Tuesday 10 March 2015

ನಿರ್ಭೀತ ಸ್ವಾತಂತ್ರ್ಯ ಸೇನಾನಿಗಳಿಗಿದೋ ನಮ್ಮ ನಮನ..... ಭಾಗ-೨


ಅವನ ಬಾಯಿಂದ ಚೀತ್ಕಾರವೊಂದು ಹೊರಬಿತ್ತು. ನೆರೆದವರು ಉಸಿರು 

ಬಿಗಿಹಿಡಿದಿದ್ದರು, ಹಾಹಾಕಾರ ಮಾಡಿದರು. ಅಷ್ಟೇ, ಯಾರಿಗೂ ಅವನನ್ನು ಮೇಲೆತ್ತುವ ಧೈರ್ಯವಿರಲಿಲ್ಲ.

ಆದರೆ, ಅಲ್ಲಿ ನಿಂತಿದ್ದ ಗುರುಗಳು, ಹಿಂದುಮುಂದೆ ನೋಡದೆ, ಕೊಳಕ್ಕೆ ಹಾರಿ ಅವನನ್ನು ಮೇಲೆತ್ತಿ ತಂದರು.

 ಈಗ ನೆರೆದವರು ದಂಗಾದರು. ಆಮ್ಲ ಗುರುಗಳು ಯಾ ವಿದ್ಯಾರ್ಥಿಯ ದೇಹಗಳ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ.


ಕನಿಷ್ಠ ಅವರ ಮೈಗಳ ಮೇಲೆ ಒಂದೇ ಒಂದು ಬೊಬ್ಬೆಯೂ ಬಂದಿರಲಿಲ್ಲ.!

ಅಚ್ಚರಿ ಎನಿಸುತ್ತದೆಯೇ? ಕಾರಣ ನೋಡಿ! ಅಸಲಿಗೆ ಅದು ಆಮ್ಲದ ಬದಲಿಗೆ 

ಸಾಮಾನ್ಯ ನೀರು ತುಂಬಿದ ಕೊಳವಾಗಿತ್ತು. ಆಮ್ಲ ಇದೆ ಎಂಬ ಸುದ್ದಿ 

ಹರಡಲಾಗಿತ್ತು.! ಅಲ್ಲಿಯವೆರೆಗೆ ಎಷ್ಟೋ ಕಡಿಮೆ ಅಗಲದ ಹಲಗೆಯ ಮೇಲೆ 

ನಿರ್ಭಯವಾಗಿ ನಡೆಯಲು ಅಭ್ಯಾಸ ಮಾಡಿದ ವಿದ್ಯಾರ್ಥಿ, ಕೊಳದ ತಳದಲ್ಲಿದ್ದ 

ಮೂಳೆಯ ತುಂಡುಗಳನ್ನು ಕಂಡ ತಕ್ಷಣ ತನ್ನ ಗತಿಯೂ ಹೀಗೇ ಆಗಬಹುದು ಎಂಬ 

ಭಯದಿಂದ ಸಮತೋಲನ ಕಳೆದುಕೊಂಡಿದ್ದ.ಯಾರ ಮನಸ್ಸಿನಲ್ಲಿ ಭಯವಿಲ್ಲವೋ,

 ಹಿಂಸಾ ಭಯವಿಲ್ಲವೋ ಅಲ್ಲಿ ವಿಶ್ವ ಪ್ರೇಮ ಮನೆ ಮಾಡುತ್ತದೆ. ಇಂಥವರನ್ನು 

ಯಾವ ಹಿಂಸ್ರ ಪ್ರಾಣಿಯೂ ಹಿಂಸಿಸದು, ಕೊಲ್ಲದು. ಈ ಪ್ರೇಮ ಭಾವವೇ 

"ಮೈತ್ರೀ". ಭಾರತ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನು ಗಮನಿಸಿದಾಗ ಈ 

ನಿರ್ಭಯತೆ ನಿಜ ಅರ್ಥದಲ್ಲಿ ತೆರೆದುಕೊಳ್ಳುತ್ತದೆ. ನಮಗೆ ತಿಳಿದಿರುವ ಹೆಸರುಗಳು 

ಕೆಲವೇ ಕೆಲವು. ವೀರ ಸಾವರ್ಕರ್, ಭಗತ್ ಸಿಂಗ್, ಸುಖದೇವ್, ಸುಭಾಷ್ 

ಚಂದ್ರಬೋಸ್.... ಹೀಗೆ ಕೆಲವರಷ್ಟೇ! ಆದರೆ ಹೆಸರು ತಿಳಿಯದ 

ಸಾವಿರಾರು ಮಂದಿ ಈ ನಿರ್ಭಯತೆಯನ್ನು ಸಾಧಿಸಿದರು. ಬ್ರಿಟಿಷರ ಭಂದನಕ್ಕೆ 

ಒಳಗಾದರೆ ಅನುಭವಿಸಬೇಕಾಗುವ ಅಮಾನುಷ ಹಿಂಸೆ. ಕಡೆಗೆ ಬರಬಹುದಾದ 

ಸಾವಿನ ಬಗೆಯ ಸಂಪೂರ್ಣ ಜ್ನಾನದಿಂದಲೇ ಅವರ ವಿರುದ್ಧ ಸಿಡಿದೆದ್ದು, ಹೋರಾಡಿದರು.

 

ಸತ್ತವರಿಗೆ. ಅಂಗಾಂಗ ಕಳೆದುಕೊಂಡವರಿಗೆ, ವಿದ್ಯಾಭ್ಯಾಸ ನಿಲ್ಲಿಸಿ ಭವಿಷ್ಯ 

ಕಳೆದುಕೊಂಡವರಿಗೆ, ಮನೆಮಾರು ತ್ಯಜಿಸಿದವರಿಗೆ ಲೆಕ್ಕವಿಲ್ಲ! ಇವರೆಲ್ಲರನ್ನೂ 

ಇಂಥ ಭಯಾನಕ ಬದುಕಿಗೆ ಪ್ರೇರೆಪಿಸಿದ್ದು ಅವರ ದೇಶಪ್ರೇಮ, ಸ್ವಾತಂತ್ರ್ಯದ 

ಅಸೀಮ ಕಾಮನೆ. ಇವುಗಳ ಮುಂದೆ ಭಯ ಹಿಮ್ಮೆಟ್ಟಿತು.!



ಚಿತ್ತಕ್ಕೆ ಮೂರು ದೋಷಗಳಿವೆಯಂತೆ. ಆವರಣ, ಮಲ ಮತ್ತು ವಿಕ್ಷೇಪ.

ಆವರಣ ಎಂದರೆ, ನಮ್ಮ ಮೂಲ ಸ್ವರೂಪದ ತಿಳಿವಿಲ್ಲದೆ ಇರುವಿಕೆ. ಇದೇ ಮಾಯೆ.

ಮಲ ಎಂದರೆ ಭೌತಿಕ ಭೋಗಗಳ ಕಾಮನೆ. ಅವುಗಳಿಗಾಗಿ ಏನನ್ನೂ ಮಾಡಲು 

ಹೇಸದಿರುವುದು.ವಿಕ್ಷೇಪವೆಂದರೆ,ಚಂಚಲತೆ. ಯಾವುದರಲ್ಲೂ 

ಸ್ಥಿರವಾಗಿರದಿರುವುದು. ಇವುಗಳ ಒಟ್ಟು ಪರಿಣಾಮವೇ 'ಭಯ".

No comments:

Post a Comment

CLICK HERE