Sunday 8 March 2015

ನಿರ್ಭೀತ ಸ್ವಾತಂತ್ರ್ಯ ಸೇನಾನಿಗಳಿಗಿದೋ ನಮ್ಮ ನಮನ. ಭಾಗ-೧

ಬೌದ್ಧ ಗುರುಕುಲದಲ್ಲಿ ಮಧ್ಯಾವದಿ ಪರೀಕ್ಷೆ ನಡೆಯುತ್ತಿತ್ತು. ನಿರ್ಭಯತೆ ಸಂನ್ಯಾಸದ 

ಮೊದಲ ಹೆಜ್ಜೆ. ಭಯದ ಅಂತಿಮ ಯಾ ಮೂಲ ಸಾವಿನ ಭಯ. ಹಿಂಸ್ರ ಪಶುವಿಗೆ 

ಭಯಪಡುತ್ತೇವೆ. ಪಶುವಿನ ಭಯವಲ್ಲ.! ಪಶುವಿನಿಂದ ಉಂಟಾಗುವ ಸಾವಿನ 

ಭಯದಿಂದ ಭಯ ಉಂಟಾಗುತ್ತದೆ. ಹಾಗೇ ಕತ್ತಲ ಬಗ್ಗೆಯ ಭಯ. 


ಕತ್ತಲಲ್ಲಿ ಅಡಗಿರಬಹುದಾದ ಮರಣಕಾಕರಗಳಿಗೆ ಭಯಪಡುತ್ತೇವೆ. ಆಹಾರದ 

ಕೊರತೆ,ಅಪರಿಚಿತ ಜಾಗಗಳು ಇತ್ಯಾದಿಗಳ ಭಯದ ಹಿನ್ನಲೆಯೂ ಅಂತಿಮವಾಗಿ 

ಸಾವಿಗೆ ಕೊನೆಯಾಗುತ್ತದೆ. ಯಾರೂ ಈ ಮೄತ್ಯುವಿನ ಭಯದಿಂದ 

ಮುಕ್ತರಾಗುತ್ತಾರೋ ಅವರನ್ನು ಭಯ ಕಾಡದು. ಸಂನ್ಯಾಸಿಗೆ ದೇಹದ ಮೋಹ 


ಇರಬಾರದು. ಅಂದರೆ ಸಾವಿನ ಭಯ ಇರಬಾರದು. ಇದೇ ನಿಜವಾದ 'ಸಂ-ನ್ಯಾಸ'.

 "ದೇಹದಲ್ಲಿ ಇದ್ದರೂ ಇರದಂತೆ" ಇರುವವ ಸಂನ್ಯಾಸಿ.


ಸರಿ, ಮತ್ತೆ ಪರೀಕ್ಷೆಗೆ ಬರೋಣ. ತೀವ್ರತರದ ಆಮ್ಲ [Acid]  ತುಂಬಿದ ಕೊಳದ 

ಮೇಲೆ ಒಂದು ಉದ್ದದ ಹಲಗೆ ಹಾಸಲಾಗಿತ್ತು. ಒಂದೇ ಒಂದು ಅಡಿ ಅಗಲವಿದ್ದ ಆ 

ಮರದ ಮೇಲೆ ಹೆಜ್ಜೆ ಹಾಕುತ್ತಾ, ವಿದ್ಯಾರ್ಥಿ ಇಪ್ಪತ್ತು ಅಡಿ ಉದ್ದವಿದ್ದ ಕೊಳ 

ದಾಟಬೇಕಾಗಿತ್ತು. ಆಮ್ಲದ ಕೊಳದ ತಳಭಾಗದಲ್ಲಿ ಹಿಂದೆ ಕಾಲು ಜಾರಿ 


ಬಿದ್ದವರ ದೇಹದ ಮಾಂಸ, ಚರ್ಮ ಕರಗಿ ಹೋಗಿ, ಕೇವಲ ಮೂಳೆಗಳ 

ತುಂಡುಗಳು ಉಳಿದುಕೊಂಡ ಕುರುಹುಗಳು ಕಾಣಿಸುತ್ತಿದ್ದವು. ಆಮ್ಲದ ತೀವ್ರ ಘಾಟು

 ಮೂಗಿಗೆ ಕಿರಿಕಿರಿ ಮಾಡುತ್ತಿತ್ತು.ಈ ಕೊಳವನ್ನು ದಾಟಲು ಅಬ್ಯಾಸ ಬೇಕು. ಸಾಕಷ್ಟು

 ಅಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳಲ್ಲಿ 

ಪ್ರತಿಯೊಬ್ಬರೂ ಒಂದೊಂದು ತಿಂಗಳು ಅಭ್ಯಾಸವನ್ನು ಮಾಡಿದ 

ಅನಂತರ [ಈ ಅಭ್ಯಾಸ ನೀರು ತುಂಬಿದ ಕೊಳದ ಮೇಲೆ ಮಾಡುತ್ತಿದ್ದರು.] ತಾನು 

ಸುಸೂತ್ರವಾಗಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಬಲ್ಲೆ ಎನ್ನುವ ವಿಶ್ವಾಸ ಹೊಂದಿದ 

ಅನಂತರವೇ ಈ ಆಮ್ಲ ಕೊಳದ ಮೇಲಿನ ನಡಿಗೆಗೆ ಅವಕಾಶ ನೀಡುತ್ತಿದ್ದರು. 

ಏಕೆಂದರೆ, ಇದು ಪರೀಕ್ಷೆ ಮಾತ್ರವಲ್ಲ, ಜೀವನ ಮರಣದ ಪ್ರಶ್ನೆಯೂ 


ಆಗಿತ್ತು. ಅಕಸ್ಮಾತ್ ಕಾಲು ಜಾರಿ ಕೊಳಕ್ಕೆ ಬಿದ್ದನೆಂದರೆ, ಕ್ಷಣದಲ್ಲಿ ಸಾವು 

ಸಂಭವಿಸುತ್ತಿತ್ತು. ಆದುದರಿಂದ ಸಂಪೂರ್ಣ ವಿಶ್ವಾಸ ಇರುವವ, ಸ್ವತಃ 

ತಾವಾಗಿಯೇ ಪರೀಕ್ಷೆಗೆ ಒಡ್ಡಿಕೊಳ್ಳುವವರೆಗೆ ಅವನಿಗೆ ಅಭ್ಯಾಸ ನಡೆಸುವ 

ಅವಕಾಶ ನೀಡುತ್ತಿದ್ದರು.ಹೀಗೆ ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ತಯಾರಾಗಿದ್ದ. ಅಂದು 

ಅಂತಿಮವಾಗಿ ಅವನು ಆಮ್ಲ ತುಂಬಿದ ಕೊಳದ ಮೇಲೆ ನಡೆಯುವವನಿದ್ದ. 

ಆತ್ಮವಿಶ್ವಾಸದಿಂದ ಗುರುಗಳಿಗೆ ನಮಸ್ಕರಿಸಿ ಹಲಗೆಯ ಮೇಲೆ 

ಹೆಜ್ಜೆಯಿಟ್ಟು, ಅರ್ಧದಷ್ಟು ಮುಂದೆ ಬಂದವ ಅಕಸ್ಮಾತಾಗಿ ಕೆಳಗೆ ದೄಷ್ಠಿ ಹರಿಸಿದ. 

ಅಷ್ಟೇ! ಅವನ ಮುಖ ಬಿಳಿಚಿಕೊಂಡಿತು. 

ಬಾಯಿಯ ಪಸೆ ಆರಿತು. ಕೈ-ಕಾಲು ನಡುಗತೊಡಗಿದವು. 

ನೋಡುನೋಡುತ್ತಿರುವಂತೆ ದೇಹ ವಾಲಿತು. ಅವನು ಸಮತೋಲನ 

ಕಳೆದುಕೊಂಡು ದೊಪ್ಪನೇ ಕೊಳಕ್ಕೆ ಬಿದ್ದ.


ಮುಂದುವರೆಯುವುದು.......

No comments:

Post a Comment

CLICK HERE