Friday 26 January 2018

ಪರಿಪೂರ್ಣತೆ

ಅರುಣಾಚಲದ ಸಂತ ರಮಣಮಹರ್ಷಿಗಳನ್ನು ದ್ವೇಷಿಸುವ ಒಂದು ಗುಂಪು ಇತ್ತು. ಹೇಗಾದರೂ ಅವರ ತೇಜೋವಧೆ ಮಾಡಬೇಕೆಂದು ಕಾಯುತ್ತಿತ್ತು. ರಮಣರು ಪ್ರತಿದಿನ ಬೆಳಿಗ್ಗೆ ದೇವರನ್ನು ಕಾಣಲು ಹೋಗುತ್ತಾರೆ ಎಂಬ ವದಂತಿ ಇವರ ಕಿವಿಗೆ ಬಿತ್ತು. ದೇವರನ್ನು ಕಾಣಲು ಹೋಗುವುದು ಎಂದರೇನು? ಅವನೇನು ಸಶರೀರಿಯಾಗಿ ಬಂದಿವರ ಮುಂದೆ ನಿಲ್ಲುವನೇನು? ಇದೆಲ್ಲ ಮಂದಿಯ ಕಣ್ಣಿಗೆ ಧೂಳೆರಚಲು ಮಾಡಿದ ಕುತಂತ್ರ. ಹೇಗಾದರೂ ರಮಣರನ್ನು ಇದರಲ್ಲಿ ಸಿಕ್ಕಿ ಹಾಕಿಸಬೇಕು ಎಂಬೆಲ್ಲ ಯೋಚನೆ ಹಾಕಿಕೊಂಡು ರಮಣರಲ್ಲಿಗೆ ಬಂತು ಈ ಗುಂಪು.

"ಸ್ವಾಮೀ, ತಾವು ಪ್ರತಿದಿನ ಭಗವಂತನನ್ನು ಕಾಣಲು ಹೋಗುತ್ತೀರಂತೆ. ಮೂರು ಮೂರು ಗಂಟೆ ಅವರೊಂದಿಗೆ ಕಳೆಯುತ್ತೀರಂತೆ. ಎಲ್ಲರೂ ಕುರಿಗಳಲ್ಲ. ನೀವು ಹೀಗೆಲ್ಲ ಸುಳ್ಳು ವದಂತಿ ಹಬ್ಬಿಸಿ ಜನರನ್ನು ಮರುಳು ಮಾಡಿತ್ತೀರಿ ಎಂಬ ಸಂಶಯ ನಮಗಿದೆ. ಆದುದರಿಂದ ನಮಗೂ ನಿಮ್ಮ ದೇವರನ್ನು ನೋಡಬೆಕೆಂದಿದೆ. ಒಂದು ವೇಳೆ ಇದು ಬರೀ ಮಂದಿಯ ಊಹಾಪೋಹ ಎಂದಾದರೆ ನೀವೇ ಒಂದು ಸ್ಪಷ್ಟೀಕರಣ ನೀಡಿ ಇದು ಸುಳ್ಳು ಎಂದುಬಿಡಿ. ನಾವು ಹಾಗೇ ಜನರಿಗೆ ತಿಳಿಸಿಬಿಡುತ್ತೇವೆ" ಎಂದರು.


ರಮಣ ಮಹರ್ಷಿಗಳು ಒಂದು ಮುಗುಳುನಗೆಯೊಂದಿಗೆ ಸ್ಪಷ್ಟವಾಗಿ ಉತ್ತರಿಸಿದರು. " ನೀವು ಕೇಳಿದ ಸುದ್ದಿ ನೂರಕ್ಕೆ ನೂರರಷ್ಟು ಸತ್ಯ. ನಾನು ಪ್ರತಿದಿನ ಭಗವಂತನನ್ನು ಕಾಣಲು ಹೋಗುತ್ತೇನೆ. ಅವನು ನನ್ನ ಸೇವೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ನಾಳೆ ಬೆಳಿಗ್ಗೆ ನೀವು ನನ್ನೊಂದಿಗೆ ಬಂದರೆ ನಾನು ನಿಮಗೆ ನನ್ನ ದೇವರನ್ನು ತೋರಿಸಬಲ್ಲೆ"

ಕುತಂತ್ರ ಮಾಡಬಂದವರಿಗೂ ಗೊಂದಲ ಎನಿಸಿತು. ಯಾವುದೇ ಉದ್ವೇಗಕ್ಕೆ ಒಳಗಾಗದೇ, ಸ್ಪಷ್ಟವಾಗಿ ರಮಣರು ಅವರನ್ನು ತಮ್ಮೊಂದಿಗೆ ಬರುವಂತೆ ಆಹ್ವಾನಿಸಿದ್ದರು. ಕೇವಲ ಸತ್ಯದಲ್ಲಿ ಸ್ಥಿತನಾದವನಿಗೆ ಮಾತ್ರ ಇಂಥ ನಿಖರತೆ, ಸ್ಪಷ್ಟತೆ ಇರುತ್ತವೆ. ರಾತ್ರಿ ಕಳೆದು ಹಗಲಾಯಿತು. ರಮಣರು, ಸತ್ಯ ಕಾಣಲು ಬಂದವರೊಂದಿಗೆ ಹೊರಟರು. ಕಾಡಿನ ಹಾದಿಯಲ್ಲಿ ಸುಮಾರು ಎರಡು ಮೈಲಿಗಳಷ್ಟು ನಡೆದ ಅನಂತರ ಒಂದು ಸಣ್ಣ ಗುಡಿಸಲು ಕಂಡಿತು.



"
www.kartavyaa.blogspot.in

Image may be subject to copyrights.


2captcha


ರಮಣರು ಒಂದು ಕ್ಷಣ ತಡೆದು "ದಯವಿಟ್ಟು ಶಾಂತರಾಗಿರಿ. ನನ್ನ ದೇವರಿಗೆ ತೊಂದರೆಯಾಗದಿರಲಿ" ಎಂದವರೇ ಗುಡಿಸಲು ಪ್ರವೇಶಿಸಿದರು. 


ಒಳಗೆ ಕುಷ್ಟ ರೋಗದಿಂದ ಕೈ,ಕಾಲುಗಳು ಕರಗಿಹೋದ ದಂಪತಿ ಇದ್ದರು. ಅವರ ವೃಣಗಳಿಂದ ಕೀವು,ರಕ್ತ ಸುರಿಯುತ್ತಿತ್ತು. ರಮಣರು ಅವರಿಗೆ ಸ್ನಾನ ಮಾಡಿಸಿದರು. ವೃಣಗಳನ್ನು ಶುಚಿಗೊಳಿಸಿ ಔಷಧಿ ಹಚ್ಚಿದರು. ಅಡುಗೆ ಮಾಡಿ ತಮ್ಮ ಕೈಯಿಂದ ಊಟ ಮಾಡಿಸಿದರು. ಮಿಕ್ಕಿದ್ದನ್ನು ಮುಚ್ಚಿಟ್ಟು, ಹೊರಗೆ ಬಂದರು. ನಡೆಯುತ್ತಿರುವುದನ್ನು ನೋಡುತ್ತಿರುವವರ ಕಣ್ಣುಗಳಿಂದ ನೀರು ಹರಿಯುತ್ತಿತ್ತು. ರಮಣರು ಬೇರಾವುದೇ ವಿವರಣೆ ನೀಡುವ ಅಗತ್ಯವಿರಲಿಲ್ಲ. ಸಂತರ ಕಾಲಿಗೆ ಬಿದ್ದು "ಭಗವಾನ್, ನೀವು ನಮ್ಮ ದೇವರನ್ನು ಕಂಡಿರುವಿರಂತೆ, ನಾವೂ ನಮ್ಮ ಈ ನಡೆದಾಡುವ ದೇವರನ್ನು ಕಂಡೆವು. ಅವನು ನಡೆವ ಹಾದಿಯನ್ನು ಆರಿಸಿಕೊಂಡಿದ್ದೇವೆ. ನಮ್ಮನ್ನು ಕ್ಷಮಿಸಿ ಎಂದು ಮಾತ್ರ ಬೇಡುತ್ತೇವೆ." ಎಂದರು


www.kartavyaa.blogspot.in

Image may be subject to copyrights.

ಇದು ಪರಿಪೂರ್ಣತೆಗೆ ಸಂದವರು ನಡೆವ ಪರಿ. ಅವರು ಎಂದೂ ತಾವು ಮಾಡುವ ಮಹತ್ಕಾರ್ಯಗಳ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಪ್ರತಿಯೊಂದು ಕ್ಷಣವೂ, ಪ್ರತಿಯೊಂದು ಚರಾಚರ ವಸ್ತುಗಳಲ್ಲೂ ಭಗವಂತನ, ವಿಶ್ವ ಚೈತನ್ಯದ ಸಾನಿಧ್ಯವನ್ನು, ಅಸ್ತಿತ್ವವನ್ನು ಕಾಣುತ್ತಾ ಅನುಭವಿಸುತ್ತಾ ಬದುಕು ಸವೆಸುವುದು ಸಂತರ ಲಕ್ಷಣ. ನರ ಬೇರೆ ಅಲ್ಲ ನಾರಾಯಣ ಬೇರೆ ಅಲ್ಲ.

Like us over here

No comments:

Post a Comment

CLICK HERE