Monday 24 October 2016

ನಾವ್ಯಾರು? ಭಾಗ-೨

ನಾನು, ನನ್ನ ಸಂಸಾರ, ನನ್ನ ಕೆಲಸ, ಸ್ಥಾನಮಾನ, ಸಿರಿ ಸಂಪತ್ತು, ನನ್ನ ಸಾಧನೆ ಇತ್ಯಾದಿ ನಾನಾ ರೂಪದ 'ನಾನು' ತನ್ನ ಕಾದಂಭ ಬಾಹುಗಳಿಂದ ನಮ್ಮನ್ನು ಕಬಳಿಸಿ ಹಾಕುತ್ತದೆ. ಗೊಂದಲದಲ್ಲಿ ನಿಜವಾದ 'ನಾನ್ಯಾರು' ಎಂಬ ಪ್ರಶ್ನೆ ಗಮನಕ್ಕೆ ಬರುವುದೇ ಇಲ್ಲ. ಈ ಬಗ್ಗೆ ತಿಳಿವಳಿಕೆ ಮುರುಟಿ ಹೋಗುತ್ತದೆ. ಹೇಗಿದೆ ಈ 'ನಾನೆಂಬ' ಅಹಂಕಾರ !!?

ಒಂದು ದೃಷ್ಟಾಂತ ಕಥೆ ಹೀಗಿದೆ :
aham brahasmi
Image have all standard licence belongs to Concerned person. Copying is purely offensive.
ಮರಕುಟಿಗ ಒಂದು ಮರದ ಕೊಂಬೆಯ ಮೇಲೆ ಕುಳಿತು ತನ್ನ ಕೊಕ್ಕಿನಿಂದ ಮರ ಕೊರೆಯುತ್ತಿತ್ತು. ಆ ಕ್ಷಣಕ್ಕೆ ಸಿಡಿಲು ಬಡಿದು ಕೊಂಬೆ ತುಂಡಾಗಿ ನೆಲಕ್ಕೆ ಬಿತ್ತು. ಮರಕುಟಿಗನ ಅಹಂಕಾರ ಪುಟಿದೆದ್ದಿತು. "ನಾನೆಂಥ ಬಲಶಾಲಿ ಎಂದು ಜಗತ್ತಿಗೇ ಗೊತ್ತಾಯಿತು. ಒಂದು ಕೊಕ್ಕಿನ ಹೊಡೆತಕ್ಕೆ ಕೊಂಬೆಯೇ ಮುರಿದು ಬಿತ್ತು ನೋಡು" ಎಂದು ಹಾಡಿಕೊಂಡು ಕಾಡು ತಿರುಗಿತು.

ಈ ಅಹಂಕಾರವೇ ಆಂತರ್ಯದ ಒಳಗಿಳಿಯುವಲ್ಲಿನ ಅಡ್ಡಿ. 

ಬದುಕಿನಲ್ಲಿ ಬರುವ ಸುಖ-ದುಃಖ, ಸ್ಥಾನಮಾನ, ಸಿರಿತನ, ಬಡತನ ಎಲ್ಲವೂ ಕಳೆದ ಜನುಮಗಳ ಕರ್ಮಶೇಷದಿಂದ ಪ್ರಾಪ್ತವಾಗುವಂತವು. ಅದನ್ನು ನಮ್ಮದೇ ಸಾಧನೆ ಎಂದುಕೊಳ್ಳುವುದು ಮಾಯೆ. ಈ ಮಾಯೆಯನ್ನು ಗುರುತಿಸಿ, ಅದರ ಆವರಣದಿಂದ ಹೊರಬರುವುದೇ ಬದುಕಿನ ಗುರಿ. ನಾವು ನಾವಲ್ಲ.
Image have all standard licence belongs to Concerned person. Copying is purely offensive.


ಹೀಗೆ ಬಳುವಳಿಯಾಗಿ ಬಂದ ವಂಶಾನುಗತ  ಸ್ವಭಾವಗಳು, ದೇಹಪ್ರಕೃತಿ, ಪರಿಸರ ಇದೆಲ್ಲದರೊಂದಿಗೆ ನಾವೇ ರೂಪಿಸಿ ಜೊತೆಗೆ ತಂದ 'ವಿಧಿ' ಎಂಬ ಜನುಮಾಂತರದ ಕರ್ಮಗಳು.

ಸಂತ ಮೊದಲು ಶ್ರೀಗಂಧ, ಬೆಳ್ಳಿ, ಚಿನ್ನ, ವಜ್ರ ವೈಢೂರ್ಯಗಳ ನಿಧಿ ತೋರಿಸುತ್ತಾನೆ. ಎಲ್ಲಿ ಮನಸ್ಸು ಚಿಂತನೆಗೆ ಹತ್ತಿತೋ ಕರ್ಮಪಾಕದ ಬಾವಿಯೊಳಗಿಳಿದು, ಜಯಿಸಿ ಹೊರಬರುವ ಹಾದಿ ತೋರಿಸುವ ಆಶ್ವಾಸನೆ ನೀಡುತ್ತಾನೆ.
ಮರಕುಟಿಗ ನವಿಲಾಗುತ್ತದೆ. ಬದುಕು ಭವಮುಕ್ತವಾಗುತ್ತದೆ.

No comments:

Post a Comment

CLICK HERE