Thursday 10 August 2017

ಬದುಕಿನ ಸಾರ

ವೃದ್ಧ ಮುಲ್ಲಾ ನಾಸಿರುದ್ದೀನನನ್ನು ನಿದ್ರಾಹೀನತೆ ಕಾಡುತಿತ್ತು. ದಿನಗಟ್ಟಲೇ ನಿದ್ರೆ ಬಾರದೆ ನಲುಗುತ್ತಿದ್ದವನಿಗೆ ನಿದ್ರೆ ಬರಿಸಲು ಹಲವು ಪ್ರಯತ್ನಗಳಾದವು.

ಬಿಸಿನೀರಿನ ಸ್ನಾನ, ಅಂಗಮರ್ದನ, ತಲೆಗೆ ನಿದ್ರೆ ಬರುವ ಎಣ್ಣೆ ತಿಕ್ಕುವುದು ಎಲ್ಲವೂ ಮುಗಿಯಿತು. ನಿದ್ರೆ ಮಾತ್ರ ದೂರವೇ ಉಳಿಯಿತು.

ಕಡೆಗ್ಯಾರೋ ಸಮ್ಮೋಹಿನಿಯನ್ನು ಪ್ರಯೋಗಿಸುವಂತೆ ಸೂಚಿಸಿದರು.

ಸರಿ, ಹಿಪ್ನಾಟಿಸ್ಟನನ್ನು ಕರೆಸಲಾಯಿತು.

ಅರ್ಧ ಕತ್ತಲಾಗಿದ್ದ ಕೋಣೆತ ಆರಾಮಾಸನದ ಮೇಲೆ ಕುಳಿತ ಮುಲ್ಲಾನನ್ನು ಕಂಡು ವೈದ್ಯ, "ನೀವು ಆರಾಮಾಗಿ ಒರಿಗಿಕೊಂಡಿರಿ. ಮಾಡಬೇಕಾದುದನ್ನೆಲ್ಲಾ ನಾನು ಮಾಡುತ್ತೇನೆ. ನೀವೇನೂ ಚಿಂತೆ ತೆಗೆದುಕೊಳ್ಳದಿರಿ" ಎಂದ.

ಸರಿ, ಒರಿಗಿಕೊಂಡು ಕೈಕಾಲು ಸಡಿಲ ಬಿಟ್ಟ ಮುಲ್ಲಾ.
ವೈದ್ಯ ಪಾಕೆಟ್ ವಾಚಿಗೆ ನೂಲು ಕಟ್ಟಿ, ಮುಲ್ಲಾನ ಮುಖದ ಮುಂದೆ ಒಲಾಡಿಸತೊಡಗಿದ.

ಅದು ಅತ್ತಿಂದಐತ್ತ ಓಲಾಡುತ್ತಿರುವಂತೆ, "ನೋಡಿ, ನೀವೀಗ ಸಂಪೂರ್ಣವಾಗಿ ರಿಲ್ಯಾಕ್ಸ್ ಆಗಿರುವಿರಿ. ಮೈ ಮನಸ್ಸುಗಳೆರದಡೂ ಸಂಪೂರ್ಣ ಸಡಿಲವಾಗಿವೆ. ಈಗ ನೋಡಿ, ನಿಮಗೆ ನಿದ್ರೆ ಬರತೊಡಗಿದೆ. ಕಣ್ಣ ರೆಪ್ಪೆಗಳು ಭಾರವಾಗಿ ಮುಚ್ಚಿಕೊಳ್ಳತೊಡಗಿವೆ. ನಿಧಾನವಾಗಿ ನಿದ್ರೆಗಿಳಿಯುತ್ತಿರುವಿರಿ" ಎನ್ನತೊಡಗಿದ.

ಆಶ್ಚರ್ಯವೆಂಬಂತೆ ಮುಲ್ಲಾರ ಕಣ್ಣಿವೆಗಳು ಮುಚ್ಚಿಕೊಳ್ಳತೊಡಗಿದವು.
ಮೈ ಸಡಿಲು ಬಿದ್ದು, ತಲೆ ಒಂದು ಕಡೆ ವಾಲಿತು. ವಿಜಯದ ನಗೆ ಬೀರುತ್ತಾ ವೈದ್ಯ ಅಲ್ಲಿದ್ದವರನ್ನು ಹೊರಗೆ ಕಳಿಸಿದ. ಮುಲ್ಲಾನ ಮೊಮ್ಮಗ ಮಾತ್ರ ಉಳಿದುಕೊಂಡ. ವೈದ್ಯ ಕಳ್ಳ ಬೆಕ್ಕಿನಂತೆ ಹೆಜ್ಜೆ ಹಾಕುತ್ತಾ ಹೊರನಡೆಯುತ್ತಿರುವಂತೆ, ಮುಲ್ಲಾನ ಬಲಗಣ್ಣು ಕೊಂಚವೇ ತೆರೆದುಕೊಂಡಿತು. "ಹೋದನೇನು ಆ ಹುಚ್ಚ? ನಿದ್ರೆ ಮಾಡಿಸುತ್ತಾನಂತೆ. ಇಷ್ಟು ಹೊತ್ತು ವಟವಟ ಎನ್ನುತ್ತಲೇ ಇದ್ದ. ವಟವಟ ಕೇಳುತ್ತಾ, ವಟವಟದ ಮೇಲೆ ಧ್ಯಾನವಿರುಸುತ್ತಾ ನಿದ್ರೆ ಮಾಡೆಂದರೆ ಹೇಗೆ? ನಿದ್ರೆ ಎಂದರೇನು ಎಂದೇ ತಿಳಿಯದವ ನಿದ್ರಾ ವೈದ್ಯನಂತೆ!" ಎಂದ ಪಿಸುದನಿಯಲ್ಲಿ.


ಈ ಕೆಲವೇ ಮಾತುಗಳಲ್ಲಿ ಬದುಕಿನ ಸಾರ ಪೂರ್ತಿ ಇದೆ.


My Kartavyaa
Image have all standard licence belongs to Concerned person. Copying is purely offensive.


ಬದುಕನ್ನು ಕಟ್ಟುವ ಕಟ್ಟಿಸುವ ಧಾವಂತದಲ್ಲಿ ಬದುಕನ್ನು ಕಳೆದುಕೊಳ್ಳುತ್ತಿರುವವರು ನಾವು.
ಮಗು ಹುಟ್ಟಿದ ಕ್ಷಣದಿಂದ ಅದರ 'ವಿದ್ಯಾಭ್ಯಾಸ'ವೆಂಬ ಭ್ರಮೆಯ ವಿಷವರ್ತುಲದಲ್ಲಿ ಸಿಕ್ಕಿ ಬಿಳುತ್ತೇವೆ.
ಈ ಗಲಾಟೆಯಲ್ಲಿ ಅದರ ಸಹಜ ಪ್ರವೃತ್ತಿಗಳನ್ನು ಕೊಲ್ಲುತ್ತಾ, ಅದನ್ನು ಬಲವಂತದ ಬೆಳವಣಿಗೆಗೆ ಹಚ್ಚುತ್ತೇವೆ.
ಅದನ್ನು ಸಹಜ, ಸುಂದರ ಬಾಲ್ಯದಿಂದ ವಂಚಿತಗೊಳಿಸುತ್ತಾ, ಅದರಿಂದ ನಮಗೆ ಸಿಗಬಹುದಾದ, ಸುಖವನ್ನೂ ಕಳೆದುಕೊಳ್ಳುತ್ತೇವೆ.

ಇದೇ ಮುಂದುವರೆಯುತ್ತದೆ. ನಾವೇ ಸೃಷ್ಟಿಸಿಕೊಂಡ ಸುಖದ ಮರೀಚಿಕೆಯ ಹಿಂದೆ ಬಿದ್ದು, ಕೈಯಲ್ಲಿರುವ ಸುಖ ಅನುಭವಿಸುವುದನ್ನು ಕಳೆದುಕೊಳ್ಳುತ್ತೇವೆ.


No comments:

Post a Comment

CLICK HERE