Tuesday 25 October 2016

ಸತ್ಯ ದರ್ಶನ



ಬಿಂಬಸಾರ ರಾಜ ಮಗಧ ರಾಜ್ಯವನ್ನು ಆಳುತ್ತಿದ್ದ ಕಾಲವದು. ಆಗೊಮ್ಮೆ ಮಹಾವೀರ ಜೈನಮತ ಪ್ರತಿಪಾದಕ, ಆ ದಾರಿಯಾಗಿ ಪಯಣಿಸುತ್ತಿದ್ದ. ವಿಶ್ರಾಂತಿಗೆಂದು ಊರ ಹೊರಗಿನ ಮರಗಳ ತೋಪಿನಲ್ಲಿ ಬಿಡು ಬಿಟ್ಟಿದ್ದ. ಪ್ರತಿದಿನ ಬೆಳಿಗ್ಗೆ ಸಂಜೆ ಜನಸಾಗರ ಆ ತೋಪಿನೆಡೆಗೆ ಹೋಗುವುದನ್ನು ರಾಜ ಬಿಂಬಸಾರ ಗಮನಿಸಿದ. ಪ್ರತಿ ದಿನ ಹೀಗೆ ಮಂದಿ ಹೋಗುವುದೆಲ್ಲಿಗೆ ಎಂದು ವಿಚಾರಿಸಲಾಗಿ ಅವರು ಮಹಾಮುನಿಯ ದರ್ಶನಕ್ಕಾಗಿ ಹೋಗುತ್ತಾರೆ ಎಂದು ತಿಳಿದು ಬಂತು.




Image have all standard licence belongs to Concerned person. Copying is purely offensive.


ಬಿಂಬಸಾರನಿಗೆ ಆಶ್ಚರ್ಯವಾಯಿತು. ತಾನು ಈ ದೇಶದ ರಾಜ. ತಾನು ಹೇಳಿಕಳಿಸಿದರೆ, ಕೆಲವೊಮ್ಮೆ ಒತ್ತಾಯದಿಂದ ಈ ಅರಮನೆಯ ಆವರಣಕ್ಕೆ ಬರುತ್ತಾರೆ. ಇಲ್ಲದಿದ್ದರೆ ಯಾರೂ ಈ ಅಂಗಳದಲ್ಲಿ ಕಾಲಿಡುವುದಿಲ್ಲ. ಅಂಗಳ ಹೋಗಲಿ, ಅರಮನೆಯ ಮುಂದಿರುವ ರಸ್ತೆಯಲ್ಲಿ ನಡೆಯುವುದೂ ಇಲ್ಲ. ಅಂಥವರು ಈಗ ಹೀಗೆ ದಂಡು ಕಟ್ಟಿಕೊಂಡು ಯಾರನ್ನೋ ಕಾಣಲು ಹೋಗುವುದೆಂದರೇನು? ಏನಿದೆ ಅವನಲ್ಲಿ ಅಂಥ ವಿಶೇಷ? ಎಂದುಕೊಂಡು ಮಹಾವೀರ ಮುನಿಗಳ ಬಗ್ಗೆ ವಿಚಾರಿಸಲು ಶುರು ಮಾಡಿದ.ಕಡೆಗೆ ತಿಳಿದು ಬಂದದ್ದೇನೆಂದರೆ, ಮುನಿಗಳಿಗೆ ಸತ್ಯದರ್ಶನವಾಗಿದೆಯಂತೆ. ಆದುದರಿಂದ ಅವರು ಮಹ್ಹಾತ್ಮಾರಂತೆ. ಅವರ ದರುಶನದಿಂದ ಮಂಗಳವಾಗುವುದಂತೆ. ಆದುದರಿಂದ ಮಂದಿ ಹೀಗೆಲ್ಲ ಮುಗಿಬೀಳುತ್ತಾರಂತೆ. ಹೇಗಾದರೂ ಮಾಡಿ ಈ ಸತ್ಯವನ್ನು ತನ್ನದಗಿರಿಸಿಕೊಳ್ಳಬೇಕೆಂಬ ಯೋಚನೆ ಬಿಂಬಸಾರನ ತಲೆಗೆ ಹೊಕ್ಕಿತು. ಸುಲಭವಾದ ಉಪಾಯವೆಂದರೆ, ಇದ್ದವರಿಂದ ಅದನ್ನು ಕೊಂಡುಕೊಳ್ಳುವುದು.ಸರಿ, ತಟ್ಟೆ ತುಂಬಾ ಹೊನ್ನು ತುಂಬಿ ಮಂತ್ರಿಗಳಿಗೆ ಸತ್ಯ ತರುವಂತೆ ಹೇಳಿದ. ಹೋದ ಮಂತ್ರಿಗಳು ಬರಿಗೈಲಿ ಮರಳಿ ಬಂದರು. ಮುನಿಗಳು ಇವರತ್ತ ನೋಡಿ ನಸುನಕ್ಕರು ಮಾತ್ರವಂತೆ. ಸರಿ, ಸ್ವತಃ ಚಕ್ರವರ್ತಿಯೇ ಹೊರಟ ಸತ್ಯ ತರಲು. ಹಿಂದಿನಿಂದ ಗಡಿ ತುಂಬಿದ ಧನವೂ ಹೊರಟಿತು. ಎಲ್ಲವನ್ನೂ ಮುನಿಯ ಪದತಲದಲ್ಲಿಟ್ಟು ಬಿಂಬಸಾರ ತನ್ನ ಬೇಡಿಕೆ ಮುಂದಿಟ್ಟ. ಮುನಿಗಳು ಇವನನ್ನು ದಿಟ್ಟಿಸಿ ನೋಡಿ ನಸುನಕ್ಕರು ಅಷ್ಟೇ. ಸರಿ, ಬಿಂಬಸಾರನಿಗೆ ತನ್ನ ಉಡುಗೊರೆ ಕಡಿಮೆಯಾಗಿರಬೇಕು, ಆದಕ್ಕೆ ಇವರು ಒಪ್ಪುತ್ತಿಲ್ಲ ಎಂದುಕೊಂಡ. ಬಂದಿದ್ದ ಗಾಡಿ ಎರಡಾಯಿತು, ನಾಲ್ಕಾಯಿತು, ಹತ್ತಾಯಿತು.ಕಿಂಚಿತ್ ಬದಲಾವಣೆಯೂ ಮಹಾವೀರರ ಕಡೆಯಿಂದ ಬರಲಿಲ್ಲ. ಕಡೆಗೆ ಬಿಂಬಸಾರ ತಲೆಯ ಮೇಲಿನ ಕಿರೀಟ, ಪಟ್ಟದ ಕತ್ತಿ, ಮುದ್ರೆಯುಂಗುರಗಳನ್ನು ಅವರ ಮುಂದಿಟ್ಟು ಈಗಲಾದರೂ ಸತ್ಯ ದಯಪಾಲಿಸಿ ಎಂದ.
ಆಗ ಮುನಿಗಳು ಬಾಯಿಬಿಟ್ಟರು, "ರಾಜನ್, ಈ ಸತ್ಯವನ್ನು ಹುಡುಕುತ್ತಾ ನಾನು ಬದುಕಿನ ನಲವತ್ತು ವರ್ಷಗಳನ್ನು ಕಳೆದಿದ್ದೇನೆ. ನಾನೊಬ್ಬ ರಾಜಕುಮಾರನಾಗಿದ್ದೆ ಎಂಬುದು ನಿನಗೆ ತಿಳಿದಿರಬೇಕು. ಈ ಸತ್ಯಕ್ಕಾಗಿ ನಾನು ರಾಜ್ಯವನ್ನೂ ತ್ಯಜಿಸಿದೆದುದರಿಂದ ಆದುದರಿಂದ ಅದನ್ನು ಮಾರಲಾರೆ. ಮತ್ತೆ ದಾನ ಮಾಡಲಾರೆ. ಒಂದು ವಿಚಾರವಿದೆ. ನಿನ್ನ ರಾಜ್ಯದಲ್ಲಿ ಇಂಥ ಒಬ್ಬ ಮನುಷ್ಯನಿದ್ದಾನೆ. ಆವನಿಗೂ ಸತ್ಯದರ್ಶನವಾಗಿದೆ. ಬಹುಶಃ ನಿನಗೆ ಅವನಿಂದ ಉಪಯೋಗವಾಗಬಹುದು, ಹೋಗಿ ನೋಡು" ಎಂದರು.




Image have all standard licence belongs to Concerned person. Copying is purely offensive.



ಬಿಂಬಸಾರ 'ಆ' ಮನುಷ್ಯನನ್ನರಸಿ ಹೋದ. ಅವನೊಬ್ಬ ಹಾದಿ, ಬೀದಿಗಳ ಕಸ ಗುಡಿಸುವ ಬಡಮಾಲಿ. ಅರಮನೆಯ ಶುಭ್ರಮನೆಯಲ್ಲಿದ್ದ ಹೊನ್ನ ರಥ ಕೊಳಗೇರಿಯ ಮನೆಯ ಮುಂದೆ ನಿಂತೊಡನೆ ಗಡಬಡಿಸಿ 'ಆ' ಮನುಷ್ಯ ಎದ್ದು ಹೊರಗೆ ಬಂದ. ಮಹಾರಾಜರ ಮುಂದಿಟ್ಟ ಬೇಡಿಕೆ ಕೇಳಿದ, ಮತ್ತೆ ಹೇಳಿದ : "ಮಹಾಪ್ರಭೋ, ನಾನೋರ್ವ ಬಡ ಕೂಲಿ. ಸತ್ಯವಿದೆ ನನ್ನಲ್ಲಿಯವುದೇ ಪ್ರತಿಫಲ ಬೇಡ ನನಗೆ. ನಾನು ನನ್ನ ಸತ್ಯವನ್ನು ನಿಮಗೆ ನೀಡಬಲ್ಲೆ. ಆದರೆ, ನೀವದನ್ನು ತೆಗೆದುಕೊಳ್ಳಬಲ್ಲಿರಾ?. ಸ್ವೀಕರಿಸಲು ಪಕ್ವವಾಗಿದೆಯೇ ನಿಮ್ಮ ಬುದ್ಧಿ, ಮನಸ್ಸು, ದೇಹ? ನಾನು ಅದರ ಬಗ್ಗೆ ಮಾತನಾಡಿದರೆ, ನಿಮಗೆ ಕೇಳಿಸುವುದು ಕೇವಲ ಭಾಷೆಯ, ಪದಗಳ ಚಮತ್ಕಾರ ಮಾತ್ರ. ಸತ್ಯಗಳನ್ನು ಪದಗಳೊಳಗೆ ಸೇರಿಸಲಾಗದು. ಮತ್ತು ನಾನು ಕಂಡ, ಕಾಣುವ ಸತ್ಯ ನಿಮ್ಮ ಸತ್ಯವಾಗದು. ಸತ್ಯದರ್ಶನ ಒಂದು ವೈಯಕ್ತಿಕ ಆತ್ಮಾನುಭವ. ಪದಗಳೊಳಗೆ ಹೆಣೆಯುವ ಕಸರತ್ತಲ್ಲ" ಎಂದ ನಮ್ರತೆಯಿಂದ.ಇಂದು ಪದಗಳ ಕಸರತ್ತು ನಡೆಯುತ್ತಿದೆ. ಸಾಹಿತ್ಯಾತ್ಮಕ ಅಲಂಕಾರದೊಂದಿಗೆ ಮಠಾಧಿಪತಗಳ, ಆಧ್ಯಾತ್ಮಿಕ ನೇತಾರರೆಂದು ಬೀಗುವವರ, ಅದಕ್ಕೆಂದೇ ಅಸಂಖ್ಯ ಪುಸ್ತಕ, ಪತ್ರಿಕೆಗಳಿಂದ ಪುಂಖಾನುಪುಂಖವಾಗಿ ಹೊರಬರುತ್ತಿದೆ. ಜನರು ಇದೇ "ಸತ್ಯ" ಎಂದು ನಂಬುತ್ತಾರೆ. ಕೆಲವರು ನಂಬುವ ನಟನೆ ಮಾಡುತ್ತಾರೆ. ಏಕೆಂದರೆ, ಯಾವುದಾದರೂ ಒಂದು ಮತ, ಜಾತಿ, ಪಂಥ ಯಾ ಗುರುವಿನೊಂದಿಗೆ ತಮ್ಮನು ಬಹಿರಂಗವಾಗಿ ಗುರುತಿಸಿಕೊಳ್ಳುವುದು ಒಂದು ಪ್ರತಿಷ್ಠೆಯ ಸಂಗತಿ ಅದಕ್ಕೆ ಅಲ್ಲವೇ??

No comments:

Post a Comment

CLICK HERE