Tuesday 12 January 2016

ಅಂತಃಕರಣ

Theme: All love is expansion; all selfishness is contraction. love is therefore the only law of life. He who loves lives, he who is selfish is dying . Therefore, love for love's sake, because it is law of law, just as you breathe to live.


'
ಕಡು ಲೋಭಿಯೊಬ್ಬನಿದ್ದ. ಆತುಲೈಶ್ವರ್ಯವಿದ್ದರೂ ಕೈಯೆತ್ತಿ ಚಿಕ್ಕಾಸನ್ನೂ ದಾನ ಮಾಡುತ್ತಿರಲಿಲ್ಲ. ಅವನ ಮನೆಗೆಂದೂ ಅತಿಥಿಗಳು ಬರುವ ಪದ್ಧತಿ ಇರಲಿಲ್ಲ. ಏಕೆಂದರೆ, ಮನೆಯ ಸುತ್ತ ಎತ್ತರದ ಗೋಡೆ ಕಟ್ಟಿ, ಪುಟ್ಟದೊಂದು ಬಾಗಿಲಿಟ್ಟು, ಅದಕ್ಕೆ ಬೀಗ ಜಡಿದು, ಬೀಗದ ಕೈಯನ್ನು ಸದಾ ಸೊಂಟಕ್ಕೆ ಸಿಕ್ಕಿಸಿಕೊಂಡಿರುತ್ತಿದ್ದ. ಮನೆಯಲ್ಲಿ ಎಲ್ಲರಿಗೂ ಅರ್ಧ ಹೊಟ್ಟೆಯ ಊಟ ಮಾತ್ರ! ಅಗತ್ಯವಿರುವಷ್ಟೇ ಬಟ್ಟೆಬರೆ! ಇವೆಲ್ಲದಕ್ಕೂ ಚೆಂದದ ಹೆಸರಿಟ್ಟಿದ್ದ."ಸರಳ ಬದುಕು"
ಮನೆಯವರೆಲ್ಲ ಇದರಿಂದ ಬೇಸತ್ತುಹೋಗಿದ್ದರು. ಊರಿನವರು ಎದುರೆದುರಿಗೇ "ಉಂಡ ಕೈಯಿಂದ ಕಾಗೆ ಓಡಿಸುವ ಜಿಪುಣ" ಎಂದು ಆಡಿಕೊಂಡು ನಗುತ್ತಿದ್ದರು.

The child in us. Traveling from Zhangmu (Nepal-Tibet border) to the Tibetan capital - Lhasa you can see road workers all along the Friendship Highway. The Chinese industrialization has affected Tibet a great deal. But despite the Chinese government's attempts to settle Chinese population across the Tibetan Plateau, the Roof of the World still remains a place where only the Tibetans can survive its harsh climate conditions. A Tibetan boy holding the hand of his father who works on the road construction, Tibet. (Photo and caption by Aanand Joshi)
ಹೆಂಡತಿ ಮಾತ್ರ ಸಮಯ ಸಿಕ್ಕಾಗಲೆಲ್ಲ, "ಸಿರಿ ಬರುವುದು ಊರಿನ ಹಿತಕ್ಕಾಗಿ, ಅಗತ್ಯವಿರುವವರಿಗೆ ಸಹಾಯ ಮಾಡಲಿಕ್ಕಾಗಿ. ನಾವು ಈ ಐಶ್ವರ್ಯದ ಕಾವಲುಗಾರರು ಮಾತ್ರ. ಊರಿನಲ್ಲಿ ತುತ್ತಿಗಾಗಿ ಪರದಾಡುವವರಿಗೆ ಅನ್ನ ಹಾಕಿದರೆ ಪರಮಾತ್ಮನಿಗೆ ತೃಪ್ತಿಯಾಗುತ್ತದೆ. ಕೂಡಿಟ್ಟು ಸತ್ತರೆ ರೌರವ ನರಕ ಪ್ರಾಪ್ತಿ ಖಂಡಿತ" ಎಂದೆಲ್ಲ ಹಿತ ಹೇಳುವ ಪ್ರಯತ್ನ ಮಾಡುತ್ತಿದ್ದಳು. ಎಲ್ಲವೂ ಬೊರ್ಕಲ್ಲ ಮೇಲೆ ಜಡಿ ಮಳೆ ಸುರಿದಂತಾಗುತ್ತಿತ್ತು.

ಒಂದು ದಿನ ಆ ಊರಿಗೆ ಪ್ರಸಿದ್ಧ ಜ್ಯೋತಿಷಿಗಳೊಬ್ಬರು ಬರುತ್ತಿದ್ದಾರೆಂದೂ ಅವರೆಂದದ್ದು ಎಂದೂ ಸುಳ್ಳಾಗಿಲ್ಲ ಎಂದೂ ಯಾರಿಂದಲೂ ಕಾಸು ಸ್ವೀಕರಿಸದೇ ಭವಿಷ್ಯ ಹೇಳುತ್ತಾರೆಂದೂ ತಿಳಿಯಿತು. ನಮ್ಮ ಜಿಪುಣನ ಕಿವಿಗೂ ಇದು ಬಿಟ್ಟು. ಕಾಸು ಕೀಳದೇ ಮುಂದಾಗುವುದನ್ನು ಹೇಳುವ ಮೂರ್ಖ ಸಿಕ್ಕಿರುವಾಗ, ತನ್ನ ಬಗ್ಗೆ ಒಂದಿಷ್ಟು ಕೇಳಿ ತಿಳಿದುಕೊಳ್ಳಬೇಕೆನಿಸಿತು. ಸರಿ, ಇವನೂ ಜ್ಯೋತಿಷಿಯಿರುವಲ್ಲಿಗೆ ಹೋದ.

ಕವಡೆ ಉರುಳಿಸಿ, ಗುಣಿಸಿ, ಭಾಗಿಸಿ, ನೋಡಿದ ಜ್ಯೋತಿಷಿ, ಜಿಪುಣನನ್ನೇ ದೀರ್ಘವಾಗಿ ದಿಟ್ಟಿಸಿದ."ಹೇಳಲೋ ಬೇಡವೋ ಎಂದು ಯೋಚಿಸುತ್ತಿದ್ದೇನೆ. ನೀನು ಕಡು ಲೋಭಿ. ಕವಡೆ ಖರ್ಚು ಮಾಡುವವನಲ್ಲ. ಇದರಿಂದ ನಿನಗೆ ರೌರವ ನರಕ ಕಾದಿದೆ. ಅದೂ ಕೇವಲ ಆರು ತಿಂಗಳಲ್ಲಿ. ಆರು ತಿಂಗಳು ಕಳೆದು ಏಳನೆಯ ತಿಂಗಳ ಬೆಳಗನ್ನು ನೀನು ಕಾಣುವುದಿಲ್ಲನಿಞ್ನ ಸಾವು ಹಾಗೂ ನರಕವಾಸ ಖಚಿತ"

ಇವನ ಜೀವವೇ ಹಾರಿಹೋಯಿತು. ಇಷ್ಟು ಕಷ್ಟದಿಂದ ಕೂಡಿಟ್ಟ ಸಿರಿ ಯಾರದ್ದೋ ಪಾಲಾಗಿ, ಅವರು ತಿಂದುಂಡು ಮೋಜು ಮಾಡುವ ಕಲ್ಪನೆಯಿಂದಲೇ ಬೆವರತೊಡಗಿದ.
ಮತ್ತೆ ಇನ್ನೊಂದು ವಿಚಾರವೂ ಅವನ ತಲೆಗೆ ಬಂತು. ಜಿಪುಣ, ಹಿಮಟ ಇತ್ಯಾದಿ ಹೆಸರು ಕೇಳಿ ಹೀನಾಯಪಡುತ್ತಿದ್ದೆ. ಒಂದಿಷ್ಟು ದಾನ ಮಾಡಿ ಒಳ್ಳೆಯ ಹೆಸರು ಗಳಿಸಿದರೆ ಹೇಗೆ? ಹಾಗೆ ದಾನದಿಂದ ನರಕವಾಸ ತಪ್ಪಲೂ ಬಹುದಲ್ಲ ಎಂದು ಯೋಚಿಸಿದ. ಸರಿ ಎನಿಸಿತು. ಕೂಡಲೇ ತೀರಾ ಬಡವರನ್ನು ಒಂದುಗೂಡಿಸಿ ಅಕ್ಕಿ, ಬೇಳೆ, ಬಟ್ಟೆ, ಒಂದಿಷ್ಟು ದುಡ್ಡು ವಿತರಿಸಿದ. ಅವರು ಸಂತೋಷದಿಂದ ಇವನನ್ನು ದೀರ್ಘಕಾಲ ಬದುಕುವಂತೆ ಹರಸಿದರು. ಒಂದು ರೀತಿಯ ವಿಚಿತ್ರ ತೃಪ್ತಿ ಎನಿಸಿತು. ಅವರ ಹಾರೈಕೆ ಕೇಳಿ ಸಾವಿನ ಹೆದರಿಕೆ ಹಿಂದೆ ಸರಿದಂತೆನಿಸಿತು. ಮತ್ತೆ ಒಂದಿಷ್ಟು ದಾನ ಮಾಡಿದ. ಇದು ಮುಂದುವರಿಯುತ್ತಿದ್ದಂತೆ ಇವನ ಖ್ಯಾತಿ ಹರಡಿತು!
A Wrinkle in Time. Beauty is in the eye of the beholder. (Photo and caption by Aanand Joshi)


ಕೊಡುಗೈ ದೊರೆ, ದಾನಿ, ಆಧುನಿಕ ಕರ್ಣ ಎಂದರು ಮಂದಿ. ನೀಡುವದರಿಂದ ಉಂಟಾಗುವ ಸುಖವೇ ಒಂದು ರೀತಿಯ ಗೀಳಾಯಿತು. ವರುಷಗಳಿಂದ ಕೂಡಿಟ್ಟದ್ದು ಹೊರಗೆ ಬಂದು, ದೀನರ ಜೋಳಿಗೆ ಸೇರಿತು. ರೌರವ ನರಕದ ಹೆದರಿಕೆ ಕಳೆಯಿತು. ಇದರೊಂದಿಗೆ ಜ್ಯೋತಿಷಿ ಹೇಳಿದ ಸಾವಿನ ಗಡುವೂ ಕಳೆಯಿತು. ಯಮ ಬರಲಿಲ್ಲ. ಕತ್ತಿಗೆ ಕುಣಿಕೆ ಬೀಳಲಿಲ್ಲ. ಜಿಪುಣನಿಗೆ ಆಶ್ಚರ್ಯವಾಯಿತು. ಇದರೊಂದಿಗೆ ಒಂದು ರೀತಿಯ ಸಂದೇಹವೂ ಉಂಟಾಯಿತು. ಸಮಜಾಯಿಷಿ ಕೇಳೋಣ ಎಂದರೆ, ಜ್ಯೋತಿಷಿ ಉರೂ ಬಿಟ್ಟು ಕೆಲವು ಕಾಲವಾಗಿತ್ತು. ದನದ ಬಲದಿಂದ ಸಾವು ದೂರವಾಯಿತೇ? ನರಕವಾಸ ತಪ್ಪುತ್ತದೆ ಎಂದರೆ ಇದೇ ಏನು? ಅಥವಾ ಭೌತಿಕ, ಮಾನಸಿಕ ಜಿಪುಣತನದಿಂದ ಒಂದು ರೀತಿಯ ನರಕವಾಸ ತನ್ನದಾಗಿರಲ್ಲವೇ? ಅದು ದೂರವಾದುದಂತೂ ಖಂಡಿತ. ಮನೆಯಲ್ಲಿನ ವಾತಾವರಣವೂ ಸುಖ, ಸಂತೋಷದಿಂದ ಕೂಡಿದೆ. ಇದೇ ಸ್ವರ್ಗವಲ್ಲವೇ? ಎಂದೆಲ್ಲ ಯೋಚನೆಗಳು ಕಾಡಿದವು. ಇವೆಲ್ಲಕ್ಕಿಂತ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚಿದಾಗ ತನ್ನೊಳಗಾಗುವ ಸಂತೋಷ, ಧನ್ಯತಾಭಾವ ಗೀಳಾಗಿ ಬದಲಾಗಿತ್ತು.! ನಿಧಾನವಾಗಿ ಮೋಹ ಕಳೆಯಿತು. ಧನಕಾಮನೆಯ ಮೋಹ ಮಾತ್ರವಲ್ಲ, ಭವವೇ ನಿಸ್ಸಾರ, ಇದಕ್ಕಿಂತ ಹಿರಿದಾದುದೇನೋ ಇದೆ ಎನಿಸಿತು. ಕಡು ಜಿಪುಣ, ಬಿಡುಗಡೆಯ ಹಾದಿಯ ಪಥಿಕನಾಗಿದ್ದ.

ವೈರಾಗ್ಯದಲ್ಲೂ ಹಲವು ರೀತಿ. ಅಭಾವ ವೈರಾಗ್ಯ, ಒಂದು ವಸ್ತುವನ್ನು ಹೊಂದುವ ಸಮರ್ಥ್ಯವಿಲ್ಲದಿದ್ದಾಗ ಉಂಟಾಗುತ್ತದೆಯಂತೆ. ಯಾರಾದರೂ ಸತ್ತದ್ದನ್ನು ಕಾಣುವಾಗ "ಬದುಕೇ ಇಷ್ಟು, ಸಾಯುವಾಗ ಖಾಲಿ ಕೈಯಿಂದ ಹೋಗುವುದೇ ಸೈ" ಎನ್ನುವುದು ಸ್ಮಶಾನ ವೈರಾಗ್ಯ. ತಡೆಯಲಾರದ ಉದರಶೂಲೆ ರೋಗಗಳನ್ನು ಸಂಕೇತಿಸುತ್ತದೆ. ರೋಗಿ, " ಬದುಕು ಸಾಕು, ತಡೆಯಲಾರೆ ನೋವುಗಳನ್ನು, ಸಾವು ಬರಲಪ್ಪಾ" ಎನ್ನುವುದು ಉದಾರ ವೈರಾಗ್ಯ. ಅತ್ಯುತ್ತಮವಾದ ನಾಲ್ಕನೆಯ ರೂಪ ಸ್ವಭಾವ ವೈರಾಗ್ಯ. ಇದು ಸ್ವಭಾವವಾಗಿ ಬರದಿದ್ದರೂ ಸಾಧನೆಯಿಂದ, ಚಿಂತನೆಯಿಂದ ಬೆಳೆಸಿಕೊಳ್ಳಬಹುದು ಎನ್ನುತ್ತಾರೆ ಬಲ್ಲವರು.


CLICK HERE