Monday 20 October 2014

ಮನುಕುಲದ ಕಾಳಜಿಯೇ ಜೀವ ವಿಕಾಸದ ಕುರುಹು..ಭಾಗ-೨

ಈ ಗೌತಮ ಬುದ್ಧ ಹುಟ್ಟುವ ಸಾವಿರಾರು ವರ್ಷಗಳ ಹಿಂದೆಯೂ ಒಬ್ಬ ಗೌತಮ ಇದ್ದ.

 ಪಂಚಮಹಾ ಪತಿವ್ರತೆಯರಲ್ಲಿಒಬ್ಬಳಾದ ಅಹಲ್ಯೆಯ ಪತಿ ಗೌತಮ ಮಹರ್ಷಿ! 

ಒಮ್ಮೆ ಹಸುವೊಂದು ಗೌತಮ ಮಹರ್ಷಿಯ ಆಶ್ರಮ ಹೊಕ್ಕಿತು. ಅಲ್ಲಿ ಒಣಗಲು

 ಹಾಕಿದ ಅಕ್ಕಿಯನ್ನೆಲ್ಲಾ ತಿಂದುಬಿಟ್ಟಿತು. ಇದನ್ನು ಕಂಡ ಗೌತಮ ಮಹರ್ಷಿಯ 

ಮನಸ್ಸು ತಲ್ಲಣಿಸಿತು. ಏಕೆಂದರೆ, ನೀರಿನಕೊರತೆ ತೀವ್ರವಾಗಿದ್ದ ಆ ಪರಿಸರದಲ್ಲಿ 

ಒಂದೇ ಒಂದು ಬೆಲೆ ತೆಗೆಯುವ ಸಾಧ್ಯತೆಇತ್ತು. ಒಂದು ಸಲ ಬೆಳೆದ ಅಕ್ಕಿಯನ್ನು

ಎಚ್ಚರಿಕೆ ವಹಿಸಿ ಕಾಪಿಟ್ಟರೆ ವರ್ಷಪೂರ್ತಿ ಗುರುಕುಲವಾಸಿಗಳಿಗೆ ಊಟ ಸಿಗುತ್ತಿತ್ತು. 

ಈಗ ಹಸು ಆ ಅಕ್ಕಿಯನ್ನು ತಿಂದು ಹಾಕಿದೆ.ಇದೆ ಭಾವದಲ್ಲಿ ಗೌತಮ ಮಹರ್ಷಿ 

ಹಸುವನ್ನು 

ಅಟ್ಟಿಸಿಕೊಂಡು ಹೋದ. 

ಓದುತ್ತಿರುವ ಹಸುವಿಗೆ 

ಕಾಲು ಜಾರಿತು. 

ಹೊಂಡಕ್ಕೆ ಬಿದ್ದ ಅದರ 

ಪ್ರಾಣ ಹಾರಿ 

ಹೋಯಿತು.

ಈಗ ಗೌತಮ 

ಮಹರ್ಷಿಗಳ ಮನಸ್ಸು 

ಮತ್ತೊಂದು ಸಮಸ್ಯೆಗೆ 

ಸಿಕ್ಕಿಬಿಟ್ಟಿತು. ಅಬೋಧ 

ಹಸು, ತನಗೆ ದೊರಕಿದ

 ಆಹಾರವನ್ನುತಿಂದಿತ್ತು. ಅದರ ಹಿಂದಿರುವ ಸಮಸ್ಯೆಯ ಅರಿವು ಅದಕ್ಕಿರಲಿಲ್ಲ. 

ಹಾಗಿರುವಾಗ ತಾನದನ್ನು ಓಡಿಸಬಾರದಿತ್ತು. ತನ್ನಿಂದಲೇ

ಅದಕ್ಕೆ ಸಾವು ಬಂತು. ಒಂದು ಸಾವಿಗೆ ಕಾರಣನಾದ ತನಗೆ ಪಾಪ 

ಸುತ್ತಿಕೊಂಡಿತು. ಸಂಯಮಿಯಾಗಿರಬೇಕಾಗಿದ್ದ ತಾನು ಹೀಗೆ 

ವಿಚಲಿತನಾಗಬಾರದಿತ್ತು. ಇದಕ್ಕೆ ಕಾರಣವೇನು? ಎಂದು ಶಿವನನ್ನು ಕುರಿತು 

ತಪಸ್ಸನ್ನಾಚರಿಸಿದ. ಶಿವ ಪ್ರಸನ್ನನಾಗಿ, "ಶಿಷ್ಯವ್ರನ್ದದ ಮೇಲಿನ ನಿನ್ನ 

ಜವಾಬ್ದಾರಿಯ ತೀವ್ರತೆ ನಿನ್ನಿಂದ ಈ ಕೆಲಸ ಮಾಡಿಸಿತು. ಇದಕ್ಕೆ ಕಾರಣ ನೀರಿನ 

ಕೊರತೆ.ಸಾಕಷ್ಟು ನೀರಿದ್ದಿದ್ದರೆ ಬೇಕಾದಷ್ಟು ಬೆಳೆ ತೆಗೆಯಬಹುದಾಗಿತ್ತು. ಬೆಳೆ 

ಸಾಕಷ್ಟಿದ್ದರೆ ಹಸು ತಿಂದರೂ ಮಿಕ್ಕುತ್ತಿತ್ತು.ನಿನಗೆ ಸಮಸ್ಯೆ

 ಇರುತ್ತಿರಲಿಲ್ಲ. ನಿನ್ನ ಬದ್ಧತೆಯಿಂದ ಹೀಗಾಯಿತು" ಎಂದು ತಿಳಿ ಹೇಳಿ, ಅಲ್ಲಿ ಒಂದು

 ನದಿಯನ್ನು ಸ್ರಷ್ಟಿಸಿದನಂತೆ. ಅದಕ್ಕೆ ಗೋದಾವರಿ ಎಂದು ಹೆಸರಾಯಿತು. 

ಗೋದಾವರಿ ತೀರದ ಭತ್ತದ ಬೆಳೆ ಅತ್ಯುತ್ಕ್ರಷ್ಟ ಎನ್ನಲಾಗುತ್ತದೆ. ಹೀಗೆ ಮನುಕುಲದ

ಬಗೆಗಿನ ಕಾಳಜಿಯೇ ಜೀವದ ಅರಳುವಿಕೆಗೆ ಅಂತಿಮ ಸಂಕೇತ. ಭವದ 

ಸಮಸ್ತದಲ್ಲೂ ಭಗವಂತನನ್ನು ಕಾಣುವ ವಿಕಸಿತ ಸ್ವರೂಪ.

No comments:

Post a Comment

CLICK HERE