನ್ನು ಬಲತ್ಕಾರದಿಂದ ಒಂದು ಛಾಯೆಯನ್ನಾಗಿ ಮಾಡಲಾಯಿತು.

ಅವಳು ಪತಿಯೆಂಬ ರೂಪವನ್ನು ಬದುಕಿನ ಗುರಿಯಾಗಿ, ಸರ್ವಸ್ವವಾಗಿ ಒಪ್ಪಿಕೊಳ್ಳುವಂತೆ ಮಾಡಲಾಯಿತು. ಇಂದೂ ಇದು ಬದಲಾಗಲಿಲ್ಲ.

ಹೆಣ್ಣು ಸರ್ವ ರಂಗಗಳಲ್ಲಿಯೂ ಕಾಲಿಟ್ಟಿದ್ದಾಳೆ.

ಗಂಡಿನಂತೆ ಕೂದಲು ಕತ್ತರಿಸಿಕೊಂಡು, ಜೀನ್ಸ್ ಶರ್ಟ್ ಧರಿಸುತ್ತಾಳೆ. ಹೊರಗೆ ದುಡಿಯುತ್ತಾಳೆ.

ಆಂತರ್ಯದಲ್ಲಿ ಶತಶತಮಾನಗಳಿಂದ ವಂಶವಾಹಿನಿಗಳಲ್ಲಿ ಅಚ್ಚೊತ್ತಿದ ಗಂಡಿನ ಸರ್ವಶ್ರೇಷ್ಠತೆಯ ರೂಪ, ದಬ್ಬಾಳಿಕೆ, ಶೋಷಣೆಗಳ ಭೀಕರತೆ, ಪುರುಷ ವೇಷಭೂಷಣ, ರೂಪಗಳ ಅನುಕರಣೆಯಾಗಿ ಹೊರಬಿಳುತ್ತಿದೆ.


ಗಂಡಾಗ ಬಯಸುತ್ತಾಳೆ. ಆದರೆ, ಅವಳ ಸಹಜ ಸ್ವಭಾವವು ಬದಲಾಗಿಲ್ಲ. ಪತ್ನಿತ್ವ, ಮಾತೃತ್ವದ ಕೋಮಲ ಭಾವನೆಗಳಿನ್ನೂ ಹಸಿಯಾಗಿವೆ.

ಗೃಹಸ್ವಾಮಿನಿಯಾಗಿ, ಪತ್ನಿಯಾಗಿ, ತಾಯಿಯಾಗಿ ಬದುಕುವ ಅದಮ್ಯ ಸ್ವಭಾವವು ಒಂದು ಕಡೆ, ನೋವುಗಳಿಗೆ ಕಾರಣನಾದ ಪುರುಷನೇ ತಾನಾಗಿ ಅವುಗಳಿಂದ ಬಿಡುಗಡೆ ಹೊಂದದ ಸುಪ್ತ ಕಾಮನೆ ಇನ್ನೊಂದು ಕಡೆ!

ಇಬ್ಬಗೆಯ ಈ ಒತ್ತಡದಲ್ಲಿ ನಲುಗುತ್ತಿದ್ದಾಳೆ ಇಂದಿನ ಸ್ತ್ರೀ! ಪ್ರಪಂಚಾದ್ಯಂತ ದ್ರೌಪದಿಯರೂ, ಸೀತೆಯರೂ ಇನ್ನೂ ಜೀವಂತವಾಗಿದ್ದಾರೆ.

ಎಲ್ಲಿಯೋ ಕೆಲವರು ಮಾತ್ರ ಈ ಚೌಕಟ್ಟಿನಿಂದ ಹೊರಬಂದಿದ್ದಾರೆ ಎಂದುಕೊಂಡಿದ್ದೇವೆ.

ಶತಮಾನಗಳಿಂದ ನೋವುಂಡು, ಇಷ್ಟೇಲ್ಲಾ ಶೋಷಣೆಯಲ್ಲೂ ಮನುಷ್ಯ ಸಂತತಿಯನ್ನು ಉಳಿಸಿ, ಬೆಳೆಸಿದ 'ಅವಳಿ'ಗೆ ನಮನ.

Copyright © 2017-18 by Anand Joshi All rights reserved. No part of this publication may be reproduced, distributed, or transmitted in any form or by any means, including photocopying, recording, or other electronic or mechanical methods, without the prior written permission of the publisher, except in the case of brief quotations embodied in critical reviews and certain other noncommercial uses permitted by copyright law. For permission requests, write to the publisher, addressed “Attention: Permissions Coordinator,” at the address below. 
 anandajoshi@datamail.in +91-9483998343 ) 

CLICK HERE